ಮೈಸೂರು (Mysore) ಅರಮನೆಯಲ್ಲಿ ಶುಕ್ರವಾರ ದಸರಾ (Dasara)ಆನೆಗಳ ಓಡಾಟ ಆತಂಕಕ್ಕೆ ಕಾರಣವಾಗಿತ್ತು. ಗಜಪಡೆ ಆನೆಗಳ ಯರ್ರಾಬಿರ್ರಿ ಓಡಾಟದಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಕೆಲ ಕಾಲದ ನಂತರ ಆನೆಗಳನ್ನು ನಿಯಂತ್ರಿಸಲಾಗಿದೆ.
ರಾತ್ರಿ ಊಟ ಮಾಡುವಾಗ ಎರಡು ಆನೆಗಳು ಕಿತ್ತಾಡಿಕೊಂಡಿದ್ದು,ಧನಂಜಯ(Dhananjaya ಹಾಗೂ ಕಂಜನ್ (kanjan)ಆನೆಗಳ ನಡುವೆ ಕಿತ್ತಾಟ ನಡೆದಿದೆ.ಕೋಪದಿಂದ ಕಂಜನ್ ಆನಗೆ ಧನಂಜಯ ಆನೆ ತಿವಿದಿದೆ.
ಹೀಗಾಗಿ ಹೆದರಿ ಚೆಲ್ಲಾಪಿಲ್ಲಿಯಾಗಿ ಕಂಜನ್ ಆನ ಓಡಿ ಹೋಗಿದೆ.
ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು,
ಧನಂಜಯ ಆನೆಯ ಕೋಪಕ್ಕೆ ಹೆದರಿ ಅರಮನೆಯಿಂದ (palace)ಹೊರಗೆ ಓಡಿ ಬಂದ ಕಂಜನ್ ಆನೆ ರಸ್ತೆಗೆ ನುಗ್ಗಿತ್ತು. ಆದ್ರೆ
ಬಿಟ್ಟು ಬಿಡದೆ ಕಂಜನ್ ಆನೆಯನ್ನು ಅಟ್ಟಾಡಿಸಿಕೊಂಡು ಧನಂಜಯ ಆನೆ ಮುನ್ನುಗ್ಗಿದೆ. ಆನೆಗಳ ಕಿತ್ತಾಟದಿಂದ ಬೆದರಿ ಕಂಜನ್ ಆನೆ ಬಿಟ್ಟು ಮಾವುತ ಇಳಿದು ಓಡಿದ್ದಾನೆ.