ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ದರ್ಶನ್ (Darshan)ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಘಟನೆ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆ ಮತ್ತು ಶೂ ವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
![](https://pratidhvani.com/wp-content/uploads/2024/06/110943197-1024x576.webp)
ಶನಿವಾರ ರಾತ್ರಿ ದರ್ಶನ್ ಮನೆಯಲ್ಲಿ ಬಟ್ಟೆ, ಶೂ ಎರಡನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ತಡರಾತ್ರಿ ನಟ ದರ್ಶನ್ ಮನೆಗೆ ಹೋಗಿದ್ದ ಪೊಲೀಸರು,ಮನೆಯಲ್ಲಿ ಮಹಜರು ಪ್ರಕ್ರಿಯೆ ನಡೆಸಿದ್ದಾರೆ.
ಆ ಸಂಧರ್ಬದಲ್ಲಿ ಮನೆಯಲ್ಲಿ ವಾಶ್ ಮಾಡದೇ ಹಾಗೇ ಇದ್ದ ಬಟ್ಟೆಗಳು ಪತ್ತೆಯಾಗಿದ್ದು,ಆ ಬಟ್ಟೆಗಳು ಕೇಸ್ ನಲ್ಲಿ ಪ್ರಮುಖ ಸಾಕ್ಷಿಯಾಗೋ ಸಾಧ್ಯತೆಯಿದೆ. ಬಟ್ಟೆ ಮತ್ತು ಶೂ ಮೇಲೆ ರಕ್ತದ ಕಲೆಗಳು, ಕೂದಲು ಇದ್ಯಾ ಅಂತಾ ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ ಹಾಗೂ ನಂತರಬಟ್ಟೆ ಮತ್ತು ಶೂಗಳನ್ನ ಎಫ್ಎಸ್ಎಲ್ ಗೆ ಕಳುಹಿಸಲು ಸಿದ್ದತೆ ಮಾಡಿಕೊಳ್ಳಲಿದ್ದಾರೆ.