
ದೇಶದಲ್ಲಿ ಕರ್ನಾಟಕ ನಂಬರ್ ಒನ್ ಭ್ರಷ್ಟಾಚಾರ ರಾಜ್ಯ ಎಂಬ ಬಸವರಾಜ್ ರಾಯರೆಡ್ಡಿ ಹೇಳಿಕೆ ಬಿಜೆಪಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಈ ವಿಚಾರದ ಬಗ್ಗೆ ಬಸವರಾಜ್ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ನಾನು ಕೊಪ್ಪಳ ಜಿಲ್ಲಾ ಪರಿಷತ್ತಿನ ಸಭಾಂಗಣದ ಸಭೆಯಲ್ಲಿ ಹಾಜರಾಗಿದ್ದೆ. ಕಲ್ಯಾಣ ಕರ್ನಾಟಕದಲ್ಲಿ ಕಳೆದ ಇಪ್ಪತ್ತು ವರ್ಷಗಳ ಅಭಿವೃದ್ಧಿ ಬಗ್ಗೆ ಚರ್ಚೆ ಆಗ್ತಿತ್ತು. ಅಲ್ಲಿ ಹಿಂದುಳಿದ ಜಿಲ್ಲೆಗಳ ಬಗ್ಗೆಯೂ ಚರ್ಚೆ ನಡೀತ್ತಾ ಇತ್ತು. ನಾನು ಇದನ್ನು ಮಾಧ್ಯಮಗಳಿಗೆ ಕೊಟ್ಟ ಹೇಳಿಕೆ ಅಲ್ಲ. ನನಗೇನು ಭಯ ಇಲ್ಲ, ಸಿಎಂ ನನಗೇನು ಇಲ್ಲ. ಏನೇ ಇದ್ದರೂ ಧೈರ್ಯ ವಾಗಿ ಹೇಳ್ತೀನಿ. ಗುಣಮಟ್ಟದ ಕಾಮಗಾರಿಗಳು ಆಗುತ್ತಿಲ್ಲ. ಹಳೆ ಮೈಸೂರು ಭಾಗದಲ್ಲಿ ಹೇಗೋ ಸರಿಯಾಗಿ ಆಗುತ್ತದೆ. ಆದರೆ ನಮ್ಮಲ್ಲಿ ಯಾಕೆ ಗುಣಮಟ್ಟದ ಕಾಮಗಾರಿ ಗಳು ಆಗುತ್ತಿಲ್ಲ..? ಭ್ರಷ್ಟ ರಾಜ್ಯ ವ್ಯವಸ್ಥೆ ಆಗಿ ಬಿಟ್ಟಿದೆ ಎಂದು ಹೇಳಿದ್ದೆ ಎಂದಿದ್ದಾರೆ.

ಮುಖ್ಯಮಂತ್ರಿಗಳಿಗೆ ಕೊಡುವ ರಿಪೋರ್ಟ್ನಲ್ಲಿ ಕೊಡಿ ಎಂದು ಹೇಳಿದ್ದೇನೆ. ದು ಮಾಧ್ಯಮಕ್ಕೆ ಕೊಟ್ಟ ಮಾಹಿತಿ ಅಲ್ಲ, ಅಧಿಕಾರಿಗಳ ಸಭೆಯಲ್ಲಿ ಹೇಳಿದ್ದೇನೆ. ಅಸೆಂಬ್ಲಿಯಲ್ಲೂ ಇದನ್ನು ಸರಿ ಮಾಡುವಂತೆ ನಾನು ಹೇಳಿದ್ದೇನೆ. ಸಿದ್ದರಾಮಯ್ಯ ಸರ್ಕಾರದ ಸಮಸ್ಯೆ ಅಲ್ಲ. ನಮ್ಮ ರಾಜ್ಯ ಸುಧಾರಣೆ ಆಗಬೇಕೆಂದು ನಮ್ಮೆಲ್ಲರ ಆಸೆ. ನಾವೆಲ್ಲರೂ ಕೆಟ್ಟು ಹೋಗಿದ್ದೇವೆ ನಾವು ಸರಿ ಇಲ್ಲ ಎಂದು ಹೇಳಿದ್ದೇವೆ. ನಾಮಪತ್ರ ಕೊಟ್ಟ ದಿನದಿಂದಲೇ ಭ್ರಷ್ಟಾಚಾರ ಶುರುವಾಗ್ತದೆ ಎಂದು ಹೇಳಿದ್ದೇನೆ. ಸಿದ್ದರಾಮಯ್ಯ ಸರ್ಕಾರ ಹಾಗೂ ನಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ನಾನು ಹೇಳಿಲ್ಲ. ಭ್ರಷ್ಟಾಚಾರ ವ್ಯವಸ್ಥೆ ನಮ್ಮ ರಾಜ್ಯಕ್ಕೆ ಏನು ಬಂದಿದೆ ಅದು ಹೋಗಬೇಕು ಎಂದಿದ್ದೇನೆ ಎನ್ನುವ ಮೂಲಕ ಸಮರ್ಥಿಸಿಕೊಂಡಿದ್ದಾರೆ.

ಅಭಿವೃದ್ಧಿ ಹೆಸರಲ್ಲಿ ಕಳಪೆ ಕಾಮಗಾರಿ ಮಾಡೋರರನ್ನು ಸಸ್ಪೆಂಡ್ ಮಾಡಿ, ಯುವ ನಾಯಕರಾದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ ಒಳ್ಳೆಯ ಕೆಲಸ ಮಾಡ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಬಗ್ಗೆ ಗೌರವ ಇದೆ. ನನಗೆ ಅವ್ರು ಮುಂದೆ ಅಧಿಕಾರ ಕೊಡ್ತಾರೋ ಇಲ್ವೋ..? ಮಂತ್ರಿ ಮಾಡಲಿ ಬಿಡಲಿ, ಇವತ್ತೆ ಈ ಜವಾಬ್ದಾರಿ ಬಿಡಿ ಅಂದರೆ ಬಿಡಲು ಸಿದ್ದನಿದ್ದೇನೆ. ಇದನ್ನು ಪತ್ರಿಕೆಯಲ್ಲಿ ಹೇಳಿಲ್ಲ, ಆಮೇಲೆ ನಾನು ಯಾವುದೇ ಪಕ್ಷವನ್ನು ದೋಷಣೆ ಮಾಡಿಲ್ಲ. ಕರ್ನಾಟಕ ಹಿತದೃಷ್ಟಿಯಿಂದ ನಾನು ಇದನ್ನು ಹೇಳಿದ್ದೇನೆ, ಹೊರತು, ನಮ್ಮ ಸರ್ಕಾರ ಭ್ರಷ್ಟಾಚಾರದಲ್ಲಿದೆ ಎಂದು ಹೇಳಿಲ್ಲ. ಬಿಜೆಪಿ ಜೆಡಿಎಸ್ನಂತೆ ಮಹಾ ಭ್ರಷ್ಟಾಚಾರ ಆಡಳಿತ ನಾವು ಕೊಟ್ಟಿಲ್ಲ. ಯಾಕೆಂದರೆ ಅವರೇ ಜೈಲಿಗೆ ಹೋಗಿ ಬಂದಿದ್ದಾರೆ ಎಂದಿದ್ದಾರೆ.
ಭ್ರಷ್ಟಾಚಾರ ಮುಂದುವರಿಸಿಕೊಂಡು ಬರುತ್ತಿದೆ. ಇದು ನಿಲ್ಲಬೇಕು ಅಂತಾ ಹೇಳಿದ್ದೇನೆ. ಇಡೀ ವ್ಯವಸ್ಥೆ ಹಾಳಾಗಿ ಹೋಗಿದೆ. ನಮ್ಮ ಮುಖ್ಯಮಂತ್ರಿಗಳು ಭ್ರಷ್ಟಾಚಾರ ವ್ಯವಸ್ಥೆ ಕಡಿವಾಣಕ್ಕೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಇವತ್ತಿನ ಆಡಳಿತದಲ್ಲಿ ಕರೆಪ್ಸನ್ ಇಲ್ಲ ಅಂತಾ ಹೇಳೋಕೆ ಸಾಧ್ಯವಿಲ್ಲ. ನಮ್ಮಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳು ನಡೆಯುತ್ತಿವೆ. ಹಿಂದಿನ ಸರ್ಕಾರಗಳು ಮಾಡಿರೋ ಮಹಾ ಭ್ರಷ್ಟಾಚಾರದ ಬಗ್ಗೆಯೂ ಚರ್ಚೆ ಮಾಡಲಿ. ನಾನು ಆತ್ಮವಂಚನೆ ಮಾಡಿಕೊಂಡು ಮಾತಾಡುತ್ತಿಲ್ಲ. ನಾವು ನಾವೇ ಆತ್ಮವಲೋಕನ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅಭಿವೃದ್ಧಿಯಲ್ಲಿ ಗುಣಮಟ್ಟ ಬರಬೇಕು, ಅಲ್ಲಿರುವ ಭ್ರಷ್ಟಾಚಾರ ಕಡಿಮೆ ಆಗಬೇಕು ಎಂದಿದ್ದೇನೆ. ಈ ಮಾತಿಗೆ ನಾನು ಎಂದಿಗೂ ಬದ್ದನಿದ್ದೇನೆ ಎನ್ನುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.







