ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುತ್ತಿರುವ ದಿನದಂದು ತೃಣಮೂಲ ಕಾಂಗ್ರೆಸ್ ಮುಖವಾಣಿ ‘ಜಾಗೋ ಬಾಂಗ್ಲಾ’ ಕಾಂಗ್ರೆಸ್ ಪಕ್ಷದದು ಕೇವಲ ಬೂಟಾಟಿಕೆ ನಡವಳಿಕೆ ಎಂದು ವರದಿ ಮಾಡಿದೆ.
‘ರಾಹುಲ್ಗೆ ಇಡಿಯಿಂದ ಸಮನ್ಸ್, ಕಾಂಗ್ರೆಸ್ ಪ್ರತಿಭಟನೆ, ಸೋನಿಯಾ ಆಸ್ಪತ್ರೆಗೆ ದಾಖಲು ಎಂಬ ಶೀರ್ಷಿಕೆಯಲ್ಲಿ ತೃಣಮೂಲ ಮುಖವಾಣಿ ಜಾಗೋ ಬಾಂಗ್ಲಾ ಮುಖಪುಟದಲ್ಲಿ ಪ್ರಕಟಿಸಿದೆ. “ಏಜೆನ್ಸಿಗಳಿಂದ ಅವರಿಗೆ ಕರೆ ಬಂದಾಗ, ಕಾಂಗ್ರೆಸ್ನ ಉನ್ನತ ನಾಯಕತ್ವವು ಭಯದಲ್ಲಿ ನಡುಗಿದೆ ” ಎಂದು ವರದಿ ಮಾಡಿದೆ.
ಕೋವಿಡ್-19 ಸಂಬಂಧಿತ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜೂನ್ 23 ರಂದು ಕೇಂದ್ರ ಏಜೆನ್ಸಿಯ ಮುಂದೆ ಹಾಜರಾಗಲಿದ್ದಾರೆ. ಪಿಎಂಎಲ್ಎ ಅಡಿಯಲ್ಲಿ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.
” ಕಾಂಗ್ರೆಸ್ನ ಈ ರಾಷ್ಟ್ರವ್ಯಾಪಿ ಪ್ರತಿಭಟನೆಯ ಕರೆಯು ಅವಕಾಶವಾದ ಮತ್ತು ದ್ವಂದ್ವ ನೀತಿಯ ರಾಜಕೀಯಕ್ಕೆ ಉದಾಹರಣೆಯಾಗಿದೆ” ಎಂದು ಮುಖವಾಣಿ ವರದಿ ಮಾಡಿದೆ.
ನಂತರ ಟಿಎಂಸಿ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಆದಿ ರಂಜನ್ ಚೌಧರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, “ರಾಜ್ಯದಲ್ಲಿ ತಮ್ಮ ಪಕ್ಷದ ಸಂಖ್ಯೆಯನ್ನು ಶೂನ್ಯಕ್ಕೆ ತಂದಿರುವ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಪ್ರತಿದಿನ ಟಿಎಂಸಿ ಮೇಲೆ ದಾಳಿ ನಡೆಸುತ್ತಿದ್ದರು. ಅವರು ಅಥವಾ ಕಾಂಗ್ರೆಸ್ ನಾಯಕತ್ವ ಈಗ ಏನು ಹೇಳುತ್ತದೆ?”. “ಟಿಎಂಸಿ ವಿರುದ್ಧ ಕೇಂದ್ರ ಏಜೆನ್ಸಿಗಳ ದಾಳಿಯನ್ನು ಅವರು ಶ್ಲಾಘಿಸಿದಂತೆಯೇ.. ರಾಹುಲ್-ಸೋನಿಯಾ ವಿರುದ್ಧದ ಇಡಿ ಕ್ರಮವನ್ನು ಅವರು ಬೆಂಬಲಿಸಬೇಕು ಶ್ಲಾಘಿಸಬೇಕು” ಎಂದು ಲೇಖನದಲ್ಲಿ ವರದಿ ಮಾಡಿದೆ.

ರಾಷ್ಟ್ರಪತಿ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ತೃಣಮೂಲ ವರಿಷ್ಠ ಮತ್ತು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು 25 ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಲು ಕೇವಲ ಎರಡು ದಿನಗಳ ಮುಂಚಿತವಾಗಿ ಈ ವರದಿ ಬಂದದೆ.
ತೃಣಮೂಲ ನಾಯಕ ಮದನ್ ಮಿತ್ರಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಕಾಂಗ್ರೆಸ್ ನಾಯಕರನ್ನು ಕೇಂದ್ರ ತನಿಖಾ ಸಂಸ್ಥೆಗಳು ಕರೆಸಿದಾಗ ಮಮತಾ ಬ್ಯಾನರ್ಜಿ ಧ್ವನಿ ಎತ್ತುತ್ತಾರೆ ಆದರೆ ಇಡಿ ಅಥವಾ ಸಿಬಿಐ ಅನುಬ್ರತಾ ಮಂಡಲ್ ಅಥವಾ ನಮ್ಮ ಪಕ್ಷದ ಬೇರೆಯವರಿಗೆ ಕರೆಸಿದಾಗ ಯಾರೂ ಒಂದು ಮಾತನ್ನೂ ಮಾತನಾಡುವುದಿಲ್ಲ. “ಇದು ಅವರ ಡಬಲ್ ಸ್ಟಾಂಡರ್ಡ್ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ. ಜೊತೆಗೆ ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿಯವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ ಎಂದು ಹೇಳಿದ್ದಾರೆ.
“ಇದು ರಾಷ್ಟ್ರೀಯ ಅಥವಾ ಪ್ರಾದೇಶಿಕ ಪಕ್ಷದ ಪ್ರಶ್ನೆಯಲ್ಲ. 2019 ರಲ್ಲಿ, ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಹೋರಾಡಲು ಸಂಪೂರ್ಣ ಪ್ರತಿಪಕ್ಷಗಳನ್ನು ಒಗ್ಗೂಡಿಸಬಹುದು ಎಂದು ತೋರಿಸಿದರು. ರಾಷ್ಟ್ರಪತಿ ಚುನಾವಣೆಗೂ ಆಕೆ ಅದೇ ರೀತಿ ಮಾಡುತ್ತಿದ್ದಾರೆ,” ಎಂದಿದ್ದಾರೆ.
“ಆದಾಗ್ಯೂ, ಸೋನಿಯಾ ಗಾಂಧಿ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಕ್ಕೂ ಇಡಿ ಸಮನ್ಸ್ಗೂ ಸಂಬಂಧವಿದೆ ಎಂದು ಟಿಎಂಸಿ ಹೇಳುತ್ತಿಲ್ಲ. ಬದಲಿಗೆ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ”