ದಾವಣಗೆರೆಯ ಚನ್ನಗಿರಿ (chennagiri) ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಿ ಪ್ಲಾನ್ (pre- planned) ಆಗಿತ್ತಾ ಅನ್ನೋ ಅನುಮಾನ ಶುರುವಾಗಿದೆ. ಚನ್ನಗಿರಿ ಸಿಟಿ ಅಕ್ಕಪಕ್ಕದ ನಲ್ಲೂರು, ಹೊನ್ನೆಬಾಗಿ, ಸೇರಿ ಬೇರೆ ಊರುಗಳಿಂದ ಬಂದು ಕಿಡಿಗೇಡಿಗಳು ದಾಂಧಲೆ ಮಾಡಿದ್ದಾರೆ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/05/IMG_7958.jpeg)
ಇದು ಪ್ರೀ ಪ್ಲಾನ್ ಅನ್ನೋದಕ್ಕೆ ಸಾಕಷ್ಟು ಸಾಕ್ಷಿಗಳು ಪೊಲೀಸರ ಕೈ ಸೇರಿರೋ ಮಾಹಿತಿ ಲಭ್ಯವಾಗಿದೆ. ಯಾಕಂದ್ರೆ ಮೃತ ಆದಿಲ್ (AdlI) ತಂದೆಗೆ ಗಲಾಟೆ ಮಾಡೋಕೆ ಬಂದೋರು ಯಾರೂ ಅನ್ನೋದೆ ಗೊತ್ತಿಲ್ಲಾ. ಹಾಗಿದ್ರೆ ಈ ಗಲಭೆಕೋರರೆಲ್ಲಾ ಯಾರು ? ಎಲ್ಲಿಂದ ಬಂದ್ರು ಎಂಬ ಪ್ರಶ್ನೆ ಉದ್ಭವವಾಗಿದೆ.
ಒಂದು ಗಂಟೆಯಲ್ಲಿ ಸಾವಿರಾರು ಜನರು ಸೇರಲು ಕಾರಣ ಆಗಿದ್ಯಾರು? ಚನ್ನಗಿರಿಯಲ್ಲಿ ನಡೆದ ಗಲಾಟೆಗೆ ಹೊರಗಿನಿಂದ ಜನ ಯಾಕೆ ಬಂದ್ರು ಅವರಿಗೆ ವಿಷಯ ತಿಳಿಸಿದ್ದು ಯಾರು ಅಂತೆಲ್ಲಾ ಪ್ರಶ್ನೆಗಳು ಪೊಲೀಸರಿಗೆ ಮೂಡಿದೆ.