ರೇಣುಕಾಸ್ವಾಮಿ (Renuka swamy) ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ (Ator darshan) ಬಗ್ಗೆ ಮಾಡಿದ್ದ ಟ್ವಿಟ್ ಹಂಚಿಕೊಂಡು ಸುದ್ದಿಯಾಗಿದ್ದ ನಟಿ ರಮ್ಯಾ (Actress ramya) ಈಗ ಮತ್ತೊಮ್ಮೆ ಸುದೀರ್ಘವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
![](https://pratidhvani.com/wp-content/uploads/2024/06/IMG_8209-1.jpeg)
ಸಾಮಾಜಿಕ ಮಾಧ್ಯಮಗಳಲ್ಲಿ (Social media) ಬ್ಲಾಕ್ ಮಾಡುವ ಆಯ್ಕೆ ಕೊಟ್ಟಿರುವುದರ ಹಿಂದೆ ಕಾರಣವಿದೆ. ಎಂತಾ ಕೆಟ್ಟ ಸಮಾಜದಲ್ಲಿ ಇದ್ದೇವೆ ಎಂದರೆ, ಹೀರೋ, ಹೀರೋಯಿನ್ ಮಕ್ಕಳು ಮತ್ತು ಪತ್ನಿಯರನ್ನು ಬಿಡದೆ ಟ್ರೋಲ್ (Troll) ಮಾಡಿದ್ದಾರೆ. ದೇಶದ ಕಾನೂನು ಪಾಲಿಸುವ ವ್ಯಕ್ತಿಯಾಗಿ ನಾನು ಇವರ ವಿರುದ್ಧ ಕೇಸ್ ದಾಖಲು ಮಾಡಿದ್ದೇನೆ. ಕೆಲವೊಮ್ಮೆ ಟ್ರೋಲ್ ಮಾಡುವ ವ್ಯಕ್ತಿಗಳಿಗೆ ಪೊಲೀಸರು ಸಣ್ಣ ವಾರ್ನಿಂಗ್ ಕೊಟ್ಟರೂ ಸಾಕು ಸುಮ್ಮನಾಗುತ್ತಾರೆ. ಆ ಬಳಿಕ ನಾನು ಅವರ ಮೇಲೆ ಹಾಕಿದ್ದ ಕೇಸ್ಗಳನ್ನು ವಾಪಸ್ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
![](https://pratidhvani.com/wp-content/uploads/2024/06/IMG_8207.jpeg)
ರಾಜಕೀಯ ಒತ್ತಡಕ್ಕೆ ಪೊಲೀಸರು ಬಗ್ಗಬಾರದು ಎಂದು ನಾನು ಬಯಸುತ್ತೇನೆ. ದೇಶದ ಕಾನೂನು ಜನ ಸಾಮಾನ್ಯರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದಿರುವ ರಮ್ಯಾ, ಜಸ್ಟೀಸ್ ಫಾರ್ ರೇಣುಕಾಸ್ವಾಮಿ (Justie for renuka swamy), ದರ್ಶನ್, ಯಡಿಯೂರಪ್ಪ (Yediyurappa) ಹಾಗೂ ಪ್ರಜ್ವಲ್ ರೇವಣ್ಣ (Prajwal revanna) ಹ್ಯಾಶ್ ಟ್ಯಾಗ್ ಬಳಸಿದ್ದಾರೆ.