ಜಾತಿಗಣತಿ ವರದಿ (caste census) ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಕೇಂದ್ರ ರಾಜ್ಯ ಖಾತೆ ಸಚುವ ವಿ.ಸೋಮಣ್ಣ (V somanna) ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯನವರು (Cm Siddaramaiah) ಒಳ್ಳೆಯ ರಾಜಕಾರಣಿ.ಅವರು ಅದೇ ಲೆವೆಲ್ ನಲ್ಲಿ ಇರಬೇಕು, ಅಲ್ಲಿಂದ ಕೆಳಗಿಳಿಯಬಾರದು ಎಂದಿದ್ದಾರೆ.

ಈ ವರದಿಗೆ ೧೦ ವರ್ಷ ಕಳೆದಿದೆ.ಈ ವರದಿ ಸಿದ್ಧಪಡಿಸುವ ಎಲ್ಲರಿಗೂ ಸ್ವಾರ್ಥ ತುಂಬಿ ಥುಳುಕಿತ್ತು.ಇದರಲ್ಲಿ ಯಾರಿಗೆ ತೊಂದರೆ ಅನ್ನೋದಕ್ಕಿಂತ ಹೆಚ್ಚಾಗಿ ಹಲವು ಗೊಂದಲ ಸೃಷ್ಟಿಯಾಗಿದೆ.ಹೀಗಾಗಿ ಇನ್ನಷ್ಟು ಗೊಂದಲ ಮಾಡಿಕೊಳ್ಳಬೇಡಿ.ಈ ವರದಿ ತಿರಸ್ಕಾರ ಮಾಡಿ ಎಂದಿದ್ದಾರೆ.
ಆ ಬಳಿಕ ಮತ್ತೊಮ್ಮೆ ಪಾರದರ್ಶಕವಾಗಿ ರೀ ಸರ್ವೆ ಮಾಡಿ.ನಿಮ್ಮ ಕಾಲದಲ್ಲೇ ಅನೌನ್ಸ್ ಮಾಡಿ ನೀವೇ ಕ್ರೆಡಿಟ್ ತಗೊಳ್ಳಿ.ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಮಾಡಬೇಡಿ.ಇಷ್ಟೆಲ್ಲಾ ಗೊಂದಲ ಇಟ್ಟುಕೊಂಡು ಇದನ್ನು ಜಾರಿ ಮಾಡಿದರೆ ಜೇನುಗೂಡಿಗೆ ಕೈ ಹಾಕಿದ ಹಾಗೆ ಆಗುತ್ತೆ ಎಂದಿದ್ದಾರೆ.

ಈ ವರದಿಯಿಂದ ಏನೂ ಪ್ರಪಂಚ ಮುಳುಗಿ ಹೋಗೋದಿಲ್ಲ.ಸಿಎಂ ಸಿದ್ದರಾಮಯ್ಯ ಅರಿವು ಉಳ್ಳವರಾಗಿ ಹೀಗೆ ಮಾಡಬೇಡಿ.ಒಂದೂವರೆ ವರ್ಷಗಳ ಕಾಲ ಸಮಯ ಕೊಟ್ಟು ಮತ್ತೊಮ್ಮೆ ಸರ್ವೆ ಮಾಡಿ.ಆಗ ದೇವರಾಜ ಅರಸು ತರ ನಿಮ್ಮನ್ನು ನೆನಪು ಮಾಡಿಕೊಳ್ತಿವಿ.ಅದನ್ನು ಬಿಟ್ಟು ಇರೋ ವರದಿ ಜಾರಿ ಮಾಡಿ ಖಳನಾಯಕರಾಗಬೇಡಿ ಎಂದು ಸೋಮಣ್ಣ ಸಲಹೆ ನೀಡಿದ್ದಾರೆ.