• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಡಿ.ರೂಪಾ ಆಡಿಯೋ ವೈರಲ್​, ಸ್ಫೋಟಕ ವಿಚಾರಗಳು ಬಹಿರಂಗ..!

ಕೃಷ್ಣ ಮಣಿ by ಕೃಷ್ಣ ಮಣಿ
February 22, 2023
in ಅಂಕಣ
0
ಐಎಎಸ್, ಐಪಿಎಸ್ ಅಧಿಕಾರಿಗಳ ಪರಸ್ಪರ ಕೆಸರೆರಚಾಟ ಸರಿಯಲ್ಲ: ಕ್ರಮಕ್ಕೆ ಸಿಎಂಗೆ ಸಲಹೆ- ಪ್ರಲ್ಹಾದ ಜೋಶಿ
Share on WhatsAppShare on FacebookShare on Telegram

ಐಪಿಎಸ್​ ಅಧಿಕಾರಿ ಡಿ ರೂಪಾ ಅವರು ಮಾತನಾಡಿರುವ 2 ಆಡಿಯೋಗಳು ಪ್ರತಿಧ್ವನಿಗೆ ಸಿಕ್ಕಿದ್ದು, ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಆರೋಪ ಮಾಡುತ್ತಿರುವುದು ಯಾಕೆ ಎನ್ನುವುದರ ಎಳೆ ಎಳೆಯಾಗಿ ಸಾಮಾಜಿಕ ಕಾರ್ಯಕರ್ತನ ಜೊತೆಗೆ ಮಾತನಾಡಿದ್ದಾರೆ.  ಮೈಸೂರು ಮೂಲದ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆಗೆ ಡಿ ರೂಪಾ ಮಾತನಾಡಿದ್ದಾರೆ. ರೋಹಿಣಿ ಸಿಂಧೂರಿ ತನ್ನ ಗಂಡ ಮುನೀಶ್​ ಮೌದ್ಗಿಲ್​ ಸರ್ವೇ ಅಂಡ್​ ಲ್ಯಾಂಡ್ಸ್​ ರೆಕಾರ್ಡ್​  ಆಯುಕ್ತರಾಗಿದ್ದಾಗ ಸಾಕಷ್ಟು ಲಾಭಗಳನ್ನು ಪಡೆದುಕೊಂಡಿದ್ದಾರೆ. ತನ್ನ ಗಂಡನನ್ನು ಬುಟ್ಟಿಗೆ ಹಾಕೊಂಡಿದ್ದಾರೆ. ರೋಹಿಣಿ ಸಿಂಧೂರಿ ಗಂಡ ಸುಧೀರ್​ ರೆಡ್ಡಿ ರಿಯಲ್​ ಎಸ್ಟೇಟ್​ ವ್ಯವಹಾರ ಮಾಡುತ್ತಿದ್ದು, ಲಿಟಿಗೇಷನ್​ ಇರುವ ಜಮೀನು ಕೊಳ್ಳುವುದು ಮೇಲ್ಮಟ್ಟದಲ್ಲಿ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವುದು ನಡೆಯುತ್ತಿದೆ. ನನ್ನ ಗಂಡ ಮುನೀಶ್​ ಮೌದ್ಗಿಲ್​ ಜೊತೆಗೆ ಚಾಟ್​ ಮಾಡುವ ಎಲ್ಲಾ ವಿಚಾರಗಳು ನನಗೆ ಗೊತ್ತಾಗುತ್ತಿದೆ. ಆಕೆಯ ಪ್ರತಿಯೊಂದು ವಿಚಾರದಲ್ಲೂ ನನ್ನ ಗಂಡ ಮುನೀಶ್​ ಮೌದ್ಗಿಲ್ ​ನಿರ್ಧಾರ ಮಾಡುತ್ತಿದ್ದಾರೆ. ಆಕೆ ಒಂದು ಕ್ಯಾನ್ಸರ್​ ಇದ್ದಂತೆ, ಅವಳಿಂದಾಗಿ (Rohini Sindhoori) ನಮ್ಮ ಮನೆಯೂ ಚೆನ್ನಾಗಿಲ್ಲ ಎಂದು ಮನಬಿಚ್ಚಿ ಮಾತನಾಡಿದ್ದಾರೆ.

ADVERTISEMENT

ಶಾಸಕ ಸಾರಾ ಮಹೇಶ್​ ಸಂಧಾನಕ್ಕೆ ಹೇಗೆ ನಡೀತು ಪ್ರಯತ್ನ..?

ಮೈಸೂರಿನ ಕೆ.ಆರ್​ ನಗರದ ಜೆಡಿಎಸ್​ ಶಾಸಕ ಸಾರಾ ಮಹೇಶ್​​, ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು, ಶಾಸನ ಸಭೆಯಲ್ಲೂ ಪ್ರಸ್ತಾಪಿಸಿದ್ದರು. ತನಿಖೆ ಮಾಡುವಂತೆ ಹಕ್ಕೊತ್ತಾಯ ಮಾಡಿದ್ದರು. ಇದರಿಂದ ಕಂಗಾಲಾದ ರೋಹಿಣಿ ಸಿಂಧೂರಿ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹಾಗು ಹೆಚ್​.ಡಿ ಕುಮಾರಸ್ವಾಮಿ ಅವರ ಬಳಿ ಹೋಗಿದ್ದರು. ಆದರೂ ಸಾರಾ ಮಹೇಶ್​ ಸಂಧಾನಕ್ಕೆ ಒಪ್ಪಿರಲಿಲ್ಲ. ಮಾಜಿ ಸಚಿವ ಚಲುವರಾಯಸ್ವಾಮಿ ಮೂಲಕವೂ ಸಂಧಾನಕ್ಕೆ ಯತ್ನಿಸಿದರು. ಅದೂ ಕೈಗೂಡಲಿಲ್ಲ. ಅಂತಿಮವಾಗಿ ರಮಣರೆಡ್ಡಿ, ಮಣಿವಣ್ಣನ್​ ಮೂಲಕ ಸಂಧಾನಕ್ಕೆ ಯತ್ನಿಸಿದರು. ಮಣಿವಣ್ಣನ್​ ಈ ಹಿಂದೆ ಸಾರಾ ಮಹೇಶ್​ ಕುಟುಂಬದ ಕೆಲಸ ಮಾಡಿಕೊಟ್ಟಿದ್ದ ಕಾರಣಕ್ಕೆ ಸಾರಾ ಮಹೇಶ್​ ಸಂಧಾನಕ್ಕೆ ಒಪ್ಪಿಕೊಂಡರು. ಸಾರಾ ಮಹೇಶ್​ ಜೊತೆಗಿನ ಸಂಧಾನದ ವೇಳೆ ನಿಮಗೇನು ಬೇಕು ಹೇಳಿ ನಾನು ಕೊಡುತ್ತೇನೆ ಎಂದಿದ್ದಾರೆ. ನೀವು ನನ್ನಲ್ಲಿ ಏನು ಕೇಳಿದರೂ ನಾನು ಕೊಡುವುದಕ್ಕೆ ತಯಾರು ಎನ್ನಲಾಗಿದೆ. ತಪ್ಪು ಮಾಡಿಲ್ಲ ಅಂದ್ರೆ ಆಕೆ ಸಂಧಾನಕ್ಕೆ ಹೋಗಿದ್ದು ಯಾಕೆ..? ಸಂಧಾನ ಮಾಡಿಕೊಂಡಾಕ್ಷಣ ಭ್ರಷ್ಟಾಚಾರ ಹೋಗಿಬಿಡುತ್ತಾ..? ಎಂದು ಡಿ.ರೂಪಾ ಪ್ರಶ್ನಿಸಿದ್ದಾರೆ.

 ಮುನೀಶ್​ ಮೌದ್ಗಿಲ್​ ವರ್ಗಾವಣೆ ಹಿಂದೆ ರೂಪಾ ಒತ್ತಡ..!

1998ರ ಕರ್ನಾಟಕ ಕೇಡರ್​ ಅಧಿಕಾರಿ ಆಗಿರುವ ಮುನೀಶ್​ ಮೌದ್ಗಿಲ್​ ಕರ್ನಾಟಕ ಸರ್ವೇ ಅಂದ್​ ಲ್ಯಾಂಡ್​ ರೆಕಾರ್ಡ್​ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಅದರಿಂದ ಲಾಭ ಪಡೆಯುತ್ತಿದ್ದ ರೋಹಿಣಿ ಸಿಂಧೂರಿ ತನ್ನ ಗಂಡ ಸುಧೀರ್​ ರೆಡ್ಡಿಯ ರಿಯಲ್​ ಎಸ್ಟೇಟ್​ ವ್ಯವಹಾರಕ್ಕೆ ಬಳಸಿಕೊಳ್ತಿದ್ರು. ಇದೇ ಕಾರಣಕ್ಕೆ ನಾನು ಮುನೀಶ್​ ಮೌದ್ಗಿಲ್​ರನ್ನು ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಕೇಳಿದ್ದೇನೆ ಎಂದಿದ್ದಾರೆ ಡಿ ರೂಪಾ. ಇನ್ನು ಇಟಲಿಯಿಂದ ಅಡುಗೆ ಮನೆ ಸಾಮಗ್ರಿಗಳನ್ನು ತರಿಸುತ್ತಿದ್ದ ರೋಹಿಣಿ ಸಿಂಧೂರಿ, ಟ್ಯಾಕ್ಸ್​ ಫ್ರೀ ಮಾಡಿಸಲು ತನ್ನ ಪ್ರಭಾವ ಬಳಸಿದ್ದಾಳೆ. ಏರ್ಪೋರ್ಟ್​ನಲ್ಲಿ ಕೆಲಸ ಮಾಡುವ ತನ್ನದೇ ಬ್ಯಾಚ್​ನ ಅಧಿಕಾರಿ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದ್ದಾಳೆ. ಆಕೆ ಎಲ್ಲಾ ವಿಚಾರಗಳನ್ನು ನನ್ನ ಗಂಡನ ಜೊತೆಗೆ ಚಾಟ್​ ಮೂಲಕ ಚರ್ಚೆ ಮಾಡಿದ್ದಾಳೆ. ನಾನು ಆ ಪೊಲೀಸ್​ ಅಧಿಕಾರಿ ಜೊತೆಗೂ ಮಾತನಾಡಿದ್ದೇನೆ ಎಂದು ಖಡಕ್​ ಆಗಿ ಮಾತನಾಡಿದ್ದಾರೆ IPS ಅಧಿಕಾರಿ ರೂಪಾ.

2 ಆಡಿಯೋದಲ್ಲಿ ಒಂದು ಸಾಫ್ಟ್​, ಮತ್ತೊಂದು ಫುಲ್​ ಗರಂ..!

ರೋಹಿಣಿ ಸಿಂಧೂರಿ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆಗೆ 2 ಬಾರಿ ಮಾತನಾಡಿದ್ದಾರೆ. ಒಂದರಲ್ಲಿ ಬರೋಬ್ಬರಿ 25 ನಿಮಿಷಗಳ ಕಾಲ ತಾಳ್ಮೆಯಿಂದ ಮಾತನಾಡಿರುವ ಡಿ. ರೂಪಾ, ಎಲ್ಲವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮತ್ತೊಂದರಲ್ಲಿ ಕೇವಲ 37 ಸೆಕೆಂಡ್​ಗಳ ಕಾಲ ಮಾತನಾಡಿರುವ ಡಿ ರೂಪಾ, ರೌದ್ರಾವತಾರ ತಾಳಿದ್ದಾರೆ. ರೋಹಿಣಿ ಸಿಂಧೂರಿಯನ್ನು ರಂಡೆ ಎಂದು ಸಂಬೋಧಿಸಿರುವ ಡಿ ರೂಪಾ, ಆ ರಂಡೆ ಕಳುಹಿಸ್ತಾಳೆ, ನೀವು ಪಿಂಪ್​ ರೀತಿ ಬಂದು ಕೆಲಸ ಮಾಡಿಸಿಕೊಳ್ತೀರಿ. ನನಗೆ ಎಲ್ಲವೂ ಗೊತ್ತಿದೆ. ಅಲ್ಲಿಂದ ಎದ್ದು ಹೋಗ್ರಿ ಎಂದು ಗುಟುರು ಹಾಕಿದ್ದಾರೆ. ಗಂಗರಾಜು ಒಂದು ಮಾತು ಮೇಡಂ ಒಂದು ಮಾತು ಎನ್ನುತ್ತಿದ್ದರೂ ಡಿ.ರೂಪಾ ಆವೇಶಭರಿತವಾಗಿ ಒಂದೇ ಉಸಿರಿನಲ್ಲಿ ಮಾತನಾಡಿದ್ದಾರೆ. ಇದನ್ನು ಬೇಕಿದ್ರೆ ರೆಕಾರ್ಡ್​ ಮಾಡ್ಕೊಳಿ, ಸಾಮಾಜಿಕ ಜಾಲತಾಣಕ್ಕೂ ಬೇಕಿದ್ರೆ ಹಾಕಿಕೊಳ್ಳಿ. ಆ ರಂಡೆ ಎಷ್ಟು ಸಂಸಾರ ಹಾಳು ಮಾಡಿದ್ದಾಳೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ ಎಂದಿದ್ದಾರೆ. ಈ ಆಡಿಯೋ ವೈರಲ್​ ಆದ ಬಳಿಕ ಪೋಸ್ಟ್​ ಹಾಕಿರುವ ರೂಪಾ, ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗಲಿ, ಕುಟುಂಬದ ವಿಚಾರ ಚರ್ಚೆ ಆಗುವುದು ಬೇಡ ಎಂದಿದ್ದಾರೆ.

Tags: D RoopaRohini Sindhuri
Previous Post

Pavana Gowda | ಗೌಳಿ ಪಕ್ಕ ದೇಸಿ ಮೂವಿ ಇನ್ನೊಂದು ಸ್ಪೆಷಲ್ ಸಿನಿಮಾದಲ್ಲಿ ನೋಡಿ..! | GOWLI |

Next Post

ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ಕಾರಣ: ರೂಪಾ ಪರ ನಿಂತ ವಕೀಲ ಸೂರ್ಯ ಮುಕುಂದರಾಜ್

Related Posts

Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
0

ಮಿತ್ರಪಕ್ಷದ ಮುಲಾಜಿನಲ್ಲಿ ಕಾಂಗ್ರೆಸ್; ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ, ಮಂಡ್ಯಕ್ಕೆಷ್ಟು ಅನುದಾನ; ಮೊದಲು ತಿಳಿಯಲಿ ಎಂದು ಚೆಲುವರಾಯಸ್ವಾಮಿಗೆ ತಿರುಗೇಟು, RSS ಬಗ್ಗೆ ಟೀಕೆ; ಪ್ರಿಯಾಂಕ್ ಖರ್ಗೆ...

Read moreDetails

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

July 5, 2025

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

July 5, 2025

Mallikarjuna Kharge: ರಾಜ್ಯದಲ್ಲಿ ಅರಣ್ಯ ಪ್ರದೇಶ ಬೆಳಸಿ ಪರಿಸರ ಉಳಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಸೆ.

July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025
Next Post
ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ಕಾರಣ: ರೂಪಾ ಪರ ನಿಂತ ವಕೀಲ ಸೂರ್ಯ ಮುಕುಂದರಾಜ್

ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಸುಧೀರ್ ಕಾರಣ: ರೂಪಾ ಪರ ನಿಂತ ವಕೀಲ ಸೂರ್ಯ ಮುಕುಂದರಾಜ್

Please login to join discussion

Recent News

Top Story

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 5, 2025
Top Story

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

by ಪ್ರತಿಧ್ವನಿ
July 5, 2025
Top Story

HD Kumarswamy: ಮೇಕೆದಾಟು; ತಮಿಳುನಾಡು ಸರ್ಕಾರವನ್ನು ಒಪ್ಪಿಸುವ ತಾಕತ್ತು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ

by ಪ್ರತಿಧ್ವನಿ
July 5, 2025
Top Story

DK Shivakumar: ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
July 5, 2025
Top Story

Vijay Raghavendra: ಸಿನಿಮಾ ವಿಭಾಗದಲ್ಲಿ ಪ್ರಕಟಿಸಲು ಕೋರಿಜುಲೈ 25ಕ್ಕೆ ‘ಸ್ವಪ್ನಮಂಟಪ’ ಬಿಡುಗಡೆ

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Lakshmi Hebbalkar: ವಿಶೇಷ ಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 5, 2025

Jockey 42: ನಟ ಕಿರಣ್ ರಾಜ್ ಹುಟ್ಟು ಹಬ್ಬಕ್ಕೆ ಗುಡ್ ನ್ಯೂಸ್ ನಿರ್ದೇಶಕ ಗುರುತೇಜ್ ಶೆಟ್ಟಿ.

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada