ಚನ್ನಪಟ್ಟಣ ಬೈ ಎಲೆಕ್ಷನ್ (Channapatna By election) ಅಖಾಡ ಈಗ ಮತ್ತೆ ಪ್ರಭಲ ಒಕ್ಕಲಿಗ ನಾಯಕರ ಮಾತಿನ ಯುದ್ಧಕ್ಕೆ ವೇದಿಕೆಯಾಗುತ್ತಿದೆ. ಈ ಬಗ್ಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (Dcm Dk shivakumar), ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಈ ರೀತಿ ಚುನಾವಣೆಗಳು ಬಂದಾಗ ಮಾತ್ರ ಕುಮಾರಸ್ವಾಮಿಗೆ ಕಣ್ಣಿರು ಬುರುತ್ತೇ. ಕೇಂದ್ರ ಸಚಿವರಾದ ಮಿಸ್ಟರ್ ಕುಮಾರಸ್ವಾಮಿ, ಇದುವರೆಗೂ ಒಮ್ಮೆಯೂ ರಾಷ್ಟ್ರಧ್ವಜ ಹಾರಿಸೋಕೆ ರಾಮನಗರಕ್ಕೆ ಹೋಗಿಲ್ಲ ಅಥವಾ ಚನ್ನಪಟ್ಟಣಕ್ಕೂ ಹೋಗಿಲ್ಲ.ಯಾವುದಾದ್ರೂ ಒಂದು ಗುರುತು ಮಾಡೋ ಕೆಲಸ ಚನ್ನಪಟ್ಟಣಕ್ಕೆ ಮಾಡಿರೋದನ್ನ ಪಾಯಿಂಟ್ ಔಟ್ ಮಾಡು ಎಂದಿದ್ದಾರೆ.

ಚನ್ನಪಟ್ಟಣದಲ್ಲಿ ಕೆರೆಗಳನ್ನ ಮಾಡಿದ್ದು ನಮ್ಮ ಅಭ್ಯರ್ಥಿ ಯೋಗೇಶ್ವರ್ (Cp Yogeshwar),ಆ ಯೋಜನೆಗಳಿಗೆ ದುಡ್ಡು ಕೊಟ್ಟಿದ್ದು ನಾನು.ಇದು ನಮ್ಮ ಕೊಡುಗೆ. ಆದ್ರೆ ಚನ್ನಪಟ್ಟಣಕ್ಕೆ ನೀನು ಏನು ಕೊಡುಗೆ ಕೊಟ್ಟೆ ಅಂತ ಹೇಳಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.