ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗು ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪ ನಡುವಿನ ಕಿತ್ತಾಟ ವಿಕೋಪಕ್ಕೆ ತಿರುಗಿದ್ದು ನಿಗಮ ಅಧ್ಯಕ್ಷ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ನಿರ್ದೇಶಕಿ ಆರೋಪಿಸಿದ್ದಾರೆ.
ರಾಘವೇಂದ್ರ ಶೆಟ್ಟಿ ಯು ಮಾಧ್ಯಮ ಗಳಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಸ್ವತಃ ಹೇಳಿರುತ್ತಾರೆ — ಅವರು ಎಂಡಿ , ಅಂದರೆ ನನಗೆ ಕಳೆದ ಒಂದು ವರ್ಷದಲ್ಲಿ 75 ಪತ್ರ ಬರೆದಿದ್ದಾರೆ ಎಂದೂ, ನಾನದಕ್ಕೆ ಉತ್ತರ ಕೊಟ್ಟಿಲ್ಲ ಎಂದು ನನ್ನಗೆ ಪತ್ರ ಬರೆದಿರುವಾಗಿ ಆರೋಪಿಸಿದ್ದಾರೆ.

ಮುಂದುವರೆದು, 75 ಪತ್ರಗಳು ನನಗೆ ನನ್ನ ಹಿರಿಯ ಅಧಿಕಾರಿಗಳಿಂದ ಕೂಡ ಒಂದು ವರ್ಷದಲ್ಲಿ ಬಂದಿಲ್ಲ ಹಾಗಾದರೆ ಇದು ಕಿರುಕುಳ ಅಲ್ಲವೇ? ಎಂದು ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಪ್ರಶ್ನಿಸಿದ್ದಾರೆ.
ಕಿರುಕುಳ ಕೊಡುವ ವರ್ತನೆ ಅವರದು. ಜೊತೆಯಲ್ಲೇ, ಖಿನ್ನತೆ ಒಳಗಾಗಿ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದರೆ, ಅದಕ್ಕೂ ನಾನು ಕಾರಣವೇ?. ಆ ಮನುಷ್ಯ ಗೋ ಮುಖ ವ್ಯಾಘ್ರ, ಸುಳ್ಳು, ಆಕ್ರಮಣಕಾರಿ ದುರ್ವರ್ತನೆ, ಬೆದರಿಕೆ ಒಡ್ಡುವ ವರ್ತನೆ ಇದರಿಂದಲೇ ಸಾಬೀತಾಗುತ್ತದೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪ ಆರೋಪಿಸಿದ್ದಾರೆ.