• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಓಡೋಡಿ ಬಂದ ಡಿಕೆಶಿ, ಮದುವೆ ಊಟಕ್ಕೆ ಹೊರಟ ಬಿಜೆಪಿ ಶಾಸಕರು..

ಕೃಷ್ಣ ಮಣಿ by ಕೃಷ್ಣ ಮಣಿ
June 6, 2023
in Top Story, ಇದೀಗ, ಕರ್ನಾಟಕ, ರಾಜಕೀಯ
0
ಓಡೋಡಿ ಬಂದ ಡಿಕೆಶಿ, ಮದುವೆ ಊಟಕ್ಕೆ ಹೊರಟ ಬಿಜೆಪಿ ಶಾಸಕರು..
Share on WhatsAppShare on FacebookShare on Telegram

ಕೆಲಸಕ್ಕೆ ಹಿಂದೆ.. ಊಟಕ್ಕೆ ನಾ ಮುಂದೆ ಅನ್ನೋ ಮಾತನ್ನು ಗ್ರಾಮೀಣ ಭಾಗದಲ್ಲಿ ಸೋಮಾರಿ ಜನರಿಗೆ ಹೇಳುವುದುಂಟು. ಆದರೆ ಜನರ ಪ್ರತಿನಿಧಿ ಆಗಿರುವ ಶಾಸಕರು, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಕರೆದಿದ್ದ ಸಭೆಯಿಂದ ಎದ್ದು ನಡೆದಿದ್ದಾರೆ ಬಿಜೆಪಿ ನಾಯಕರು. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಸರಿಯಾದ ಸಮಯಕ್ಕೆ ಬಾರದಿರುವುದೂ ಒಂದು ಕಾರಣ ಇರಬಹುದು. ಆದರೆ ಬೆಂಗಳೂರು ಶಾಸಕರು, ಸಂಸದರ ಸಭೆಯಿಂದ ಎದ್ದು ಹೋಗಲು ಪ್ರಮುಖ ಕಾರಣ ಮದುವೆ ಊಟ. ಪರಿಸರ ದಿನಾಚರಣೆಯಲ್ಲಿ ಭಾಗಿಯಾಗಿದ್ದ ಡಿ.ಕೆ ಶಿವಕುಮಾರ್​, ಬೆಂಗಳೂರು ಶಾಸಕರು, ಸಂಸದರ ಸಭೆಗೆ ಓಡೋಡಿ ಬಂದಿದ್ದರು. ಆದರೆ ಬಿಜೆಪಿ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಆರ್ ವಿಶ್ವನಾಥ್, ಎಸ್.ಟಿ ಸೋಮಶೇಖರ್ ಸಭೆಯಿಂದ ಹೊರ ನಡೆದಿದ್ದು ಟೀಕೆಗೆ ಕಾರಣವಾಗಿದೆ.

ADVERTISEMENT

ಸರ್ಕಾರದ ಮೇಲೆ ಬಿಜೆಪಿ ಶಾಸಕರ ಕೋಪ-ತಾಪ

ಡಿ.ಕೆ ಶಿವಕುಮಾರ್​ ಕರೆದಿದ್ದ ಸಭೆಯಿಂದ ಎದ್ದು ಹೊರಡುವ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಚಿವ ಎಸ್​.ಟಿ ಸೋಮಶೇಖರ್, ಬೆಂಗಳೂರು ಅಭಿವೃದ್ಧಿ ಸಚಿವರು ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದರು. ಮಧ್ಯಾಹ್ನ 12 ಗಂಟೆ ಆದರೂ ಉಪಮುಖ್ಯಮಂತ್ರಿಗಳು ಬರಲಿಲ್ಲ, ನಮಗೂ ಬೇರೆ ಕೆಲಸ ಇರುತ್ತೆ, ನಾವು ಹೋಗ್ತಾ ಇದ್ದೀವಿ ಎಂದೇಳಿ ಜಾಗ ಖಾಲಿ ಮಾಡಿದ್ರು. ಇನ್ನು ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ ಮಾತನಾಡಿ, ಬೆಂಗಳೂರು ಅಭಿವೃದ್ಧಿ ಸಭೆ ಕರೆದು ಸ್ವತಃ ಡಿ.ಕೆ ಶಿವಕುಮಾರ್​ ಅವರೇ ಬಂದಿಲ್ಲ. ಇದೆನಾ ವಿರೋಧ ಪಕ್ಷದ ಶಾಸಕರನ್ನು ನಡೆಸಿಕೊಳ್ಳುವ ರೀತಿ ಎಂದು ಪ್ರಶ್ನಿಸಿದ್ರು. ಜೊತೆಗೆ ಏನು ಮಾಡಿದ್ರು ನಡೆಯುತ್ತೆ ಅನ್ನೋ ಭಾವನೆ ಎಂದು ಟೀಕಿಸಿ ಹೊರನಡೆದ್ರು. ನಾಲ್ವರು ಎದ್ದು ಹೋದರೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಇನ್ನುಳಿದ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

ಡಿಕೆಶಿ ಮೇಲಿನ ಕೋಪ, ಮದುವೆಗೆ ಹೊರಟ ಕೇಸರಿ ಟೀಂ..

ಬೆಂಗಳೂರು ಅಭಿವೃದ್ಧಿ ಸಭೆ ಕರೆದಿದ್ದ ಡಿ.ಕೆ ಶಿವಕುಮಾರ್​, ಸಭೆಗೆ ಬರುವುದು ತಡವಾಗಿದ್ದರಿಂದ ಕುಪಿತಗೊಂಡ ಬಿಜೆಪಿ ಶಾಸಕರು, ತಮ್ಮ ಕ್ಷೇತ್ರದ ಅಭಿವೃದ್ಧಿ ಸಭೆಗೆ ಗೈರು ಹಾಜರಾಗಿ, ಮದುವೆ ಸಮಾರಂಭಕ್ಕೆ ಹಾಜರಾಗಿದ್ದರು. ಬೆಳಗ್ಗೆ 11 ಗಂಟೆಗೆ ಸಭೆ ಕರೆದಿದ್ದ ಡಿ.ಕೆ ಶಿವಕುಮಾರ್​, 12 ಗಂಟೆ ಆದರೂ ಬಾರಲಿಲ್ಲ ಎಂದು ಬಿಜೆಪಿ ಐವರು ಶಾಸಕರಲ್ಲಿ ಅಶ್ವತ್ಥ ನಾರಾಯಣ ಮನೆ ದಾರಿ ಹಿಡಿದಿದ್ರೆ, ಇನ್ನುಳಿದ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಆರ್ ವಿಶ್ವನಾಥ್, ಎಸ್.ಟಿ ಸೋಮಶೇಖರ್ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರು. ಅಂದರೆ ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಕರೆದಿದ್ದ ಸಭೆಗಿಂತಲೂ ಮದುವೆಯೇ ಹೆಚ್ಚಾಯ್ತಾ ಅನ್ನೋ ಪ್ರಶ್ನೆ ಸೃಷ್ಟಿಯಾಗಿದೆ. ಬಹುತೇಕ ರಾಜಕಾರಣಿಗಳು ಮದುವೆ ಕಾರ್ಯಕ್ರಮಕ್ಕಿಂತ ರಿಸೆಪ್ಷನ್​​ಗಳಲ್ಲಿ ಭಾಗಿಯಾಗುತ್ತಾರೆ. ಆದರೆ ಡಿಕೆ ಶಿವಕುಮಾರ್​ ಬರಲಿಲ್ಲ ಅನ್ನೋ ಕೋಪವೋ..? ಅಥವಾ ಡಿ.ಕೆ ಶಿವಕುಮಾರ್​ ಮೇಲಿನ ವೈಯಕ್ತಿಕ ದ್ವೇಷದಿಂದ ಸಭೆ ಬಹಿಷ್ಕರಿಸಿದ್ರೋ ಅನ್ನೋ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಬಿಜೆಪಿ ಶಾಸಕರ ನಡೆಗೆ ಕಾಂಗ್ರೆಸ್​ ಶಾಸಕರ ಆಕ್ರೋಶ..

ಬೆಂಗಳೂರು ಶಾಸಕರ ಸಭೆ ಬಳಿಕ ಮಾತನಾಡಿದ ಶಿವಾಜಿನಗರ ಕಾಂಗ್ರೆಸ್​ ಶಾಸಕ ರಿಜ್ವಾನ್ ಅರ್ಷದ್, ಡಿಸಿಎಂ ಡಿ.ಕೆ ಶಿವಕುಮಾರ್​ ಸಭೆ ಕರೆದಿದ್ರು, ಕಳೆದ ಹಲವು ವರ್ಷದಿಂದ ಉಸ್ತುವಾರಿ ಸಚಿವರು ಇಲ್ಲದೆ ಅಭಿವೃದ್ಧಿ ಇರಲಿಲ್ಲ. ಬೆಂಗಳೂರು ಅಂತರಾಷ್ಟ್ರೀಯ ನಗರ ಅಂತ ಹೇಳಿ ಬದುಕು ನಡೆಸಲಾಗ್ತಿತ್ತು. ನಮ್ಮೆಲ್ಲರ ಬದ್ಧತೆ ಬೆಂಗಳೂರು ಅಭಿವೃದ್ಧಿಯೇ ಆಗಿದೆ. ನಮ್ಮೆಲ್ಲರ ಅನುಭವದಂತೆ ಜನರ ಧ್ವನಿಯಾಗಿ ಸರ್ಕಾರದ ನಿರ್ಧಾರ ಆಗಬೇಕು. ಬೆಂಗಳೂರು ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು ಅಂತ ಸಲಹೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಒಳ್ಳೆಯದಾಗಲಿದೆ ಅನ್ನೋ ಭಾವನೆ ಇದೆ. ಬಿಜೆಪಿ ಅವಧಿಯಲ್ಲಿ ಅನುದಾನ ಕೇವಲ ಬಿಜೆಪಿ ಶಾಸಕರಿರೋ ಕ್ಷೇತ್ರಕ್ಕೆ ಮಾತ್ರ ನೀಡಲಾಗಿತ್ತು. ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಆಗಬೇಕು. ಆದರೆ ಕೆಲವು ಬಿಜೆಪಿ ಶಾಸಕರು ಸಭೆ ಬಿಟ್ಟು ಹೋಗಿದ್ದು ಸರಿಯಲ್ಲ, ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ರೂ ಏನೂ ಮಾಡಲಿಲ್ಲ. ಡಿಸಿಎಂ ಸಾಹೇಬ್ರು ಬರುವುದು ಅರ್ಧ ಗಂಟೆ ತಡ ಆಗಿದ್ದು ಸಮಸ್ಯೆಯಿಲ್ಲ ಅಂದ್ರು.

ಬೆಂಗಳೂರು ಶಾಸಕರು, ಸಂಸದರ ಸಭೆಯಲ್ಲಿ ಡಿಕೆ ವಾರ್ನ್​..

ನೀವು ಯಾವುದೇ ರಾಜಕೀಯ ಪಕ್ಷದವರು ಆಗಿರಬಹುದು. ಒಟ್ಟಿಗೆ ಕೆಲಸ ಮಾಡೋಣ. ರಾಜಕೀಯ ಬಿಟ್ಟು ಅಭಿವೃದ್ಧಿ ಮಾಡೋಣ. ರಾಜಕೀಯವನ್ನೇ ಮಾಡ್ತೀನಿ ಅಂದ್ರೆ ನಾನು ಅದಕ್ಕೂ ರೆಡಿ. ಪ್ರೀತಿಗೂ ಸೈ, ಸಂಘರ್ಷಕ್ಕೂ ಸೈ. ನನಗೆ ದ್ವೇಷದ ರಾಜಕೀಯ ಬೇಕಿಲ್ಲ, ಅದರಲ್ಲಿ ನಂಬಿಕೆ ಇಲ್ಲ. ಬೆಂಗಳೂರು ಅಭಿವೃದ್ಧಿಗೆ ನಿಮ್ಮ ಸಂಪೂರ್ಣ ಸಹಕಾರ, ಸಲಹೆ ಅಗತ್ಯ. ಚುನಾವಣೆ ರಾಜಕೀಯ ಮುಗೀತು. ಈಗ ರಾಜಕೀಯ ಗೊಡವೆ ಬೇಡ. ರಾಜಕೀಯವಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸ ಏನೇ ಇರಬಹುದು. ಅದನ್ನು ಪಕ್ಕಕ್ಕಿಡೋಣ, ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ. ವಾಜಪೇಯಿ ಅವರು ಬಹಳ ಹಿಂದೆಯೇ ವಿಶ್ವಮಟ್ಟದಲ್ಲಿ ಬೆಂಗಳೂರು ನಗರದ ಘನತೆ, ಪ್ರಾಮುಖ್ಯತೆ ಬಗ್ಗೆ ಒತ್ತಿ ಹೇಳಿದ್ದರು. ಈಗಿನ ಪ್ರಧಾನಿಯವರೂ ಅದನ್ನು ಬಹಳ ಸಾರಿ ಹೇಳಿದ್ದಾರೆ. ಹೀಗಾಗಿ ನಾವು-ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ, ಹೆಚ್ಚಿಸೋಣ. ಬೆಂಗಳೂರು ನಾಗರಿಕರು ಮೂಲಸೌಕರ್ಯ ಸಮಸ್ಯೆಯಿಂದ ಬಹಳ ತೊಂದರೆ ಅನುಭವಿಸಿದ್ದಾರೆ. ಭ್ರಷ್ಟಾಚಾರದಿಂದ ನಲುಗಿ ಹೋಗಿದ್ದಾರೆ, ಸಮರ್ಪಕ ನಾಗರಿಕ ಸೌಕರ್ಯ ಪೂರೈಕೆ ನಮ್ಮೆಲ್ಲರ ಕರ್ತವ್ಯ ಎಂದು ಎಚ್ಚರಿಸಿದ್ದಾರೆ.

ಆದರೂ ಬೆಂಗಳೂರಿಗೆ ಸಚಿವರು ಯಾರು ಅನ್ನೋದನ್ನೇ ಹೇಳದೆ ಅಧಿಕಾರ ಮುಗಿಸಿದ ಬಿಜೆಪಿ, ಬಿಬಿಎಂಪಿ ಚುನಾವಣೆಯನ್ನೇ ನಡೆಸದೆ ಬಿಬಿಎಂಪಿ ಮೇಲೆ ತನ್ನಿಷ್ಟ ಬಂದಂತೆ ಅಧಿಕಾರ ನಡೆಸಿದ ಬಿಜೆಪಿ ನಾಯಕರು, ಸೋಮವಾರ ಬೆಂಗಳೂರು ಅಭಿವೃದ್ಧಿ ಸಚಿವರೇ ಕರೆದಿದ್ದ ಸಭೆಗೆ ಹೋಗಿ, ಸಚಿವರು ಬರುವುದು ತಡವಾಯ್ತು ಅನ್ನೋ ಕಾರಣಕ್ಕೆ ಎದ್ದು ಹೋಗಿದ್ದು ನಾಚಿಕೆಗೇಡಿನ ವಿಚಾರವೇ ಸರಿ. ಆದರೂ ನಾನು ದ್ವೇಷ ಸಾಧನೆ ಮಾಡಲ್ಲ, ಚುನಾವಣೆ ಮುಗಿದಿದೆ, ಇನ್ಮುಂದೆ ಕೆಲಸ ಮಾಡೋಣ, ಸಲಹೆ ಸೂಚನೆಗಳನ್ನು ಕೊಡಿ, ಬೆಂಗಳೂರು ಅಭಿವೃದ್ಧಿ ಮಾಡೋಣ ಎಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎನ್ನಬಹುದು.

ಕೃಷ್ಣಮಣಿ

Tags: All party meetingbjpkarnatakabjpmlaDCM DK ShivakumarDKShivakumarjdsmlaKPCC presidentlatestnews
Previous Post

ರೈಲು ಪ್ರಯಾಣಿಕರಿಗೆ ಬಹುಮುಖ್ಯ ಮಾಹಿತಿ : ಕೇವಲ 35 ಪೈಸೆಗೆ ಸಿಗುತ್ತೆ 10 ಲಕ್ಷ ರೂ.ಗಳ ಇನ್ಶೂರೆನ್ಸ್​ ಕವರೇಜ್​

Next Post

JDS ಪಕ್ಷ ಉಳಿಸಿಕೊಳ್ಳಲು ಕುಮಾರಸ್ವಾಮಿ ಪರದಾಟ.. ಆಶ್ರಯಕ್ಕಾಗಿ ಆಸೆಗಣ್ಣು..!

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
JDS ಪಕ್ಷ ಉಳಿಸಿಕೊಳ್ಳಲು ಕುಮಾರಸ್ವಾಮಿ ಪರದಾಟ.. ಆಶ್ರಯಕ್ಕಾಗಿ ಆಸೆಗಣ್ಣು..!

JDS ಪಕ್ಷ ಉಳಿಸಿಕೊಳ್ಳಲು ಕುಮಾರಸ್ವಾಮಿ ಪರದಾಟ.. ಆಶ್ರಯಕ್ಕಾಗಿ ಆಸೆಗಣ್ಣು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada