ಮೈಸೂರು : ವರುಣದಲ್ಲಿ ಕೃತಜ್ಞತಾ ಸಮಾವೇಶ ಹಮ್ಮಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಇಂದು ಮೈಸೂರು ನಗರ ಪೊಲೀಸ್ ಕಮಿಷನಟರ್ ರಮೇಶ್ ಬಾನೋತ್ಗೆ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆಯಿತು.

ಸಿಎಂ ಸ್ಥಾನಕ್ಕೆ ಏರಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ತಮಗೆ ಎಲ್ಲಿಯೂ ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದಿದ್ದರು. ಆದರೆ ಇದನ್ನು ಮರೆತ ರಮೇಶ್ ಬಾನೋತ್, ಹಿಂದಿನ ಸಿಎಂಗೆ ನೀಡಿದಂತೆ ಸಿದ್ದರಾಮಯ್ಯರಿಗೂ ನಗರದ ಏರ್ಪೋರ್ಟ್ನಿಂದ ಜಿಲ್ಲಾ ಪಂಚಾಯತ್ ಆವರಣಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿದ್ದರು.
ಕಾರಿನಿಂದ ಇಳಿದ ಸಿದ್ದರಾಮಯ್ಯ, ರಮೇಶ್ ಬಾನೋತ್ಗೆ ಯಾಕೆ ಝೀರೋ ಟ್ರಾಫಿಕ್ ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ , ಅಲ್ಲದೇ ನಾನು ನನಗೆ ಝೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದು ನಿಮಗೆ ಗೊತ್ತಿದ್ಯೋ ಇಲ್ವೋ ಎಂದು ಕೇಳಿದ್ದಾರೆ. ಇದಕ್ಕೆ ರಮೇಶ್ ಬಾನೋತ್ ಗೊತ್ತಿದೆ ಎಂದು ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಪ್ರತಿಯಾಗಿ ಮತ್ತೆ ಯಾಕೆ ಝೀರೋ ಟ್ರಾಫಿಕ್ ಮಾಡಿಸಿದ್ರಿ..? ಎಂದು ಮರುಪ್ರಶ್ನೆ ಹಾಕಿದ್ದಾರೆ. ಅಲ್ಲದೇ ಡೋಂಟ್ ಡು ಝಿರೋ ಟ್ರಾಫಿಕ್ , ನನಗೆ ಝೀರೋ ಟ್ರಾಫಿಕ್ ಮಾಡಿಸಬೇಡಿ ಅಂತಾ ಮತ್ತೆ ಮತ್ತೆ ಹೇಳಿದ್ದಾರೆ.