ಆಗಾದ್ರೆ ಆ ಪತ್ರದಲ್ಲಿ ವಿಜಯಲಕ್ಷ್ಮಿ ಮನವಿ ಮಾಡಿರೋದಾದ್ರೂ ಏನು ಗೊತ್ತಾ.?
ಕಮೀಷನರ್ ಗೆ ಬರೆದಿರುವ ಪತ್ರದಲ್ಲಿ ಮುಖ್ಯವಾದ ಮನವಿ ಮಾಡಿರೋ ದರ್ಶನ್ ಪತ್ನಿ ವಿಜಯಲಕ್ಷ್ಮಿ.
ಸ್ವಾಮಿ ನಿಮ್ಮಿಂದ ಮಹಾ ಯಡವಟ್ಟಾಗಿದೆ ದಯವಿಟ್ಟು ಸರಿ ಪಡಿಸಿಕೊಡಿ ಎಂದು ಮನವಿ.
ನನ್ನ ಹಾಗೂ ನನ್ನ ಮಗನ ಭವಿಷ್ಯ ದೃಷ್ಟಿಯಿಂದ ಆ ತಪ್ಪನ್ನ ಸರಿಪಡಿಸಿ ಎಂದು ಪತ್ರದ ಮೂಲಕ ಮನವಿ.
ಜೂನ್ 24 ರಂದು ಕಮೀಷನರ್ ಬಿ. ದಯಾನಂದ್ ಗೆ ಬರೆದಿರುವ ಪತ್ರದಲ್ಲಿ ಮನವಿ.
ಆಗಾದ್ರೆ ಆ ಮನವಿಯಾದ್ರೂ ಏನು? ಅನ್ನೋ ಮಾಹಿತಿ ಹೇಳ್ತೀವಿ ನೋಡಿ
ಅವತ್ತು ಜೂನ್ 11 ರೇಣುಕಾಸ್ವಾಮಿ ಕೊಲೆಕೇಸ್ ನಲ್ಲಿ ದರ್ಶನ್ ಬಂಧನವಾಗಿತ್ತು.
ದರ್ಶನ್ ಹಾಗೂ ಇತರೆ ಆರೋಪಿಗಳ ಬಂಧನದ ಬಗ್ಗೆ ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿ ಮಾಡಿದ್ರು.
ಆ ವೇಳೆ ದರ್ಶನ್ ಪತ್ನಿ ಪವಿತ್ರಗೌಡಗೆ ರೇಣುಕಾಸ್ವಾಮಿಅಶ್ಲೀಲಸಂದೇಶ ಕಳಿಸಿದ್ದಾಗಿ ಉಲ್ಲೇಖ.
ಅದಕ್ಕಾಗಿ ರೇಣುಕಾಸ್ವಾಮಿಯನ್ನ ಕೊಲೆ ಮಾಡಿದ್ದಾಗಿ ತನಿಖೆ ವೇಳೆ ಬಯಲಿಗೆ ಎಂದು ಹೇಳಿಕೆ ನೀಡಿದ್ರು.
ಆ ಸುದ್ದಿ ಎಲ್ಲಾ ಮಾಧ್ಯಮಗಳಲ್ಲಿಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು.
ಅದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿಪತ್ರ.
ಸ್ವಾಮಿ ನೀವು ದರ್ಶನ್ ಪತ್ನಿ ಪವಿತ್ರಗೌಡ ಎಂದು ಹೇಳಿಕೆನೀಡಿದ್ದೀರಾ.
ದರ್ಶನ್ ನ ನಾನು- ಕಾನೂನುಬದ್ಧವಾಗಿ ವಿವಾಹವಾದ ಏಕೈಕ ಪತ್ನಿ
ನಮ್ಮ ವಿವಾಹವು 19.05.2003 ರಂದು ಧರ್ಮಸ್ಥಳದಲ್ಲಿ ಅದ್ದೂರಿಯಾಗಿ ನೆರವೇರಿತು.
ಪವಿತ್ರಗೌಡ ನನ್ನ ಪತಿ ದರ್ಶನ್ ಸ್ನೇಹಿತೆ ನಿಜ.
ಆದರೆ ಅವರು ದರ್ಶನ್ ಅವರ ಹೆಂಡತಿಯಲ್ಲ ಎಂದು ದಯವಿಟ್ಟು ಗಮನಿಸಿ.
ನೀವು ಹಾಗೂ ಗೃಹ ಸಚಿವರು ಇಬ್ಬರು A1 ಆರೋಪಿ ಪವಿತ್ರಗೌಡರನ್ನ ದರ್ಶನ್ ಪತ್ನಿ ಎಂದು ಹೇಳಿಕೆ ನೀಡಿದ್ದೀರಾ.
ಅದರಿಂದ ನನ್ನ ಹಾಗೂ ನನ್ನ ಮಗನ ಭವಿಷ್ಯಕ್ಕೆ ತೊಂದರೆಯಾಗಲಿದೆ.
ಪವಿತ್ರಗೌಡ ಸಂಜಯ್ ಸಿಂಗ್ ಅವರನ್ನು ಮದುವೆಯಾಗಿದ್ದಾರೆ .
ಅವರಿಗೆ ಒಬ್ಬ ಮಗಳು ಸಹ ಇದ್ದಾಳೆ. ಹೀಗಾಗಿ ಪೊಲೀಸ್ ರೆಕಾರ್ಡ್ಸ್ ಸರಿಪಡಿಸಿ.
ಪವಿತ್ರಗೌಡ ದರ್ಶನ್ ಪತ್ನಿ ಅಲ್ಲ ಎಂದು ದಾಖಲೆಗಳನ್ನ ಸರಿಪಡಿಸಿ ಎಂದು ಮನವಿ.