ಈ ಬಾರಿ ಬೆಂಗಳೂರು ಕೇಂದ್ರ (Bangalore central) ಲೋಕಸಭಾ ಕ್ಷೇತ್ರ ಕೊನೆ ಹಂತದ ಮತ ಎಣಿಕೆಯ ವರೆಗೂ ತೀವ್ರ ಕುತೂಹಲತೆಯನ್ನು ಕಾಯ್ದುಕೊಂಡಿತ್ತು . ಪಿಸಿ ಮೋಹನ್ (PC Mohan) ಈಗಾಗಲೇ ಎರಡು ಬಾರಿ ಸಂಸದರಾಗಿದ್ದು ಮೂರನೆಯ ಬಾರಿ ಕಣದಲ್ಲಿದ್ದರು . ಕಾಂಗ್ರೆಸ್ ನಿಂದ (Congress) ಮನ್ಸೂರ್ ಅಲಿ ಖಾನ್ (Mansoor Ali khan) ತೀವ್ರ ಪೈಪೋಟಿಯೊಡ್ಡಿದ್ದರು.
![](https://pratidhvani.com/wp-content/uploads/2024/06/IMG_8074.jpeg)
ಮತ ಎಣಿಕೆಯ ಆರಂಭದಿಂದಲೂ ಮನ್ಸೂರ್ ಅಲಿ ಖಾನ್ ಸತತವಾಗಿ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ಫಲಿತಾಂಶದ ಕನಸು ಕಂಡಿತ್ತು . ಆದರೆ ಕೊನೆ ಸುತ್ತಿನ ಮತ ಎಣಿಕೆಯಲ್ಲಿ ರೋಚಕ ತಿರುಗು ಎಂಬಂತೆ ಪಿ ಸಿ ಮೋಹನ್ ಗೆದ್ದು ಬೀಗಿದ್ದಾರೆ.
ಪಿ ಸಿ ಮೋಹನ್ ಗೆಲುವು ರಾಜ್ಯ ಬಿಜೆಪಿ ಪಾಳ್ಯಕ್ಕೆ ಸಂತಸವನ್ನುಂಟು ಮಾಡಿದೆ. ಕಾರಣ ಅದಾಗಲೇ ರಾಜ್ಯದಲ್ಲಿ 10 ಸ್ಥಾನಗಳನ್ನು ಗೆದ್ದ ವಿಶ್ವಾಸದಲ್ಲಿದ್ದ ಕಾಂಗ್ರೆಸ್ ಮನ್ಸೂರ್ ಅಲಿ ಖಾನ್ ಸೋಲಿನ ಮೂಲಕ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಹೀಗಾಗಿ ಪಿಸಿ ಮೋಹನ್ ಗೆಲುವು ಕಾಂಗ್ರೆಸ್ ಎರಡಂಕಿ ಫಲಿತಾಂಶದ ನಿರೀಕ್ಷೆಗೆ ಬ್ರೇಕ್ ಹಾಕಿದೆ.