ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ (Renukaswamy murder case) ಗೆ ಸಂಬಂಧಪಟ್ಟಂತೆ, ಕೊಲೆ ಬಳಿಕ ಡೆವಿಲ್ (Devil) ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ (Actor darshan) ಭಾಗಿಯಾಗಿದ್ದರು. ಈ ಸಲುವಾಗಿ ಪೊಲೀಸರು ಮಿಲನ ಪ್ರಕಾಶ್ (Milana prakash) ರನ್ನ ವಿಚಾರಣೆ ನಡೆಸಿದ್ದಾರೆ.
![](https://pratidhvani.com/wp-content/uploads/2024/07/IMG_8594-1.jpeg)
ಈ ಬಗ್ಗೆ ಮಾಹಿತಿ ಕಲೆಹಾಕಲು ಮಿಲನ ಪ್ರಕಾಶ್ ರನ್ನ ಕರೆಸಿದ್ದ ಪೊಲೀಸರು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ.
ಯಾವಾಗಿನಿಂದ ಚಿತ್ರೀಕರಣ ಆರಂಭ ಮಾಡಿದ್ರಿ, ಯಾವಾಗ ಸ್ಥಗಿತವಾಗಿತ್ತು, ಕೊಲೆ ನಡೆದ ನಂತರ ದರ್ಶನ್ ನಿಮ್ಮ ಬಳಿ ಮಾತನಾಡಿದ್ರಾ…? ಪ್ರಕರಣಕ್ಕೂ ಮುನ್ನ ಕೊನೆಯ ಬಾರಿ ದರ್ಶನ್ ರನ್ನು ಭೇಟಿಯಾಗಿದ್ದು ಯಾವಾಗ..? ಡೆವಿಲ್ ಚಿತ್ರಕ್ಕೆ ಸಂಬಂಧಪಟ್ಟಂತೆ ದರ್ಶನ್ ಗೆ ಹಣ ನೀಡಿದ್ರಾ…?ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಸದ್ಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿರುವ ನಿರ್ದೇಶಕ ಮಿಲನ ಪ್ರಕಾಶ್ ವಿಚಾರಣೆ ಮುಗಿಸಿ ಅಲ್ಲಿಂದ ಹೊರಟಿದ್ದಾರೆ. ಆದ್ರೆ ಈ ಬಗ್ಗೆ ಮಾಧ್ಯಮಗಳಿಗೆ ಏನನ್ನು ಪ್ರತಿಕ್ರಿಯಿಸದೇ ಮೌನವಾಗಿ ತೆರಳಿದ್ದಾರೆ.