ಇಂದು ಬೆಳ್ಳಂ ಬೆಳಗ್ಗೆಯೇ ಎಐಸಿಸಿ ಅಧ್ಯಕ್ಷ (AICC)ಮಲ್ಲಿಕಾರ್ಜುನ ಖರ್ಗೆಯನ್ನ (Mallikarjuna kharge) ಭೇಟಿ ಡಿಸಿಎಂ ಡಿ.ಕೆ ಶಿವಕುಮಾರ್ (Dcm dk Shivakumar) ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಡಿಸಿಎಂ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಸುಮಾರು ೨೦ ನಿಮಿಷ ಕಾಲ ಖರ್ಗೆ ಜೊತೆ ಚರ್ಚಿಸಿದ ಡಿ.ಕೆ ಶಿವಕುಮಾರ್, ಪಕ್ಷದ ಆಂತರಿಕ ವಿಚಾರದ ಕುರಿತು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ವೀರಪ್ಪ ಮೊಯ್ಲಿ (Veerappa Moyli) ನೀಡಿದ ಹೇಳಿಕೆ ಕಾಂಗ್ರೇಡ್ಸ್ ನಲ್ಲಿ ಮತ್ತೆ ಸಂಚಲ ಮೂಡಿಸಿದ್ದು ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಡಿಕೆ, ಈ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನ್ನಾಡಬೇಡಿ ಅಂತಾ ಖರ್ಗೆ ಹೇಳಿದ್ದಾರೆ.ಹಾಗಾಗಿ ಮಾತಾಡೋದಿಲ್ಲ ಎಂದು ಡಿಕೆಶಿ ಹೇಳಿದ್ದರು. ಆ ನಂತರ ಇವತ್ತು ಖರ್ಗೆಯವರನ್ನು ಭೇಟಿಯಾಗಿದ್ದು ಬಹುಶಃ ಇದೇ ವಿಚಾರದ ಬಗ್ಗೆ ಚರ್ಚಿಸಿರಬಹುದು ಎನ್ನಲಾಗಿದೆ.
ಆ ನಂತರದಲ್ಲಿ ಎರಡನೇ ದಿನದ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ವಿಧಾನಸೌಧಕ್ಕೆ ಸಚಿವ ಪ್ರಿಯಾಂಕ ಖರ್ಗೆ ಜೊತೆ ಡಿಸಿಎಂ ಡಿಕೆಶಿ ಆಗಮಿಸಿದ್ದಾರೆ.
