ಡಿಸಿಎಂ ಡಿಕೆ ಶಿವಕುಮಾರ್(Dk shivakumar ) ವಿರುದ್ಧ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು (HD Devegowda ) ಹೊಸ ಬಾಂಬ್ ಸಿಡಿಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕತ್ವದ ವಿಚಾರವಾಗಿ ದಳಪತಿಗಳು ಮತ್ತು ಡಿಕೆ ಶಿವಕುಮಾರ್ ನಡುವೆ ಮಾತಿನ ಸಮರ ನಡೆಯುತ್ತಿರುವ ಬೆನ್ನೆಲೆ ದೇವೇಗೌಡರು ಈ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆ ಶಿವಕುಮಾರ್ (DI SHIVAKUMAR) ಆಸ್ತಿ ಗಳಿಕೆ ಮಾಡಿದ್ದು ಹೇಗೆ ಎಂಬುದರ ಬಗ್ಗೆ ಮಾತನಾಡಿದ ಎಚ್ ಡಿ ದೇವೇಗೌಡರು 9 ವರ್ಷದ ಮಗುವನ್ನ ಕಿಡ್ನಾಪ್ ಮಾಡಿ ಅವರ ತಂದೆ ತಾಯಿಯಿಂದ ಆಸ್ತಿಪಡಿಸಿಕೊಳ್ಳಲಾಗಿದೆ. ಆ ದಾಖಲೆಗಳು ನನ್ನ ಬಳಿ ಇವೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ . ಇಷ್ಟೇ ಅಲ್ಲದೆ ಅಮೆರಿಕದಿಂದ (america) ಬೆಂಗಳೂರು ಗ್ರಾಮಾಂತರಕ್ಕೆ ಬಂದಿದ್ದ ವ್ಯಕ್ತಿ ಒಬ್ಬನ ಬಳಿ ಇದೇ ರೀತಿ ಆಸ್ತಿ ಕಬ್ಬಳಿಕೆ ಮಾಡಿದ್ದಾರೆ ಎಂಬ ಆರೋಪವನ್ನು ದೇವೇಗೌಡರು ಡಿಕೆಶಿ ಮೇಲೆ ಮಾಡಿದ್ದಾರೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ದೇವೇಗೌಡರ ಚಿಲ್ಲರೆ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ .ಬಹಿರಂಗ ಚರ್ಚೆಗೆ (open debate) ಆಹ್ವಾನ ಕೊಟ್ಟಿದ್ದೇನೆ . ತಾಕತ್ತಿದ್ದರೆ ಬಹಿರಂಗವಾಗಿ ಚರ್ಚೆಗೆ ಬರಲಿ ಇಲ್ಲವಾದರೆ ಈ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿಕೆ ನೀಡಿ ಮೌನಕ್ಕೆ ಜಾರಿದ್ದಾರೆ.
ಒಟ್ನಲ್ಲಿ ಎಚ್ಡಿಕೆ ಹಾಗೂ ಡಿಕೆ ನಡುವೆ ನಡೆಯುತ್ತಿದ್ದ ಟಾಕ್ ವಾರ್ಗೆ ಈಗ ದೇವೇಗೌಡರು ಎಂಟ್ರಿ ಕೊಟ್ಟಿರೋದು ಕಣ ಕಾದ ಕೆಂಡದಂತೆ ಕೆಂಪಾಗಿದೆ.