ಕುಮಾರಸ್ವಾಮಿ ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಒಕ್ಕಲಿಗರ ಕೋಟೆ ಹಳೇ ಮೈಸೂರು ಭಾಗದಲ್ಲಿ ಹಿನ್ನಡೆ ಅನುಭವಿಸಿ ಕೊತ ಕೊತ ಕುದಿಯುತ್ತಿರುವ ಕುಮಾರಸ್ವಾಮಿ ಏಕಾಏಕಿ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ಗೆ 19 ಶಾಸಕರ ಬೆಂಬಲ ಘೋಷಣೆ ಮಾಡಿದ್ದಾರೆ. ಒಂದು ವೇಳೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ. ವೇದಿಕೆ ಮೇಲೆ ಓಪನ್ ಆಫರ್ ಕೊಟ್ಟಿರುವ ಮಾತಿನ ಹಿಂದಿನ ಮರ್ಮ ಏನು ಅನ್ನೋ ಬಗ್ಗೆ ಚರ್ಚೆ ಮಾಡೋದಾದ್ರೆ..
ಜೆಡಿಎಸ್ ಶಾಸಕರನ್ನು ಸೆಳೆಯುವ ಕಸರತ್ತಿಗೆ ಬ್ರೇಕ್..
ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಸದೃಢ ಸರ್ಕಾರ ಇದ್ದರೂ ಆಪರೇಷನ್ ಹಸ್ತ ಮಾಡ್ತಿದ್ದಾರೆ. ಆಪರೇಷನ್ ಅಲ್ಲ ಕೋ-ಆಪರೇಷನ್ ಎನ್ನುತ್ತ ಎಲ್ಲಾ ಪಕ್ಷದವರನ್ನು ಸೆಳೆಯುವ ಅಸ್ತ್ರ ಹೂಡಿದ್ದಾರೆ. ಸೋತವರು ಅಷ್ಟೇ ಅಲ್ಲದೆ ಶಾಸಕರನ್ನೂ ಸೆಳೆಯುವ ಮುನ್ಸೂಚನೆಗಳು ಸಿಗುತ್ತಿವೆ. ಲೋಕಸಭಾ ಚುನಾವಣೆ ಆದ್ಮೇಲೆ ಏನಾಗಲಿ ಅನ್ನೋದನ್ನೂ ಮರೆತು ಪಕ್ಷಕ್ಕೆ ಬಂದವರನ್ನೆಲ್ಲಾ ಸೇರಿಸಿಕೊಳ್ಳುವ ಕೆಲಸ ಮಾಡ್ತಿದ್ದಾರೆ. ಇದೇ ರೀತಿ ಜೆಡಿಎಸ್ ಶಾಸಕರನ್ನೂ ಸೆಳೆಯಲು ಮುಂದಾಗಿದ್ದಾರೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇದೇ ಕಾರಣಕ್ಕೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವಿದಾದರೆ ನಾವೆಲ್ಲರೂ ಬೆಂಬಲ ಕೊಡ್ತೇವೆ. ಮೂರು ಜನರು ಬರ್ತಾರೆ ಆರು ಜನರು ಬರ್ತಾರೆ ಅನ್ನೋದು ಬೇಡ. ಎಲ್ಲರೂ ಬೆಂಬಲಿಸ್ತೀವಿ ಅಂದಿದ್ದಾರೆ. ಈ ಮೂಲಕ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ್ದಾರೆ.
ಒಕ್ಕಲಿಗ ಶಾಸಕರನ್ನು ಸೆಳೆಯದಂತೆ ಕುಮಾರಸ್ವಾಮಿ ಅಸ್ತ್ರ..
ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್ನ ಒಕ್ಕಲಿಗ ನಾಯಕರನ್ನ ಡಿ.ಕೆ ಶಿವಕುಮಾರ್ ಸೆಳೆಯುವ ಮುನ್ಸೂಚನೆ ಸಿಕ್ಕಿದೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಸೆಳೆದರೆ ಚುನಾವಣಾ ಅಸ್ತ್ರವಾಗಿ ಬಳಕೆ ಆಗಲಿದೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಿದ್ದರೆ ನಾವೆಲ್ಲಾ 19 ಜನರೂ ಸಪೋರ್ಟ್ ಮಾಡ್ತೇವೆ ಅಂತಾ ಅಧಿಕೃತವಾಗಿ ಘೋಷಿಸಲಾಯಿತು. ಆದರೂ ನಮ್ಮ ಪಕ್ಷದ ನಾಯನ್ನು ಸೆಳೆದಿದ್ದಾರೆ. ಅಂದರೆ ನಾವು ಬೆಂಬಲ ಕೊಡ್ತೇವೆ ಅಂತಾ ಹೇಳಿದ್ರು ಜೆಡಿಎಸ್ ಪಕ್ಷವನ್ನು ಮುಗಿಸುವ ಹುನ್ನಾರ ಎಂದು ಒಕ್ಕಲಿಗರ ಕೋಟೆಯಲ್ಲಿ ಮತ ಸೆಳೆಯುವ ಲೆಕ್ಕಾಚಾರದ ಮಾತು ಆಗಿರಬಹುದು.
![](https://pratidhvani.com/wp-content/uploads/2023/11/rayan_171023_HDK1.jpg)
ಆಸೆಯನ್ನು ಬಿತ್ತಿ ಫಸಲನ್ನು ಪಡೆಯುವ ಲೆಕ್ಕಾಚಾರ..
ಈಗಾಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ಆರಂಭ ಆಗಿದೆ. ಆದರೆ ಹೈಕಮಾಂಡ್ ನಾಯಕರು ಕಸರತ್ತನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದೇ ಆದರೆ ಜೆಡಿಎಸ್ ಬೆಂಬಲ ಅಗತ್ಯವಿದ್ದರೆ ಬೆಂಬಲಿಸುವುದರಲ್ಲಿ ನಷ್ಟವೇನೂ ಇಲ್ಲ. ಒಕ್ಕಲಿಗ ನಾಯಕ ಮುಖ್ಯಮಂತ್ರಿ ಆಗುವುದಾದರೆ ಆಗಲಿ. ಬೆಂಬಲಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದರೆ ಒಕ್ಕಲಿಗರ ಮನಸ್ಸನ್ನೂ ಗೆಲ್ಲಬಹುದು ಅನ್ನೋ ಉದ್ದೇಶದಿಂದಲೂ ಹೇಳಿರುವ ಸಾಧ್ಯತೆಗಳಿವೆ. ಸಿದ್ದರಾಮಯ್ಯ ಬಣ ಏನಾದರೂ ಕೈ ಕೊಟ್ಟು ಹೋಗುವ ಸಂಧರ್ಭ ಬಂದರೆ ಜೆಡಿಎಸ್ ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸಲಿದೆ ಅನ್ನೋದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಅಂತಾನೂ ಹೇಳಬಹುದು