
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬೆಂಗಳೂರು ಪೊಲೀಸ್ ಕಮಿಷನರ್ ಈಗಾಗಲೇ ಎಲ್ಲಾ ವರದಿಗಳು ಬಂದಾಗಿದೆ. ಚಾರ್ಜ್ಶೀಟ್ ಕೂಡ ರೆಡಿಯಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೋರ್ಟ್ ಅಂತಿಮ ವರದಿ ಸಲ್ಲಿಕೆ ಮಾಡ್ತೇವೆ ಎಂದಿದ್ದಾರೆ.
ದರ್ಶನ್ ಆಂಡ್ ಗ್ಯಾಂಗ್ ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯನ್ನು ಹೇಗೆಲ್ಲಾ ಕೊಲೆ ಮಾಡಿದ್ರು ಅನ್ನೋ ಬಗ್ಗೆ ಇಂಚಿಂಚು ಮಾಹಿತಿ ಸಂಗ್ರಹ ಮಾಡಿರುವ ಕಾಮಾಕ್ಷಿಪಾಳ್ಯ ಪೊಲೀಸ್ರು, ನಟ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧದ ಚಾರ್ಜ್ಶೀಟ್ನಲ್ಲಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳದಲ್ಲಿ ಸಿಕ್ಕ ವಸ್ತುಗಳು ಹಾಗು ಬಳಕೆ ಮಾಡಿದ್ದ ವಾಹನಗಳು, ಮೊಬೈಲ್ ಸಿಗ್ನಲ್ಗಳೂ ಸೇರಿದಂತೆ ಕೊಲೆ ನಡೆದ ದಿನ ಧರಿಸಿದ್ದ ಬಟ್ಟೆಗಳಲ್ಲೂ ಸಾಕ್ಷಿಗಳನ್ನು ಗಟ್ಟಿ ಮಾಡಿದ್ದಾರೆ.

ಬಹುತೇಕ ಮುಂದಿನ ವಾರ ಚಾರ್ಜ್ ಶೀಟ್ ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ಚಾರ್ಜ್ಶೀಟ್ ರೆಡಿ ಮಾಡಿದ್ದು, ಕಾನೂನು ತಜ್ಞರ ಮೂಲಕ ಚಾಜ್ಶೀಟ್ ಪರಿಶೀಲನಾ ಕಾರ್ಯಕ್ಕೆ ಕಳುಹಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಚಾರ್ಜ್ಶೀಟ್ ಪ್ರತಿ ಪರಿಶೀಲನೆ ಮಾಡ್ತಿದ್ದು, ಏನಾದರೂ ತಿದ್ದುಪಡಿಯ ಅಗತ್ಯವಿದ್ದರೆ ಮುಗಿಸಿಕೊಂಡು ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಪೊಲೀಸರು ಕೋರ್ಟ್ಗೆ ಸಲ್ಲಿಸಬೇಕಿರುವ ಎಲ್ಲಾ ಸಾಕ್ಷಿಗಳು, ದಾಖಲೆಗಳನ್ನು ಬಳಸಿಕೊಂಡು ಚಾರ್ಜ್ಶೀಟ್ ತಯಾರಿಯ ಎಲ್ಲಾ ಪ್ರಕ್ರಿಯೆಯನ್ನೂ ಪೊಲೀಸರು ಮುಗಿಸಿದ್ದಾರೆ. ಇನ್ನು ಎರಡನೇ ಬಾರಿ ರಿಪೋರ್ಟ್ ಪಡೆದಿರುವ ಪೊಲೀಸರು ಹೈದರಾಬಾದ್ ಸಿಎಫ್ಎಸ್ಎಲ್ ಲ್ಯಾಬ್ನಿಂದ ಕೆಲವು ವರದಿಗಳು ಬರಬೇಕಿದೆ. ಆ ರಿಪೋರ್ಟ್ಗಳು ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆ ಇದೆ ಎನ್ನಲಾಗಿದೆ. ಆ ವರದಿಗಳು ಬಂದ ಕೂಡಲೇ ಕಾನೂನು ತಜ್ಞರ ಸಲಹೆಯಂತೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
