• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಇಂದಿನಿಂದ ಚಿತ್ರಮಂದಿರ, ದೇವಸ್ಥಾನ ಸಂಪೂರ್ಣವಾಗಿ ಅನ್‌ಲಾಕ್‌: ಕರೋನಾ ಕಭಂದಬಾಹುವಿನಿಂದ ಹೊರ ಬರುತ್ತಿರುವ ಕರ್ನಾಟಕ.!!

ಕರ್ಣ by ಕರ್ಣ
October 1, 2021
in ಕರ್ನಾಟಕ
0
ಇಂದಿನಿಂದ ಚಿತ್ರಮಂದಿರ, ದೇವಸ್ಥಾನ ಸಂಪೂರ್ಣವಾಗಿ ಅನ್‌ಲಾಕ್‌: ಕರೋನಾ ಕಭಂದಬಾಹುವಿನಿಂದ ಹೊರ ಬರುತ್ತಿರುವ ಕರ್ನಾಟಕ.!!
Share on WhatsAppShare on FacebookShare on Telegram

ಹಲವು‌ ತಿಂಗಳುಗಳ ಬಳಿಕ‌ ಇಡೀ ರಾಜ್ಯ ಯಥಾಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲದಕ್ಕೂ ಅನುಮತಿ ದೊರೆಯುತ್ತಿದೆ.‌ ಕರೋನಾ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ‌ ಕಳೆದ 25ರಂದು ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಎಲ್ಲದಕ್ಕೂ 100% ರಷ್ಟು ಅನುಮತಿ ಕೊಟ್ಟು ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಸಂಪೂರ್ಣವಾಗಿ ಅನ್ ಲಾಕ್ ಆಗುತ್ತಿದೆ.

ADVERTISEMENT

ಕರೋನಾ ಎರಡ‌ನೇ ಅಲೆ ವೇಳೆ ಎಲ್ಲದರ ಮೇಲೂ ನಿರ್ಬಂಧ ಹೇರಿದ್ದ ಸರ್ಕಾರ.!!ಚಿತ್ರರಂಗಕ್ಕೆ ಹಿಡಿದಿದ್ದ ಗ್ರಹಣ ಇಂದಿಗೆ ಮುಕ್ತಾಯವಾಗುತ್ತಿದೆ. ಕರೊನಾ 2ನೇ ಅಲೆಯ ಬಳಿಕ, ಭರ್ತಿ 5 ತಿಂಗಳಾದ್ಮೇಲೆ 100% ಆಸನ ಭರ್ತಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಗಾಂಧಿನಗರದಲ್ಲಿ ಮತ್ತೆ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ಹೌದು, ಬರೋಬ್ಬರಿ 5 ತಿಂಗಳ ವನವಾಸ ಮುಗಿಸಿ, ಚಿತ್ರರಂಗ ಮತ್ತೆ ಪುಟಿದೇಳಲು ಸಜ್ಜಾಗಿದೆ. ಒಂದೂವರೆ ವರ್ಷದಿಂದ ಕರೊನಾ ಕಾಟಕ್ಕೆ ನಲುಗಿಹೋಗಿದ್ದ ಸ್ಯಾಂಡಲ್‌ವುಡ್‌ನಲ್ಲಿ, ಮತ್ತೆ ಭರವಸೆಯ ಬೆಳಕು ಮೂಡಿದೆ.. ಇಂದಿನಿಂದ  100 % ಆಸನ ಭರ್ತಿಗೆ ಸರಕಾರ ಅನುಮತಿ ಕೊಟ್ಟಿರುವುದರಿಂದ, ಗಾಂಧಿನಗರದಲ್ಲಿ ಸಡಗರ ಮನೆಮಾಡಿದೆ. ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ನಟನೆಯ ಯುವರತ್ನ ಸಿನಿಮಾಗೆ, ಮೂರೇ ದಿನದಲ್ಲಿ ಶಾಕ್ ಕೊಟ್ಟಿತ್ತು ಸರ್ಕಾರ. ಅದಾಗಿ  5 ತಿಂಗಳ ಬಳಿಕ ಇಂದಿನಿಂದ  ಮತ್ತೆ ಬೆಳ್ಳಿಪರದೆಗೆ ಹೊಸ ರಂಗು ಬರಲಿದೆ.

ಮೊದಲ ಚಿತ್ರವಾಗಿ ತೆರೆಗೆ ಬರ್ತಿದೆ ‘ಕಾಗೆ ಮೊಟ್ಟೆʼ & ʻಮೋಹನದಾಸʼ.!!

50% ನಿರ್ಬಂಧದ ನಡುವೆಯೇ ಕೆಲ ಚಿತ್ರಗಳು ರಿಲೀಸ್ ಆದರೂ, ಅಷ್ಟೇನೂ ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈಗ 100% ಆಸನ ಭರ್ತಿಗೆ ಅವಕಾಶ ಸಿಕ್ಕಿರುವುದರಿಂದ, ಮೊದಲ ಚಿತ್ರವಾಗಿ ‘ಕಾಗೆ ಮೊಟ್ಟೆʼ ಹಾಗೂ ʻಮೋಹನದಾಸʼ ಎಂಬ ಎರಡು ಚಿತ್ರಗಳು  ಬಿಡುಗಡೆ ಆಗ್ತಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಅಭಿನಯದ, ‘ಕಾಗೆ ಮೊಟ್ಟೆ’ ಸಿನಿಮಾ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿದೆ. ಈ ಮೂಲಕ ಸಿನಿಪ್ರಿಯರಿಗೆ ಬ್ಯಾಕ್ ಟು ಬ್ಯಾಕ್ ಹಬ್ಬವೋ ಹಬ್ಬ. ಮುಂದಿನ ವಾರದಿಂದ ಚಿತ್ರಮಂದಿರಗಳು ಮತ್ತಷ್ಟು ಕಳೆಗಟ್ಟುವ ನಿರೀಕ್ಷೆ ಇವೆ. ನಿನ್ನ ಸನಿಹಕೆ, ಸಲಗ, ಕೋಟಿಗೊಬ್ಬ-3, ಭಜರಂಗಿ-2 ಚಿತ್ರಗಳು, ಒಂದಾದ  ಮೇಲೊಂದರಂತೆ ತೆರೆಮೇಲೆ ಅಪ್ಪಳಿಸಲಿವೆ.

ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲಾ ಓಪನ್.!!

ಚಿತ್ರ ಮಂದಿರದ ಜೊತೆಗೆ ಧಾರ್ಮಿಕ ಕ್ಷೇತ್ರದ ಕಾರ್ಯ ಚಟುವಟಿಕೆಗಳಿಗೂ ಸರ್ಕಾರ ಸಂಪೂರ್ಣ ಅನುಮತಿ ಕೊಟ್ಟಿದೆ. ‌ಕರೋನಾ ಎರಡನೇ ವೇಳೆ ಬಂದ್ ಆಗಿದ್ದ ದೇವಸ್ಥಾನ ಮತ್ತು ಇತರೆ ಧಾರ್ಮಿಕ‌ ದೇವಾಲಯಗಳು, ಅದಾದ ಬಳಿಕ ಹಂತ ಹಂತವಾಗಿ ಕಾರ್ಯಚರಿಸಲು ಅನುಮತಿ ಕೊಡಲಾಗಿತ್ತು. ಆದರೆ ಶೆ.  100 ಕ್ಕೆ ನೂರರಷ್ಟು ಅನುಮತಿ ಕೊಟ್ಟಿರಲಿಲ್ಲ. ಇದೀಗ ಇಂದಿನಿಂದ ದೇವಸ್ಥಾನಗಳ ಮೇಲಿನ ನಿರ್ಬಂಧ ಕೂಡ ತೆರವಾಗುತ್ತಿದೆ. ಇದರ ಜೊತೆಗೆ ಕ್ಲಬ್, ಪಬ್ ಕೂಡ ಇಂದಿನಿಂದ ಫುಲ್ ಬಿಂದಾಸ್ ಆಗಿ ಓಪನ್ ಆಗುತ್ತಿದೆ. ಅದ್ಯಾವಗ ಕೊರೋನಾ ಮೊದಲ ಅಲೆ ಅಪ್ಪಳಿಸಿತೋ ಆಗಲೇ ಪಬ್, ಕ್ಲಬ್ ಗಳ ವ್ಯವಹಾರಕ್ಕೆ ಕಡಿವಾಣ ಬಿದ್ದಿತ್ತು. ಅದಾದ ಬಳಿಕ ಸರ್ಕಾರ ಹಾಗೂ‌ ಬಿಬಿಎಂಪಿ ಮೇಲೆ ಹಲವು ಬಾರಿ ಒತ್ತಡ ಬಿದ್ದಿದ್ದರೂ ಓಪನ್ ಮಾಡಲು ಅನುಮತಿ ಕೊಟ್ಟಿರಲಿಲ್ಲ.

ಸಿಲಿಕಾನ್ ಸಿಟಿ ಬೆಂಗಳೂರು ಇಂದಿನಿಂದ ಫುಲ್ ಓಪನ್..!!

ಸರ್ಕಾರದ ಆದೇಶ ಹೊರತಾಗಿಯೂ ಏನಾದರು ಬದಲಾವಣೆ ಬೇಕಿದ್ದರೆ ಅದನ್ನು ಮಾಡುವ ಅಧಿಕಾರ ಸರ್ಕಾರ ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಕೊಟ್ಟಿತ್ತು. ಆದರೆ ಸರ್ಕಾರದ ಆದೇಶದಂತೆ ಬಿಬಿಎಂಪಿ ಇಂದು ಕಂಪ್ಲೀಟ್ ಬೆಂಗಳೂರು ಓಪನ್ ಗೆ ಅನುಮತಿ ಕೊಟ್ಟಿದೆ. ಪಾಲಿಕೆ ಈ ಹಿಂದೆಯೇ ಎಲ್ಲದ್ದಕ್ಕೂ ಅನುಮತಿ ಕೊಡಬಹುದು ಎಂದು ಸರ್ಕಾರಕ್ಕೆ ಹೇಳಿತ್ತು. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆದು ಸರ್ಕಾರಕ್ಕೆ ವರದಿ ಕೊಟ್ಟಿತ್ತು. ಹೀಗಾಗಿ ಮಹಾನಗರ ಬೆಂಗಳೂರು ಕೊರೋನಾ ಕಭಂದಬಾಹುವಿನಿಂದ ಹೊರ ಬರುತ್ತಿದೆ. ಆದರೆ ಮಾಸ್ಕ್, ಸಾಮಾಜಿಕ ಅಂತರ, ಇತರೆ ಕೊರೋನಾ ರುಲ್ಸ್ ಪಾಲನೆ ಕಡ್ಡಾಯವಾಗಿರಲಿದೆ. ಇದರ ಜೊತೆಗೆ ಬಿಬಿಎಂಪಿ ನಗರದ ಮೇಲೆ ಹದ್ದಿನ ಕಣ್ಣಿಡಲಿದೆ.

ನಿರ್ಬಂಧ ಸಡಿಲಿಕೆಯಾದರೂ ಬಿಬಿಎಂಪಿಯಿಂದ ನಗರಕ್ಕೆ ಕಣ್ಗಾವಲು.!!

• ಆರಂಭದಲ್ಲಿ ಥಿಯೇಟರ್ ಗೊಬ್ಬರು ಪೊಲೀಸ್ ಸಿಬ್ಬಂದಿ ನಿಯೋಜನೆ

•  ದಿನ ಕಳೆಯುತ್ತಿದ್ದಂತೆ ಪರಿಶೀಲಿಸಲು ಸಪ್ರೈಸ್ ವಿಸಿಟ್ ಸಹ ಮಾಡಬಹುದು

• ಬಿಬಿಎಂಪಿ ವ್ಯಾಪ್ತಿಯ ವಲಯಗಳ ಕೋವಿಡ್ ರೂಲ್ ಫಾಲೊ ಮಾಡುವ ಮಾರ್ಷಲ್ ಟೀಂ ನಿಗಾ ಇಡಬೇಕು

• ಥಿಯೇಟರ್ ಗೆ ಮಾರ್ಷಲ್ ಭೇಟಿ ಕೊಟ್ಟು ಕೋವಿಡ್ ನಿಯಮಗಳ ಪಾಲನೆ ಆಗಿದ್ದೇಯಾ ಇಲ್ವ ಅಂತ ಗಮನ ಹರಿಸಲಿದ್ದಾರೆ

• ಮಾರ್ನಿಂಗ್ ಶೋ, ಸೆಕೆಂಡ್ ಶೋ ಎಲ್ಲ ಟೈಮ್ ನಲ್ಲೂ ಚೆಕ್ಕಿಂಗ್ ನಡೆಯಲಿದೆ

• ಟಿಕೆಟ್ ಖರೀದಿ ರೂಲ್ ಬ್ರೇಕ್ ಮಾಡಿದವ್ರು ದುಪ್ಪಟ್ಟು ದಂಡ ಕಟ್ಟಬೇಕು

Tags: Covid 19ಅನ್ಲಾಕ್‌ಕರೋನಾಕರ್ನಾಟಕಕರ್ನಾಟಕ ಸರ್ಕಾರಕೋವಿಡ್-19ಬೆಂಗಳೂರುಲಾಕ್‌ಡೌನ್‌
Previous Post

ʼನನ್ನ ಮಗನನ್ನು ಅನ್ಯಾಯವಾಗಿ ಕೊಲ್ಲಲಾಯಿತುʼ ಅಸ್ಸಾಂ ಪೊಲೀಸರಿಂದ ಹತ್ಯೆಗೊಳಗಾದ ಬಾಲಕನ ಪೋಷಕರ ಅಳಲು

Next Post

ಮಂಗಳೂರು ಅನೈತಿಕ ಪೊಲೀಸ್ ಗಿರಿ ಹಿಂದಿರುವ ಅಸಲೀ ಅಜೆಂಡಾ ಏನು?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಮಂಗಳೂರು ಅನೈತಿಕ ಪೊಲೀಸ್ ಗಿರಿ ಹಿಂದಿರುವ ಅಸಲೀ ಅಜೆಂಡಾ ಏನು?

ಮಂಗಳೂರು ಅನೈತಿಕ ಪೊಲೀಸ್ ಗಿರಿ ಹಿಂದಿರುವ ಅಸಲೀ ಅಜೆಂಡಾ ಏನು?

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada