ದರ್ಶನ್ & ಗ್ಯಾಂಗ್ (Darshan & gang ) ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಗೆ (Renuka swamy murder case) ಸಂಬಂಧಪಟ್ಟಂತೆ, ಪರಪ್ಪನ ಅಗ್ರಹಾರದಲ್ಲಿ ಇರುವ ೧೭ ಆರೋಪಿಗಳ ಪೈಕಿ ,ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ (Tumkur jail) ಶಿಫ್ಟ್ ಮಾಡಲಾಗಿದೆ.
![](https://pratidhvani.com/wp-content/uploads/2024/06/IMG_8253-4.jpeg)
ಇದೇ ಪ್ರಕರಣದ ಆರೋಪಿಗಳಾದ ರವಿಶಂಕರ್, ಕಾರ್ತೀಕ್, ಕೇಶವ್ ಮತ್ತು ನಿಖಿಲ್ ರನ್ನ ತುಮಕೂರು ಜೈಲಿಗೆ ಶಿಫ್ಟ್ ಗೆ ಮಾಡುವಂತೆ 24 ನೇ ಎಸಿಎಂಎಂ ಕೋರ್ಟ್ (ACMM Court) ಆದೇಶ ಅಧೀಕೃತ ಆದೇಶ ನೀಡಿದೆ.
ಈ ಕೊಲೆ ಪ್ರಕರಣದಲ್ಲಿ ಮೊದಲು ತಾವೇ ಕೊಲೆಮಾಡಿದ್ದಾಗಿ ಪೊಲೀಸರ ಮುಂದೆ ಶರಣಾಗಿದ್ದ ಕಾರ್ತೀಕ್, ಕೇಶವ್ &ನಿಖಿಲ್, ಸಿನಿಮಾ ಸ್ಟೈಲ್ ನಲ್ಲಿ ಕಥೆ ಕಟ್ಟಿದ್ರು.
![](https://pratidhvani.com/wp-content/uploads/2024/06/IMG_8370-1.jpeg)
ನಂತರ ಪೊಲೀಸರಗೆ ಅನುಮಾನ ಬಂದು , ಇವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ,ಈ ಮೂವರ ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ರು. ಈ ಮೂವರು ಬಾಯ್ಬಿಟ್ಟಿದ್ದರಿಂದ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆಗಿತ್ತು.
ಇಂದು ಕೋರ್ಟ್ ನಲ್ಲಿ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆ ಗೆ ಆಕ್ಷೇಪ ವ್ಯಕ್ತಪಡಿಸಿದ್ರು. ಆದ್ರೂ ಯಾಕೆ ಆರೋಪಿಗಳ ವರ್ಗಾವಣೆ ಅಗತ್ಯ ಎಂದು ವಿವರಿಸಿದ ಎಸ್ಪಿಪಿ ಪಿ.ಪ್ರಸನ್ನಕುಮಾರ್ ನ್ಯಾಯಾಧೀಶರ ಗಮನಕ್ಕೆ ತಂದಿದ್ದರಿಂದ ಕೋರ್ಟ್ ಈ ಆದೇಶ ನೀಡಿದೆ.