ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಚೆನ್ನಪಟ್ಟಣ (Chennapattana) ಉಪಚುನಾವಣೆಯ ಕಣ ಮತ್ತಷ್ಟು ರಂಗೇರಿದೆ. ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಡಿಕೆ ಸುರೇಶ್ (Dk suresh) ಚೆನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ನಿರೀಕ್ಷೆಯಿತ್ತು. ಆದ್ರೆ ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ (Dcm Dk Shivakumar) ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ಗರಿಗೆದರಿದೆ.
![](https://pratidhvani.com/wp-content/uploads/2024/06/297548-dksuresh-1024x768.avif)
ಹೌದು, ತಮ್ಮ ಸ್ಪರ್ಧೆ ಬಗ್ಗೆ ಪ್ರಶ್ನೆ ಮಾಡಿದ್ದಾಗ, ತಾವು ಸ್ಪರ್ಧಿಸೋದಿಲ್ಲ, ಆದ್ರೆ ಅಚ್ಚರಿಯ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಲಿದ್ದಾರೆ ಎಂ ಡಿಕೆ ಸುರೇಶ್ (Dk suresh) ಹೇಳಿದ್ದರು. ಇದೀಗ ಆ ಅಚ್ಚರಿಯ ಅಭ್ಯರ್ಥಿ ಅವರ ಸಹೋದರ ಉಪ ಮುಖ್ಯಮಂತ್ರಿ ಡಿಕೆಶಿ ಎಂಬ ಮಾತುಗಳು ಹರಿದಾಡುತ್ತಿವೆ.
![](https://pratidhvani.com/wp-content/uploads/2024/06/IMG_8290.jpeg)
ಡಿಕೆ ಬ್ರದರ್ಸ್ (Dk Brothers) ಭದ್ರ ಕೋಟೆಯಾಗಿದ್ದ ಕನಕಪುರದಲ್ಲೇ (Kanakapura) ಈ ಬಾರಿ ಬಹಳ ಕಡಿಮೆ ಲೀಡ್ ಬಂದ ಹಿನ್ನಲೆ, ಮತ್ತೆ ತಮ್ಮ ಹಿಡಿತವನ್ನ ಸ್ಥಾಪಿಸಿ, ಸಹೋದರ ಡಿಕೆ ಸುರೇಶ್ ಗೆ ಯಾವುದಾದರೂ ಒಂದು ರೂಪದಲ್ಲಿ ಅಧಿಕಾರ ಒದಗಿಸಿಕೊಡಬೇಕಿದೆ. ಹೀಗಾಗಿ, ತಾವೇ ಖುದ್ದು ಚೆನ್ನಪಟ್ಟಣದಿಂದ ಸ್ಪರ್ಧಿಸಿ ಸಚಿವ ಕುಮಾರಸ್ವಾಮಿಗೆ (HD Kumaraswamy) ಠಕ್ಕರ್ ನೀಡುವ ಚಿಂತನೆಯಲ್ಲಿ ಡಿಕೆಶಿ ಇದ್ದಾರಂತೆ.
ಆ ಮೂಲಕ ಚೆನ್ನಪಟ್ಟಣ ವಶಪಡಿಸಿಕೊಂಡು, ನಂತರದಲ್ಲಿ ಕನಕಪುರದಿಂದ ಡಿಕೆ ಸುರೇಶ್ರನ್ನ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಇರಾದೆ ಡಿಕೆಶಿಯದ್ದು ಎನ್ನಲಾಗ್ತಿದ್ದು, ಕಾಂಗ್ರೆಸ್ ಹೈಕಮ್ಯಾಂಡ್ (Congress Highcommand) ಇದಕ್ಕೆ ಅಸ್ತು ಅಂದ್ರೆ ಡಿಕೆಶಿ ಸ್ಪರ್ಧೆ ಕನ್ನರ್ಮ್ ಎನ್ನಲಾಗ್ತಿದೆ.