ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ (Mysuru chamundi hill) ನಾಡಹಬ್ಬ ದಸರಾಗೆ 2024 ಕ್ಕೆ (Dasara 2024) ವಿದ್ಯುಕ್ತ ಚಾಲನೆ ದೊರೆತಿದ್ದು, ಈ ಸಂದರ್ಭದಲ್ಲಿ ವೇದಿಕೆಯ ಮೇಲಿದ್ದ ಎಲ್ಲಾ ಗಣ್ಯರಿಗೂ ಸನ್ಮಾನಿಸಲಾಗುತ್ತಿತ್ತು. ಅತಿಥಿಗಳಿಗೆ ಮೈಸೂರು ಪೇಟ ಹಾಕಿ ಶಾಲು ಹೊದಿಸಿ ಸನ್ಮಾನ ಮಾಡಲಾಗಿದೆ.
ಈ ವೇಳೆ ಸಿಎಂ ಸಿದ್ದರಾಮಯ್ಯರಿಗೆ (Cm siddaramaiah) ಸನ್ಮಾನಿಸುವಾಗ ಮೈಸೂರು ಪೇಟ ಹಾಕಲು ಮುಂದಾದಾಗ, ಅವರು ಅದನ್ನು ನಿರಾಕರಿಸಿದ್ದಾರೆ. ಪೇಟ ಬೇಡವೆಂದು ಹೇಳಿ ಕೇವಲ ಹಾರ ಮತ್ತು ಶಾಲು ಹಾಕಿಸಿಕೊಂಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಈ ನಡೆ ಹಲವು ರೀತಿಯ ಚರ್ಚೆ ಮತ್ತು ಕೆಲವು ಅಸಮಾಧಾನಗಳಿಗೂ ದಾರಿ ಮಾಡಿಕೊಟ್ಟಂತಾಗಿದೆ. ಇನ್ನುಳಿದಂತೆ ಡಿಸಿಎಂ ಡಿಕೆ ಶಿವಕುಮಾರ್ (Dcm dk shivakumar), ಸಚಿವರುಗಳಿಗೂ ಇದೇ ರೀತಿ ಸನ್ಮಾನಿಸಲಾಗಿದೆ.