ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ವಿಚಾರಕ್ಕೆ ಸಂಬಂಧ ಪಟ್ಟಂತೆ ಅಮಾಯಕರ ಬಿಡುಗಡೆಗೊಳಿಸಲು ಸರ್ಕಾರ ನಿರ್ಧಾರ ಮಾಡಿರವ ವಿಚಾರಕ್ಕೆ ಸಂಬಂಧ ಪಟ್ಟಂತೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಗರು ಆಕ್ರೋಶವನ್ನ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಟ್ವಿಟ್ ಬಸನಗೌಡ್ ಪಾಟೀಲ್ ಯತ್ನಾಳ್,
“ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಗಳಲ್ಲಿ ಬಂಧಿತರಾಗಿರುವ ‘ಅಮಾಯಕ’ ರನ್ನು ಬಿಡುಗಡೆಗೊಳಿಸಲು ಉಪ ಸಮಿತಿಯನ್ನು ರಚಿಸಿ ಅವರನ್ನು ಬಂಧ ಮುಕ್ತ ಮಾಡುವ ಉತ್ಸಾಹ, ಉತ್ಸುಕತೆ, ಉಮೇದು ಬಾಂಗ್ಲಾ ನುಸುಳುಕೋರರನ್ನು ಹತ್ತಿಕ್ಕಲು ತೋರದೆ ಇರುವುದು ಇವರ ಆದ್ಯತೆಗಳೇನು ಎಂದು ಗೊತ್ತಾಗುತ್ತದೆ.”
“ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ ಗಲಭೆ ‘Terror Act’ ಎಂದು ಮಾನ್ಯ ಉಚ್ಚ ನ್ಯಾಯಾಲಯವೇ ಹೇಳಿರುವಾಗ, ಸರ್ಕಾರ ರಾಜ್ಯದ ಆಂತರಿಕ ಭದ್ರತೆ, ನುಸುಳುಕೋರರ ಪತ್ತೆ, ಅಕ್ರಮ ಬಾಂಗ್ಲಾ ವಲಸಿಗರ ಗಡಿಪಾರು, ಬ್ಯಾಂಕ್ ಅವ್ಯವಹಾರಗಳ ತನಿಖೆಗಳನ್ನು ಚುರುಕು ಮಾಡುವ ಬದಲಾಗಿ ದೇಶ ವಿರೋಧಿಗಳ ಪರವಾಗಿ ನಿಂತು, ಸಂಪುಟದಲ್ಲೂ ಇದನ್ನು ಅನುಮೋದಿಸಿಕೊಂಡು ದೇಶ ದ್ರೋಹಿಗಳ ಭದ್ರತೆಗೆ ನಿಲ್ಲುತ್ತಿರುವುದು ಅಧಿಕಾರದ ದುರುಪಯೋಗ, ಅಲ್ಪ ಸಂಖ್ಯಾತರ ಓಲೈಕೆ ಹಾಗೂ ರಾಜ್ಯದ ಜನರಿಗೆ ಬಗೆದ ಅನ್ಯಾಯ.” ಎಂದು ಟ್ವಿಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.
ಒಟ್ಟಾರೆಯಾಗಿ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಅವರ ಟ್ವಿಟ್ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದ್ದುಇದೀಗ ಅವರ ಟ್ವಿಟ್ಗೆ ಹಲವು ಪರ ವಿರೋಧದ ಕಮೆಂಟ್ಗಳು ಕೂಡ ಬರೋದಕ್ಕೆ ಪ್ರಾರಂಭವಾಗಿದೆ.