ಬೆಂಗಳೂರು: ಚಿತ್ತಾಪುರದಲ್ಲಿ ನಡೆಸಲು ಉದ್ದೇಶಿಸಿರುವ ಆರ್ಎಸ್ಎಸ್ ಪಥಸಂಚಲನಕ್ಕೆ ಕಲ್ಬುರ್ಗಿ ಜಿಲ್ಲಾಡಳಿತ ಅನುಮತಿ ನೀಡಿದೆ. ಈ ಬಗ್ಗೆ ಹೈಕೋರ್ಟ್ ಕಲಬುರ್ಗಿ ಪೀಠಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ತೀವ್ರ ವಿವಾದಕ್ಕೆ ತಿರುಗಿದ್ದ ಚಿತ್ತಾಪುರದ ಆರ್ಎಸ್ಎಸ್ ಪಥಸಂಚಲನದ ಶಾಂತಿ ಸಭೆ ನಡೆದ ಬಳಿಕ ಇಂದು ಹೈಕೋರ್ಟ್ಗೆ ಸರ್ಕಾರ ಈ ಮಾಹಿತಿ ನೀಡಿದೆ. ಆದರೆ ಇದು ಷರತ್ತುಬದ್ದ ಅನುಮತಿಯಾಗಿದ್ದು, ನ.16 ರಂದು ಕೇವಲ 300 ಜನರು ಪಥಸಂಚಲನಕ್ಕೆ ಹಾಗೂ 25 ಬ್ಯಾಂಡ್ ವಾದಕರಿಗೆ ಅನುಮತಿ ನೀಡಿದೆ.

ಇದಕ್ಕೆ ಆಕ್ಷೇಪ ತೋರಿದR SS ಪರ ವಕೀಲ ಅರುಣ್ ಶ್ಯಾಮ್, 800 ಜನರಿಗೆ ಅನುಮತಿ ನೀಡಲು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಜಿ, ಕೆಲವೆಡೆ 100-150 ಜನರ ಪಥಸಂಚಲನ ನಡೆಸಲಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಅನುಮತಿ ನೀಡಿದ್ದೇವೆ ಎಂದು ತಿಳಿಸಿದರು.







