ಮಂಡ್ಯ ಜಿಲ್ಲೆಯ ವಿಸಿ ನಾಲೆಗೆ (VC Canal) ತಡೆಗೋಡೆ ಇಲ್ಲದಿದ್ದರಿಂದ ಕಳೆದ 6 ವರ್ಷಗಳಲ್ಲಿ ನಾಲೆಗೆ ಬಿದ್ದು 46 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಎಚ್ಚೆತ್ತ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.

ವಿಸಿ ನಾಲೆ (VC Canal) ಎಂದರೆ ರೈತರ ಭೂಮಿಗೆ ನೀರುಣಿಸುವ ಅಕ್ಷಯಪಾತ್ರೆ ಎನ್ನಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಿಂದ ಈ ನಾಲೆಯ ವ್ಯಾಪ್ತಿಯಲ್ಲಿ ನಡೆದ ಸಾಲು ಸಾಲು ದುರಂತಗಳಿಂದ ಜನರು ಇದನ್ನು ಸಾವಿನ ನಾಲೆ ಎಂದು ಕರೆಯುವಂತಾಗಿತ್ತು.

ವಿಸಿ ನಾಲೆಯ ದಡದ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬೀಳುತ್ತಿದ್ದರು. ನಾಲೆ ವ್ಯಾಪ್ತಿಯ ಡೇಂಜರ್ ಝೋನ್ಗಳಲ್ಲಿ ತಡೆಗೋಡೆ ಇಲ್ಲದಿರಿವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು.
ಕಳೆದ ಫೆ. 3ರಂದು ಮಾಚಹಳ್ಳಿ ಸಮೀಪ ಕಾರು ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡಿ ತಡೆಗೋಡೆ ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಛಾಟಿ ಬೀಸಿತ್ತು. ಇದೀಗ ಆ ದುರಂತ ನಡೆದ 1 ತಿಂಗಳ ಒಳಗೆ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಡೇಂಜರ್ ಝೋನ್ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ.
ಮಂಡ್ಯ ಜಿಲ್ಲೆಯ ವಿಸಿ ನಾಲೆಗೆ (VC Canal) ತಡೆಗೋಡೆ ಇಲ್ಲದಿದ್ದರಿಂದ ಕಳೆದ 6 ವರ್ಷಗಳಲ್ಲಿ ನಾಲೆಗೆ ಬಿದ್ದು 46 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದೀಗ ಎಚ್ಚೆತ್ತ ಜಿಲ್ಲಾಡಳಿತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.

ವಿಸಿ ನಾಲೆ (VC Canal) ಎಂದರೆ ರೈತರ ಭೂಮಿಗೆ ನೀರುಣಿಸುವ ಅಕ್ಷಯಪಾತ್ರೆ ಎನ್ನಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಿಂದ ಈ ನಾಲೆಯ ವ್ಯಾಪ್ತಿಯಲ್ಲಿ ನಡೆದ ಸಾಲು ಸಾಲು ದುರಂತಗಳಿಂದ ಜನರು ಇದನ್ನು ಸಾವಿನ ನಾಲೆ ಎಂದು ಕರೆಯುವಂತಾಗಿತ್ತು.

ವಿಸಿ ನಾಲೆಯ ದಡದ ರಸ್ತೆ ಅತ್ಯಂತ ಕಿರಿದಾಗಿರುವುದರಿಂದ ಇಲ್ಲಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ ವಾಹನ ಸಮೇತ ನಾಲೆಗೆ ಬೀಳುತ್ತಿದ್ದರು. ನಾಲೆ ವ್ಯಾಪ್ತಿಯ ಡೇಂಜರ್ ಝೋನ್ಗಳಲ್ಲಿ ತಡೆಗೋಡೆ ಇಲ್ಲದಿರಿವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿತ್ತು.
ಕಳೆದ ಫೆ. 3ರಂದು ಮಾಚಹಳ್ಳಿ ಸಮೀಪ ಕಾರು ನಾಲೆಗೆ ಬಿದ್ದು ಮೂವರು ಸಾವನ್ನಪ್ಪಿದ್ದರು. ಈ ಬಗ್ಗೆ ‘ಪಬ್ಲಿಕ್ ಟಿವಿ’ ವಿಸ್ತೃತ ವರದಿ ಪ್ರಸಾರ ಮಾಡಿ ತಡೆಗೋಡೆ ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎಂದು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಛಾಟಿ ಬೀಸಿತ್ತು. ಇದೀಗ ಆ ದುರಂತ ನಡೆದ 1 ತಿಂಗಳ ಒಳಗೆ ಹುಲಿಕೆರೆಯಿಂದ ಜೈಪುರದವರೆಗೆ ಎರಡೂವರೆ ಕಿ.ಮೀ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಡೇಂಜರ್ ಝೋನ್ಗಳಲ್ಲೂ ತಡೆಗೋಡೆ ಹಾಕಲು ಜಿಲ್ಲಾಡಳಿತ ಮುಂದಾಗಿದೆ.