
ಕರ್ನಾಟಕ ಕೇಡರ್ನ IAS ಅಧಿಕಾರಿ ಆಗಿರುವ ರೋಹಿಣಿ ಸಿಂಧೂರಿಗೆ ಬಿಟ್ಟು ಬಿಡದಂತೆ ಸಂಕಷ್ಟಗಳು ಎದುರಾಗುತ್ತಿವೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ ಮತ್ತು ಭಾಮೈದಾ ಮಧುಸೂದನ್ ರೆಡ್ಡಿ ಸೇರಿಕೊಂಡು ತಮ್ಮ ಟ್ರಸ್ಟ್ಗೆ ಸಂಬಂಧಿಸಿದ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ Karnataka Lokayukatha ಕ್ಕೆ ದೂರು ಸಲ್ಲಿಸಿದ್ದಾರೆ.

ಬಾಲಿವುಡ್ನ ಖ್ಯಾತ ಗಾಯಕ ಲಕ್ಕಿ ಅಲಿ ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, IAS ಅಧಿಕಾರಿ ಆಗಿರುವ ರೋಹಿಣಿ ಸಿಂಧೂರಿ ತನ್ನ ಕುಟುಂಬಸ್ಥರ ಜೊತೆಗೆ ಸೇರಿಕೊಂಡು ಭೂಮಿ ಒತ್ತುವರಿ ಮಾಡಿ ಕಬಳಿಸಿದ್ದಾರೆ. ಭೂ ಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ, ಅವರ ಭೂಮಿಯನ್ನು ಅಕ್ರಮವಾಗಿ ಅತಿಕ್ರಮಿಸಲು ಅಧಿಕಾರ ಬಳಸಿದ್ದಾರೆ. ತಮಗೆ ಸೇರಿದ ಟ್ರಸ್ಟ್ ಮಾಲೀಕತ್ವದ ಕೃಷಿ-ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ .

ರೋಹಿಣಿ ಸಿಂಧೂರಿ ತನ್ನ ಅಧಿಕಾರ ಬಳಸಿಕೊಂಡು ಯಲಹಂಕ ನ್ಯೂಟೌನ್ ವ್ಯಾಪ್ತಿಯಲ್ಲಿ ಇರುವ ಜಮೀನು ಕಬಳಿಸಲು ಸ್ಥಳೀಯ ತಾಲೂಕು ಸರ್ವೇ ಅಧಿಕಾರಿ ಮನೋಹರ್, ನ್ಯೂಟೌನ್ ಪೊಲೀಸ್ ಠಾಣೆ ಎಸಿಪಿ ಮಂಜುನಾಥ್ ಅವರನ್ನೂ ಕೂಡ ಬಳಸಿಕೊಂಡಿದ್ದಾರೆ. ಈ ಅಧಿಕಾರಿಗಳೂ ಕೂಡ ರೋಹಿಣಿ ಸಿಂಧೂರಿ ಕುಟುಂಬಕ್ಕೆ ಸಾಥ್ ನೀಡುತ್ತಿದೆ ಎಂದು ದೂರಿನಲ್ಲಿ ಅಧಿಕಾರಿಗಳನ್ನೂ ಸೇರಿಸಲಾಗಿದೆ. ದೂರಿನ ಪ್ರತಿಯನ್ನು ತನ್ನ ಎಕ್ಸ್ Tweet ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಇತ್ತೀಚಿಗೆ 2022ರಲ್ಲೂ ಗಾಯಕ ಅಲಿ ಇದೇ ರೀತಿ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಇತ್ತೀಚೆಗೆ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರೊಂದಿಗೆ ಸಾರ್ವಜನಿಕವಾಗಿ ಜಗಳದಲ್ಲಿ ಸಿಲುಕಿಕೊಂಡಿದ್ದರು. ಕಾನೂನು ಸಂಘರ್ಷದ ಬಳಿಕ ಇತ್ತೀಚಿಗಷ್ಟೇ ಹುದ್ದೆಗೆ ಮರಳಿದ್ದರು. ಇದೀಗ ಭೂ ಕಬಳಿಕೆ ಆರೋಪ ಮತ್ತೊಮ್ಮೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಡಿ.ಕೆ ರವಿ ಆತ್ಮಹತ್ಯೆ ಕೇಸ್ನಲ್ಲೂ ರೋಹಿಣಿ ಸಿಂಧೂರಿ ಪಾತ್ರ ಇತ್ತು ಎನ್ನುವ ಆರೋಪ ಇತ್ತು. ಈಗಲೂ ಡಿ.ಕೆ ರವಿ ಅಭಿಮಾನಿಗಳು ರೋಹಿಣಿ ಅವರೇ ಕಾರಣ ಎಂದು ಆರೋಪ ಮಾಡುತ್ತಾರೆ.