ಕೊಡಗಿನಲ್ಲಿ ನಿಷೇಧಾಜ್ಞೆ (ಸೆಕ್ಷನ್ 144) ಜಾರಿ ಮಾಡಿದ್ದು, ವಿರೋಧ ಪಕ್ಷದ ನಾಯಕ ನಾನದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮೊಟ್ಟೆ ಎಸೆದ ಪ್ರಕರಣ, ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ಸೇರಿ ಹಲವು ವಿಷಯಗಳ ಬಗ್ಗೆ ಮಾತಾಡಿದ ಅವರು, ಮಳೆ ಹಾನಿ ಪರಿಸ್ಥಿತಿ ನೋಡಲು ಹೋಗಿದ್ದೆ. ದಾರಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡಿದರು. ಒಂದು ಹತ್ತರಿಂದ ಹದಿನೈದು ಜನ ಇದ್ದರು. ಅಲ್ಲೂ ಕೂಡ ಪೊಲೀಸರು ಸುಮ್ಮನೆ ನಿಂತಿದ್ದರು. ಒಬ್ಬ ಬಂದು ನನ್ನ ಕಾರಿನ ಒಳಗಡೆ ಒಂದು ಭಿತ್ತಿ ಪತ್ರ ಹಾಕಿದರು.ಅವರನ್ನು ಪೊಲೀಸರು ಹಿಡಿಯುವುದಾಗಿ, ಬಂಧಿಸುವುದಾಗಲಿ ಮಾಡಲಿಲ್ಲ ಇದು ಕೊಡಗು ಪೊಲೀಸರ ನಿರ್ಲಕ್ಷ್ಯ ಸರಕಾರದ ಸಂಚು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮುಂದುವರೆದು, 2018ರಲ್ಲಿ ಅಧಿಕಾರ ಕಳೆದುಕೊಮಡ ಮೇಲೆ 2019ರಲ್ಲಿ ನಾನು ಕೊಡಗಿಗೆ ಹೋದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಕೊಡಗಿನ ಜನ ಒಳ್ಳೆಯರು. ನಾವು ಪ್ರತಿಭಟನೆ ಘೋಷಿಸಿದ್ದು ಕೂಡ ಜನರ ವಿರುದ್ಧವಲ್ಲ. ಸರಕಾರ, ಪೊಲೀಸ್ ಇಲಾಖೆ ವಿರುದ್ಧ ಎಂದು ಹೇಳಿದ್ದಾರೆ.
ನಾನು 26ಕ್ಕೆ ಕೊಡಗು ಚಲೋ ಘೋಷಣೆ ಮಾಡಿದ ಬಳಿಕ ಬಿಜೆಪಿ ಕೂಡ ಅಲ್ಲೇ ಜಾಗೃತಿ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ. ಇದು ಅವರ ಇಬ್ಬಂದಿತನ ತೋರಿಸುತ್ತದೆ. ನಮ್ಮ ಪ್ರತಿಭಟನೆಯನ್ನು ತಪ್ಪು ದಾರಿಗೆ ಎಳೆಯುಲು ಕುಟಿಲ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಡಿಸಿ, ಎಸ್ಪಿ ಸೆಕ್ಷನ್ 144 ಜಾರಿ ಮಾಡಿದ್ದಾರೆ.
ಜಿಲ್ಲಾಧಿಕಾರಿ, ಎಸ್ಪಿ ಆದೇಶವನ್ನು ನಾನು ಉಲ್ಲಂಘಿಸಬಹುದು ಆದರೆ, ನಾನು ವಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿಯಾಗಿ ನಾನು ಅದನ್ನು ಮೀರಿ ಪ್ರತಿಭಟನೆ ಮಾಡುವುದಿಲ್ಲ. ಇದು ಪಕ್ಷದ ಕಾರ್ಯಕ್ರಮವಾಗಿದೆ, ಹೀಗಾಗಿ ನಾನು ನನ್ನ ಸ್ನೇಹಿತರು ಮತ್ತು ಪಕ್ಷದ ಅಧ್ಯಕ್ಷರ ಜೊತೆಗೆ ಮಾತನಾಡ ಇದನ್ನು ಮುಂದೂಡೂವ ಎಂದು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.
ನಂಗೆ ಸವಾಲು ಹಾಕ್ತಾರೆ ಇವರು. ರೆಡ್ಡಿ ಬ್ರದರ್ಸ್ ಹೀಗೆ ಸವಾಲು ಹಾಕಿದ್ದಕ್ಕೆ ನಾನು ಪಾದಯಾತ್ರೆ ನಡೆಸಿದ್ದು. ನನಗೆ ಹೆದರಿಸಲು ಬರುತ್ತಾರೆ ಇವರು ಎಂದು ಗುಡುಗಿದ್ದಾರೆ.
ಆಗಸ್ಟ್ 26 ರಂದು ಕಾಂಗ್ರೆಸ್ ಪ್ರತಿಭಟನೆ ಮತ್ತು ಬಿಜೆಪಿಯಿಂದ ‘ಜನ ಜಾಗೃತಿ ಸಮ್ಮೇಳನ’ ಘೋಷಣೆಯಾಗಿತ್ತು. ಆದರೆ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 24 ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ರ ಸಂಜೆ 6 ರವರೆಗೆ ಸೆಕ್ಷನ್ 144 ಜಾರಿಯಿರಲಿದೆ. ಈ ಎರಡು ರಾಜಕೀಯ ಕಾರ್ಯಕ್ರಮ ರದ್ದಾಗಿದೆ.