ಉಡುಪಿ: ಉಡುಪಿ ಜಿಲ್ಲೆ ಕೊಲ್ಲೂರಿನ ಬೆಳ್ಳಾಲ ಸಮೀಪ ಇತ್ತೀಚೆಗೆ ಬಂದೂಕಿನಿಂದ ಗುಂಡು ಹಾರಿಸಿ ಗೋವುಗಳ ಸರಣಿ ಹತ್ಯೆ ಮಾಡಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಗೋವುಗಳನ್ನು ಕಳಕೊಂಡ ಸಂತ್ರಸ್ತರ ಮನೆಗಳಿಗೆ ವಿಶ್ವ ಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ನೇತೃತ್ವದ ನಿಯೋಗ ಭೇಟಿ ನೀಡಿ ಧೈರ್ಯ ತುಂಬಿತು.ಇದಕ್ಕೂ ಮುನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೈಂದೂರು ಪ್ರಖಂಡದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
![](https://pratidhvani.com/wp-content/uploads/2023/10/WhatsApp-Image-2023-10-05-at-1.47.20-PM-1.jpeg)
ಘಟನೆ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ನರಸಿಂಹ ಕುಲಾಲ್ ನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಕೊಲ್ಲೂರು ಪೊಲೀಸ್ ಠಾಣಾಧಿಕಾರಿಗೆ ನಿಯೋಗ ಮನವಿ ಸಲ್ಲಿಸಿತು.ಕೊಲ್ಲೂರಿನ ಬೆಳ್ಳಾಲ ಅಂಗಡಿಜೆಡ್ಡುವಿನಲ್ಲಿ ಮೇಯಲು ಬಿಟ್ಟಿದ್ದ ಗುಲಾಬಿ ಅವರಿಗೆ ಸೇರಿದ್ದ ದನ ಹಾಗೂ ಇತರ ದನಗಳಿಗೆ ಆರೋಪಿ ನರಸಿಂಹ ಕೋವಿಯಿಂದ ಶೂಟ್ ಮಾಡಿದ್ದರು. ಪರಿಣಾಮ ದನ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದರೆ ಇತರ ಮೂರು ದನಗಳಿಗೆ ಗಾಯಗಳಾಗಿದ್ದವು.
![](https://pratidhvani.com/wp-content/uploads/2023/10/WhatsApp-Image-2023-10-05-at-1.47.20-PM.jpeg)
ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ನರಸಿಂಹ ಅವರನ್ನು ವಿಚಾರಿಸಿದಾಗ ದನಕ್ಕೆ ಹೊಡೆದ ಹಾಗೆ ನಿಮಗೂ ಹೊಡೆಯುತ್ತೇನೆ ಎಂದು ಆರೋಪಿ ಬೆದರಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.