ರಾಜಸ್ಥಾನದ ಉದಯಪುರದಲ್ಲಿ ಮೂರು ದಿನಗಳ ಕಾಲ ನಡೆದ ನವಸಂಕಲ್ಪ ಚಿಂತನ್ ಶಿಬಿರದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಕೈಗೊಳ್ಳುವುದಾಗಿ ಕಾಂಗ್ರೆಸ್ ನಾಯಕರು ಘೋಷಿಸಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅಕ್ಟೋಬರ್ 2ರಂದು ಪಾದಯಾತ್ರೆಯನ್ನ ಕೈಗೊಳ್ಳಲಾಗುವುದು ನಾವು ಸೋಲಿನ ಸರಪಳಿಯಿಂದ ಹೊರಬರಲಿದ್ದೇವೆ ಎಂಧು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಉದಯಪುರದಲ್ಲಿ ನಡೆದ ಚಿಂತನ್ ಶಬಿರದಲ್ಲಿ ಹಲವು ಮಹತ್ವಕಾರಿ ಬದಲಾವಣೆ ಹಾಗು ಘೋಷಣೆಗಳನ್ನು ಮಾಡಲಾಯಿತ್ತು. ಒಂದು ವ್ಯಕ್ತಿಗೆ ಒಂದು ಹುದ್ದೆ, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಘೋಷಣೆಗಳು ಇದರಲ್ಲಿ ಸೇರಿವೆ.
ಒಂದೇ ಕುಟುಂಬದ ಎರಡನೇ ವ್ಯಕ್ತಿ ಟಿಕೆಟ್ ಬಯಸಿದರೆ ಆತ ಕನಿಷ್ಠ ಎಂದರು ಪಕ್ಷಕ್ಕಾಗಿ 5 ವರ್ಷ ದುಡಿದಿರಬೇಕು ಆಗ ಮಾತ್ರ ಅಂತಹ ವ್ಯಕ್ತಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡಲಾಗುವುದು ಎಂದು ಶಿಬಿರದಲ್ಲಿ ಹೇಳಲಾಗಿದೆ.
ಪಕ್ಷ ಹಾಗು ಚುನಾವಣೆ ರಾಜಕೀಯದಲ್ಲಿ ಯುವಕರಿಗೆ ಶೇ.50ರಷ್ಟು ಪ್ರಾತಿನಿಧ್ಯ ನೀಡಲು ಪಕ್ಷ ಒಪ್ಪಿಗೆ ಸೂಚಿಸಿದೆ. ಆದರೆ, ಮುಖಂಡರ ನಿವೃತ್ತಿ ವಯಸ್ಸು ನಿಗದಿ ಕುರಿತು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದು ಬಂದಿದೆ.
ಈಗಾಗಲೇ ಸಮಾಜದ ಸಾಮರಸ್ಯವನ್ನು ಹಾಳುಗೆಡವಲಾಗಿದೆ ಅದನ್ನು ಬಲಪಡಿಸಲು ಹಾಗು ಸಂವಿಧಾನದ ಮೂಲ ಮೌಲ್ಯಗಳ ರಕ್ಷಣೆಗಾಗಿ ಜನರ ಕಳಕಳಿಯನ್ನು ಎತ್ತಿತೋರಿಸಲು ಭಾರತ್ ಜೋಡೋ ಯಾತ್ರೆ ಅತ್ಯಗತ್ಯ ಎಂದು ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.