ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renuka swamy murder case) ಸಂಬಂಧಪಟ್ಟಂತೆ ಚಿತ್ರದುರ್ಗದಿಂದ (Chitradurga) ರೇಣುಕಸ್ವಾಮಿಯನ್ನ ಕಿಡ್ನಾಪ್ ಮಾಡಿದ್ದ ಆರೋಪಿಗಳಿಂದ ಚಿತ್ರದುರ್ಗದಲ್ಲಿ ಮಧ್ಯರಾತ್ರಿವರೆಗೂ ಸ್ಥಳ ಮಹಜರು ಮಾಡಲಾಗಿದೆ.

ನಗರದ ಚಳ್ಳಕೆರೆ ಗೇಟ್ನ ಬಾಲಾಜಿ ಬಾರ್ ಬಳಿ ಆರೋಪಿಗಳನ್ನ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳ ಮಹಜರು ಮಾಡಿಸಿದ್ದಾರೆ. ಈ ವೇಳೆ ಪೊಲೀಸರು ಬರುತ್ತಿದ್ದಂತೆ ನೂರಾರು ಸಾರ್ವಜನಿಕರು ಜಮಾಯಿಸಿದ್ರು.ಇನ್ನು ಸಾರ್ವಜನಿಕರನ್ನ ಚದುರಸಿಲು ಪೊಲೀಸರು ಹರಸಾಹಸವೇ ಪಡಬೇಕಾಯ್ತು.

ಈ ತಕ್ಷಣ ಅಲರ್ಟ್ ಆದ ಚಿತ್ರದುರ್ಗ ಪೊಲೀಸರು ಹೆಚ್ಚಿನ ಭದ್ರತೆ ವದಗಿಸಿದ್ರು.ಜೊತೆಗೆ ಮೈಕ್ನಲ್ಲಿ ದರ್ಶನ್ (Darshan) ಬರ್ತಿಲ್ಲ. ನೀವು ಮನೆ ಕಡೆ ಹೋಗಬಹುದು ಎಂದು ಪ್ರಕಟಣೆ ಹೊರಡಿಸಲಾಯ್ತು.