ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ (Banu mushtaq) ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹಾಗೂ ಚಾಮುಂಡಿ ಬೆಟ್ಟ (Chamundi hill) ಹಿಂದುಗಳ ಸ್ವತ್ತಲ್ಲ ಎಂಬ ಡಿಕೆಶಿ ಹೇಳಿಕೆ ಹಿನ್ನೆಲೆ ಇಂದು ಚಾಮುಂಡಿ ಬೆಟ್ಟಕ್ಕೆ ಆರ್. ಅಶೋಕ್ (R Ashok) ಭೇಟಿ ನೀಡಲಿದ್ದಾರೆ. ಬಿಜೆಪಿ ನಾಯಕರ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಈ ಸರ್ಕಾರದಲ್ಲಿ ಸಿಎಂ ಹಾಗೂ ಡಿಸಿಎಂಗೆ ಒಳ್ಳೆಯ ಬುದ್ಧಿ ನೀಡು ತಾಯಿ ಎಂದು ಆರ್.ಅಶೋಕ್. ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಸಿಎಂ ಸಿದ್ಧರಾಮಯ್ಯ ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಿದ್ದಾರೆ. ವಿಗ್ರಹ ಆರಾಧನೆಯನ್ನೇ ಒಪ್ಪದವರ ಕೈ ಯಿಂದ ವಿಗ್ರಹ ಆರಾಧನೆ ಮಾಡಿಸಲು ಮುಂದಾಗಿದ್ದಾರೆ.ಈ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡು ತಾಯಿ ಎಂದು ಪ್ರಾರ್ಥನೆ ಸಲ್ಲಿಕೆ ಮಾಡಲಿದ್ದಾರೆ.

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಚಾಮುಂಡಿ ಬೆಟ್ಟ ಹಿಂದುಗಳ ಸ್ವತ್ತಲ್ಲ ಎಂದಿದ್ದಾರೆ.ಇದು ಹಿಂದುಗಳ ಪವಿತ್ರ ಸ್ಥಳ. ಇದರಲ್ಲಿ ಯಾವುದೇ ಅನುಮಾನವಿಲ್ಲ.ಪ್ರವಾಸಿ ತಾಣವಂತೂ ಅಲ್ಲ. ರಾಜ್ಯದಲ್ಲಿ ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳ, ಉಡುಪಿಯ ಶ್ರೀ ಕೃಷ್ಣ, ಕೊಲ್ಲೂರು ಮೂಕಾಂಬಿಕೆ, ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದೆ ಯಾವ ರೀತಿ ಪವಿತ್ರ ಸ್ಥಳವೋ..ಹಾಗೆಯೇ ಮೈಸೂರಿನ ಚಾಮುಂಡಿ ತಾಯಿ ಕೂಡ..ಇದು ಹಿಂದುಗಳ ಸ್ವತ್ತು ಎಂದಿದ್ದಾರೆ.
ತಲೆತಲಾಂತರದಿಂದ ರಾಜ ಮಹಾರಾಜರು ತಾಯಿಯನ್ನು ಪೂಜಿಸುತ್ತಾ ಬಂದಿದ್ದಾರೆ.ಇದು ಹಿಂದುಗಳಿಗೆ ಸ್ವತ್ತೇ.ಇದರಲ್ಲಿ ಅನುಮಾನವೇ ಬೇಡ.ಈಗ ಸರ್ಕಾರ ಭಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಕರೆಸುತ್ತಿರುವುದು, ಡಿಸಿಎಂ ಡಿಕೆಶಿ ಚಾಮುಂಡಿ ಬೆಟ್ಟ ಹಿಂದುಗಳ ಸ್ವತ್ತಲ್ಲ ಎಂದಿರುವುದು ಅಕ್ಷಮ್ಯ ಅಪರಾಧ. ಇವರಿಗೆ ಬುದ್ಧಿ ಕೊಡು ತಾಯಿ ಎಂದು ಪ್ರಾರ್ಥನೆ ಸಲ್ಲಿಸಲು ಆರ್.ಅಶೋಕ್. ತೆರಳುತ್ತಿದ್ದಾರೆ.





