ಕೊರೋನಾ ನಾಲ್ಕನೆ ಅಲೆಯ ಆತಂಕದ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕೇಸ್ಗಳ ಸಂಖ್ಯೆ ಹೆಚ್ಚಾಗ್ತಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಇಷ್ಟು ದಿನ ನಿಂತಿದ್ದ ಕೇಸ್ಗಳು ಈಗ ಮತ್ತೆ ಪಾಸಿಟಿವ್ ಬರಲು ಶುರುವಾಗಿದೆ. ಇದರಿಂದ ರೋಗಿಗಳಲ್ಲಿ ಹಾಗೂ ಆಸ್ಪತ್ರೆಯಲ್ಲೂ ನಾಲ್ಕನೆ ಅಲೆಯ ಭೀತಿ ಎದುರಾಗಿದೆ. ನಗರದಲ್ಲಿ ನಿಧಾನಗತಿಯಲ್ಲಿ ಕೊರೋನಾ ಕೇಸ್ಗಳು ಏರಿಕೆಯಾಗುತ್ತಿದ್ದು, ಇಷ್ಟು ದಿನ ಆಸ್ಪತ್ರೆಯಲ್ಲಿ ಒಂದು ಕೊರೋನಾ ಕೇಸ್ಗಳು ದಾಖಲಾಗ್ತಿರ್ಲಿಲ್ಲ. ಆದರೀಗ ನಾಲ್ಕನೆ ಅಲೆಯ ಮುನ್ಸೂಚನೆಯ ಬೆನ್ನಲ್ಲೇ ಆಸ್ಪತ್ರೆಗಳಲ್ಲೂ, ಕೇಸ್ಗಳು ದಾಖಲಾಗೋದಕ್ಕೆ ಶುರುವಾಗಿದೆ. ಇದೀಗ ರೋಗಿಗಳಿಗೆ ಆಸ್ಪತ್ರೆಯಲ್ಲಿ ಕೋವಿಡ್ ಪಾಸಿಟಿವ್ ಆಗ್ತಿದೆ.
ನಗರದ ಜಯದೇವ ಆಸ್ಪತ್ರೆಯಲ್ಲಿ, ಬರುತ್ತಿರುವ ರೋಗಿಗಳಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿ ಕೊಳ್ಳುತ್ತಿದೆ. ದಿನಕ್ಕೆ 1-2 ರೋಗಿಗಳಲ್ಲಿ ಪಾಸಿಟಿವ್ ಕಂಡು ಬರುತ್ತಿದೆ. ಹೀಗಾಗಿ ಇನ್ನು ತಡ ಮಾಡೋದು ಬೇಡ ಅಂತ ಆಸ್ಪತ್ರೆಯಲ್ಲಿ ಈಗ ಅಡ್ಮಿಟ್ ಆದವರಿಗೆ ಟೆಸ್ಟಿಂಗ್ ಆರಂಭ ಮಾಡಲಾಗುತ್ತಿದೆ. ಸರ್ಜರಿ ಹಾಗೂ ಇನ್ಪೇಷೆಂಟ್ಗಳಿಗೆ ಟೆಸ್ಟಿಂಗ್ ಆರಂಭಿಸಲಾಗಿದ್ದು, ಕಳೆದ ನಾಲ್ಕೈದು ದಿನದಿಂದ ಆಸ್ಪತ್ರೆಯಲ್ಲಿ ಕೇಸ್ಗಳು ದಾಖಲಾಗಿವೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಬೇಕಿದೆ. ಮಾಸ್ಕ್ ಅನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಈಗಾಗಲೇ ದೇಶಕ್ಕೆ ನಾಲ್ಕನೇ ಅಲೆಯು ಕಾಲಿಟ್ಟಿದೆ. ರೋಗಿಗಳಿಗೂ ಕೂಡಾ ಟೆಸ್ಟಿಂಗ್ ಅವಶ್ಯಕ ಅಂತಿದ್ದಾರೆ ತಜ್ಞ ವೈದ್ಯ ಡಾ.ಸಿ.ಎನ್.ಮಂಜುನಾಥ್.
ಹಾಗೇ 4ನೇ ಅಲೆ ಬಗ್ಗೆ ಡಾ.ಸಿ.ಎನ್.ಮಂಜುನಾಥ್ ಮಾಹಿತಿ ನೀಡಿದ್ದು, 3ನೇ ಅಲೆಯಂತೆ 4ನೇ ಅಲೆಯೂ ಶಾರ್ಟ್ ಟರ್ಮ್. ತಿಂಗಳೊಳಗೆ 4ನೇ ಅಲೆ ಕಮ್ಮಿ ಆಗುವ ಸಾಧ್ಯತೆ ಇದೆ. 3ನೇ ಅಲೆಯಂತೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಇರುತ್ತೆ. ಸಾವಿನ ಪ್ರಮಾಣ ಕೂಡ ಕಡಿಮೆ ಇರಲಿದೆ. ಶೇಕಾಡ 90ರಷ್ಟು ಮಂದಿ ವ್ಯಾಕ್ಸಿನ್ ಪಡೆದ ಕಾರಣ ಆತಂಕ ಅಷ್ಟಿಲ್ಲ. ಆದರೆ ಮುಂಜಾಗೃತ ಕ್ರಮ ಅತ್ಯಗತ್ಯ ಎಂದಿದ್ದಾರೆ.

ಕೊರೋನಾ ನಾಲ್ಕನೆ ಅಲೆ ಭೀಕರವಾಗಿರದೆ ಇದ್ದರೂ ಜನರಿಗೆ ಇದರ ಬಗ್ಗೆ ಎಚ್ಚರ ಇರ್ಬೇಕು. ಜನರು ನಿರ್ಲಕ್ಷ್ಯ ತೋರಿಸಬಾರದು ಎಂದು ತಜ್ಞರು ಸಲಹೆ ನೀಡಿದ್ದು ನಾಲ್ಕನೆ ಅಲೆಯ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ ಎನ್ನಲಾಗಿದೆ. ಈಗಾಗಲೇ ಸರ್ಕಾರ ಕೂಡ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.