ಮಂಡ್ಯದ ನಾಗಮಂಗಲದಲ್ಲಿ (Nagamangala) ಗಣೇಶ ಮೆರವಣಿಗೆ ವೇಳೆ ನಡೆದ ಗಲಭೆ ತಣ್ಣಗಾಗುವ ಮೊದಲೇ, ಇದೀಗ ದಾವಣಗೆರೆಯಲ್ಲಿ (Davanagere) ಬೆಂಕಿ ಹೊತ್ತಿದೆ. ಗುರುವಾರ ರಾತ್ರಿ ದಾಣಗೆರೆಯಲ್ಲಿ ಗಣೇಶ ಮೆರಣಿಗೆ ಸಾಗಬೇಕಾದ್ರೆ ಮತ್ತೆ ಗಲಭೆ ಸೃಷ್ಟಿಯಾಗಿದೆ. ಅನ್ಯಕೋಮಿನ ಗುಂಪು ಪ್ರಚೋದನೆ ಮಾಡಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಶುರು ಮಾಡಿದೆ ಎಂದು ಹೇಳಲಾಗಿದೆ.
ರಾತ್ರಿಯಿಡಿ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಹಿಂದೂಗಳ (Hindu) ಮನೆಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆಸಲಾಗಿದೆ. ಈ ನಂತರ ದಾವಣಗೆರೆ ಗಣೇಶ ಮೆರವಣಿಗೆ ಕಲ್ಲು ತೂರಾಟ ಪ್ರಕರಣ ಸಂಬಂಧಪಟ್ಟಂತೆ 20ಕ್ಕೂ ಅಧಿಕ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಗಲಭೆಯ ದೃಷ್ಟಯಗಳನ್ನ ಆಧರಿಸಿ ಪೊಲೀಸ್ರು ಸಿಸಿಟಿವಿ (cctv) ದೃಶ್ಯ ಆಧರಿಸಿ 20ಕ್ಕೂ ಅಧಿಕ ಜನರನ್ನ ಬಂಧಿಸಿದ್ರು. ಇದೀಗ ಆರೋಪಿಗಳನ್ನ ದಾವಣಗೆರೆಯ JMFC ನ್ಯಾಯಾಧೀಶರಾದ ಪ್ರಶಾಂತ ಮುಂದೆ ಹಾಜರು ಪಡಿಸಿದರು. ನ್ಯಾಯಾಧೀಶರು 15ಕ್ಕೂ ಅಧಿಕ ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ.