ನಿನ್ನೆಯಷ್ಟೆ ಯೋಗೇಶ್ವರ್ (Cp yogeshwar) ತಮ್ಮ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಚನ್ನಪಟ್ಟಣ್ಣ ಉಪ ಚುನಾವಣೆ (channapattana Bi election) ಕಣದಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಇತ್ತ ಕಾಂಗ್ರೆಸ್ ಕೂಡ ಅಲರ್ಟ್ ಆಗಿದೆ. ಒಂದು ವೇಳೆ ಬಾಗಿಲು ಯೋಗೇಶ್ವರ್ ಕಾಂಗ್ರೆಸ್ ಕದ ತಟ್ಟಿದ್ರೆ ತಕ್ಷಣವೇ ಡೋರ್ ಓಪನ್ ಮಾಡಲು ಕಾಂಗ್ರೆಸ್ ಸಿದ್ಧವಾಗಿದೆ.

ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶತ್ರುಗಳ ಶತ್ರು ಮಿತ್ರನನ್ನ ಸೆಳೆಯಲು ಕೈ ರಣತಂತ್ರ ಹೂಡಿದೆ ಎನ್ನಲಾಗ್ತಿದೆ. ಮಾಜಿ ಸಚಿವರನ್ನ ಸೆಳೆದು ಕೇಂದ್ರ ಸಚಿವರಿಗೆ ಪಾಠ ಕಲಿಸಲು ಡಿಸಿಎಂ ಡಿ.ಕೆ ಶಿವಕುಮಾರ್ (Dom Dk shiakumar) ತಂತ್ರ ರೂಪಿಸಲು ಮುಂದಾಗಿದ್ದಾರೆ. ಒಂದ್ವೇಳೆ ಸಿ.ಪಿ.ಯೋಗೇಶ್ವರ್ ಕಾಂಗ್ರಸ್ (Congress) ನಿಂದ ಸ್ಪರ್ಧೆ ಮಾಡಿದ್ದೇ ಆದಲ್ಲಿ, ಜಟಾಪಟಿ ಇನ್ನಷ್ಟು ಹೆಚ್ಚಾಗೋದ್ರಲ್ಲಿ ಅನುಮಾನೇ ಇಲ್ಲ.
ಇತ್ತೀಚೆಗಷ್ಟೇ ಯೋಗೇಶ್ವರ್ ಕೈ ನಾಯಕರ ಸಂಪರ್ಕದಲ್ಲಿದ್ದಾರೆಂದು ಹೆಚ್ಡಿಕೆ (HD kumaraswamy) ಆರೋಪ ಮಾಡಿದ್ದರು. ಈ ರೀತಿ ಹೆಚ್ಡಿಕೆ ಹೇಳಿಕೆ ನೀಡಿದ ಮರುದಿನವೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ರನ್ನ ಮುಂದಿಟ್ಟುಕೊಂಡು ಕುಮಾರಸ್ವಾಮಿಗೆ ಕೌಂಟರ್ ಕೊಡಲು ಡಿಕೆಶಿ ಸ್ಕೆಚ್ ಹಾಕಿದ್ದಾರೆ ಎನ್ನಲಾಗಿದೆ.