• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೇಶದೊಳಗಿನ ಲಸಿಕೆಯ ಕೊರತೆಯ ಜವಾಬ್ದಾರಿಯನ್ನು ಹೊರಲೇಬೇಕಿದೆ ಕೇಂದ್ರ

by
April 14, 2021
in ದೇಶ
0
ದೇಶದೊಳಗಿನ ಲಸಿಕೆಯ ಕೊರತೆಯ ಜವಾಬ್ದಾರಿಯನ್ನು ಹೊರಲೇಬೇಕಿದೆ ಕೇಂದ್ರ
Share on WhatsAppShare on FacebookShare on Telegram

ಕೇಂದ್ರವು ದೇಶದಲ್ಲಿ ಲಸಿಕೆ ಕೊರತೆಯ ಬಗೆಗಿನ‌ ಸುದ್ದಿಗಳನ್ನು ಸಂಪೂರ್ಣ ನಿರಾಕರಿಸುತ್ತಿದೆ ಮತ್ತು ಲಭ್ಯವಿರುವ ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂಷಿಸುತ್ತಿದೆ. ಆದರೆ ಸತ್ಯವೆಂದರೆ ಕೇಂದ್ರ ಸರ್ಕಾರವೇ‌ ಲಸಿಕೆಯ ಖರೀದಿ ಮತ್ತು ಪೂರೈಕೆಯ ಏಕಸ್ವಾಮ್ಯತೆ ಹೊಂದಿದೆ. 45 ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಕಡ್ಡಾಯ ಮಾಡಿದ ನಂತರ ಲಸಿಕೆಯ ಬೇಡಿಕೆ ಎಷ್ಟಿರಬಹುದು ಎಂದು ಅಂದಾಜಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ADVERTISEMENT

ಪ್ರಸ್ತುತ ಲಸಿಕೆಯ ಬೇಡಿಕೆ ದಿನಕ್ಕೆ 37 ಲಕ್ಷ ಲಸಿಕೆಗಳು. ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ತಯಾರಕರ ಒಟ್ಟು ಉತ್ಪಾದನಾ ಸಾಮರ್ಥ್ಯ ದಿನಕ್ಕೆ ಸರಿಸುಮಾರು 24 ಲಕ್ಷ ಲಸಿಕೆಗಳು. ಉತ್ಪಾದನೆ ಮತ್ತು ಬೇಡಿಕೆಯ‌ ನಡುವಿನ ದೈನಂದಿನ ಕೊರತೆಯ ಅಂತರವೇ ದೊಡ್ಡಾದಾಗಿದೆ. ಮುಂದಿನ ವಾರಗಳಲ್ಲಿ ಅಂತರವು ಇನ್ನೂ ಹೆಚ್ಚು ತೀವ್ರಗೊಳ್ಳಲಿವೆ. ಏಕೆಂದರೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಳ ಮಾಡುವುದಿದ್ದರೂ‌ ಅದು ಸಮಯ ತೆಗೆದುಕೊಳ್ಳುತ್ತದೆ.

ಮಾಧ್ಯಮಗಳ ಸುದ್ದಿಯನ್ನು ಅಲ್ಲಗಳೆದ ಯುವತಿ

ಮಾರ್ಚ್ ತಿಂಗಳಲ್ಲಿ ಸೋಂಕಿನ‌ ಪ್ರಮಾಣವು ನಿಯಂತ್ರಣದಲ್ಲಿದ್ದುದದರಿಂದ ಬೇಡಿಕೆ ಪೂರೈಕೆಯನ್ನು ಮೀರಿರಲಿಲ್ಲ. ಆದರೆ ಏಪ್ರಿಲ್ 1 ರಿಂದ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಗಿದೆ, ಸೋಂಕಿನ ಎರಡನೇ ವೇವ್ ಉಲ್ಬಣಗೊಂಡಿರುವುದು ಮತ್ತು ವ್ಯಾಕ್ಸಿನೇಷನ್ ವಯಸ್ಸಿನ ಮಿತಿಯನ್ನು 45+ ಇಳಿಸಲಾಗಿರುವುದು ಇದಕ್ಕೆ ಮುಖ್ಯ ಕಾರಣ. ಈಗಾಗಲೇ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಆಗಿರಬೇಕಿತ್ತು. ಆದರೆ ಈ ಬಗ್ಗೆ ಕೇಂದ್ರ ಯೋಚಿಸಲಿಲ್ಲ‌. ಲಸಿಕೆ ದಾಸ್ತಾನುಗಳು ಖಾಲಿಯಾದ ನಂತರ, ದೈನಂದಿನ ಬೇಡಿಕೆ-ಪೂರೈಕೆ ಅಂತರವು ದಿನಕ್ಕೆ 15 ರಿಂದ 20 ಲಕ್ಷ ಮುಟ್ಟಬಹುದು. ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ತುರ್ತು ಅವಶ್ಯಕತೆಯಿದೆ.

ಈ ಮಧ್ಯೆ ದಾಸ್ತಾನು ಹೆಚ್ಚಿಸಲು‌ ಆದ್ಯತೆ ನೀಡಬೇಕಾಗಿದ್ದ ಪ್ರಧಾನಿ ಅದನ್ನು‌ ಸಂಪೂರ್ಣ ಕಡೆಗೆಣಿಸಿ ‘ಲಸಿಕಾ ಹಬ್ಬ’ ಆಚರಿಸಲು ಕರೆ ನೀಡಿ ಬೇಜವಾಬ್ದಾರಿತನ ಮೆರೆದಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಮಹಾರಾಷ್ಟ್ರದಲ್ಲಿನ ಲಸಿಕೆಯ ಕೊರತೆ ಸುದ್ದಿಯಾಗಿದೆ. ಆದರೆ ಒರಿಸ್ಸಾ, ಛತ್ತೀಸ್‌ಘಡ, ತೆಲಂಗಾಣದಲ್ಲೂ ಲಸಿಕೆಯ ತೀವ್ರ ಕೊರತೆಯಿದೆ ಎಂದು ವರದಿಯಾಗಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಜಿಲ್ಲಾ ಮಟ್ಟದಲ್ಲಿ ಲಸಿಕೆ ಕೊರತೆ ಇದೆ ಎಂದು ಅಪೊಲೊ ಆಸ್ಪತ್ರೆ ಸಮೂಹದ ಸಹಮಾಲಿಕ ಸಂಗೀತಾ ರೆಡ್ಡಿ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಛತ್ತೀಸ್‌ಘಡದ ಆರೋಗ್ಯ ಸಚಿವ ಸಿಂಗ್ ಡಿಯೋ ರಾಜ್ಯಗಳಿಗೆ ಬೇಡಿಕೆಗಿಂತ ಕಡಿಮೆ ಲಸಿಕೆಗಳನ್ನು ಪೂರೈಸಿದರೆ ಒಟ್ಟಾರೆ ಬೇಡಿಕೆಗೆ ಅನುಗುಣವಾಗಿ ಅದನ್ನು ಕೊರತೆ ಎಂದು ಪರಿಗಣಿಸಬೇಕಾಗುತ್ತದೆ ಅಂದಿದ್ದಾರೆ.

ಲಸಿಕೆಗಳ ದೈನಂದಿನ ಪೂರೈಕೆಯನ್ನು 50% ಕ್ಕಿಂತ ಹೆಚ್ಚಿಸುವ ಅವಶ್ಯಕತೆಯಿದೆ. ಆದ್ದರಿಂದ ಪ್ರತಿ ರಾಜ್ಯಕ್ಕೂ ಏಪ್ರಿಲ್ ಅಂತ್ಯದ ವೇಳೆಗೆ ಅದರ ಕೋಟಾದಲ್ಲಿ 50% ಹೆಚ್ಚು ಲಸಿಕೆ ಬೇಕಾಗಬಹುದು. ಸೋಂಕಿನ ಪ್ರಮಾಣ ಮೇ ಮಧ್ಯದವರೆಗೂ‌ ಇದೇ ರೀತಿ ಇರಬಹುದು ಎಂದು ತಜ್ಞರು ಹೇಳುವುದರಿಂದ ಈ ಬೇಡಿಕೆ ಮತ್ತಷ್ಟು ಬೆಳೆಯಬಹುದು.

ಕೇವಲ ಎರಡು ತಯಾರಕರು ಅಸ್ತಿತ್ವದಲ್ಲಿರುವಾಗ ಉತ್ಪಾದನಾ ಸಾಮರ್ಥ್ಯವು ಮುಂದಿನ ಕೆಲವು ವಾರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಬಹುದೇ ಎಂಬುದು ಇಲ್ಲಿ ಪ್ರಮುಖ ಪ್ರಶ್ನೆಯಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವಾಕ್ಸಿನ್ ಉತ್ಪಾದನೆಯನ್ನು ಎಷ್ಟು ವೇಗವಾಗಿ ಹೆಚ್ಚಿಸುತ್ತದೆ ಎಂಬುದರ ಮೇಲೆ ಮೋದಿಯವರ ‘ಲಸಿಕೆ ಹಬ್ಬ’ ಅವಲಂಬಿತವಾಗಿರುತ್ತದೆ.

ಪ್ರಸ್ತುತ ಉತ್ಪಾದನೆಯಾಗುತ್ತಿರುವ ವ್ಯಾಕ್ಸಿನ್‌ಗಳಲ್ಲಿ ಶೇಕಡಾ 90 ರಷ್ಟನ್ನು SII ಉತ್ಪಾದಿಸುತ್ತಿದೆ. ಅದು ತಿಂಗಳಿಗೆ 60 ಮಿಲಿಯನ್ ಡೋಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಆದರೆ ಉತ್ಪಾದನೆಗೆ ಮೊದಲೇ ಆದ ಒಪ್ಪಂದದ ಪ್ರಕಾರದ ಪೂರೈಸಲೇಬೇಕಾದ ರಫ್ತನ್ನು ಸದ್ಯಕ್ಕೆ ಉತ್ಪಾದಿಸಲಾಗುತ್ತಿಲ್ಲ. ಕೋವಿಶೀಲ್ಡ್‌ಗೆ ಹೋಲಿಸಿದರೆ ಕೊವ್ಯಾಕ್ಸಿನ್ ಉತ್ಪಾದನೆಯಾಗುತ್ತಿರುವುದು ಅತಿ ಕಡಿಮೆ. ಭಾರತ್ ಬಯೋಟೆಕ್ ಮತ್ತು SII ಎರಡೂ ಫೆಬ್ರವರಿ ಹೊತ್ತಲ್ಲೇ ಸರ್ಕಾರದಿಂದ ಆರ್ಥಿಕ ನೆರವು ಕೇಳಿತ್ತು. ಆದರೆ ಸರ್ಕಾರ ಆ ಬಗ್ಗೆ ಹೆಚ್ಚಿನ ಒಲವು ತೋರಿರಲಿಲ್ಲ.

ಸೋಂಕಿನ ಎರಡನೇ ಅಲೆಯನ್ನು ಎದುರಿಸಲು ಸಾಮರ್ಥ್ಯ ವಿಸ್ತರಣೆಯ ಅಗತ್ಯವಿತ್ತು‌ ಮತ್ತು ಅದನ್ನು ಊಹಿಸಿ ಕಾರ್ಯರೂಪಕ್ಕೆ ತರುವಲ್ಲಿ ಕೇಂದ್ರವು ಸಂಪೂರ್ಣ ವಿಫಲವಾಗಿದೆ. ದೇಶದಾದ್ಯಂತ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಉಸ್ತುವಾರಿಯನ್ನು ಕೇಂದ್ರದಲ್ಲಿನ ಅಧಿಕಾರಿ ವರ್ಗದವರು ವಹಿಸಿಕೊಂಡಿದ್ದಾರೆ. ಇದರಿಂದಾಗಿಯೇ ಸಮಸ್ಯೆ ಉಂಟಾಗಿದೆ. ಒಂದೆಡೆ, ಅಧಿಕಾರಶಾಹಿಗಳು ವ್ಯವಹಾರಗಳನ್ನು ನಡೆಸಬಾರದು ಎಂದು ಮೋದಿಯವರು ವಾದಿಸುತ್ತಾರೆ, ಮತ್ತೊಂದೆಡೆ, ಲಸಿಕೆಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ ವ್ಯವಹಾರವನ್ನು ಅವರು ಸಂಪೂರ್ಣವಾಗಿ ಕೇಂದ್ರೀಕರಿಸುತ್ತಾರೆ. ಸರ್ಕಾರವು ಏಕೈಕ ಖರೀದಿದಾರನಾಗಿರುವುದರಿಂದ, ಇದು ಸಾಮರ್ಥ್ಯ ವಿಸ್ತರಣೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ.

ಲಸಿಕೆಯ ಸಂಗ್ರಹಣೆಯನ್ನು ವಿಕೇಂದ್ರೀಕರಿಸಲು ಮೋದಿ ಸರ್ಕಾರ ಏಕೆ ಒಪ್ಪತ್ತಿಲ್ಲ ಎಂಬುದು ವಿವರಣೆಗೆ ಸಿಗುವುದಿಲ್ಲ. ವ್ಯವಸ್ಥೆಯಲ್ಲಿ ದೋಷವುಂಟಾದಾಗ ಅದು ರಾಜ್ಯಗಳ ವಿತರಣಾ ಸಮಸ್ಯೆ ಎಂದು ದೂಷಿಸುತ್ತದೆ. ಕೇಂದ್ರವು ಈ ಬ್ಲೇಮ್ ಗೇಮನ್ನು ನಿಲ್ಲಿಸಿ ಮೊದಲು ಜವಾಬ್ದಾರಿಯನ್ನು ಸ್ವೀಕರಿಸಬೇಕು.

ಇಲ್ಲಿಯವರೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ಮೋದಿ ಸರ್ಕಾರ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲೇ ಬೇಕಾದ ಸಮಯ ಇದು. ಕಳೆದ ವರ್ಷ ಲಾಕ್‌ಡೌನ್ ಘೋಷಿಸಿದ ನಂತರ 18 ದಿನಗಳಲ್ಲಿ ಮಹಾಭಾರತ ಯುದ್ಧವನ್ನು ಹೇಗೆ ಗೆದ್ದರು ಎಂದು ಹೇಳುವ ಮೂಲಕ ಮೋದಿ ಆಶಾವಾದವನ್ನು ಹುಟ್ಟಿಸಿದ್ದರು. ಈಗ, ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳೊಂದಿಗೆ ನಾವು ಈ ಯುದ್ಧವನ್ನು ಗೆಲ್ಲಲು ಸಾಧ್ಯವಾಗದಿದ್ದರೆ, ಸರ್ಕಾರವು ದೂಷಿಸಬೇಕೆಂದರೂ ಯಾರೂ ಸಿಗದ ಪರಿಸ್ಥಿತಿ ನಿರ್ಮಾಣವಾಗಬಹುದು.

ದಿ ವೈರ್‌ ಲೇಖನ

Previous Post

ತಬ್ಲೀಗ್ ಜಮಾತ್ ಪ್ರಕರಣದೊಂದಿಗೆ ಕುಂಭಮೇಳ ಹೋಲಿಕೆ ಸಲ್ಲ: ಉತ್ತರಾಖಂಡ್‌ ಸಿಎಂ

Next Post

ಪರ್ವ ಕಾಲದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್

Related Posts

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ
Serial

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

by ಪ್ರತಿಧ್ವನಿ
October 13, 2025
0

ಸಾಮಾಜಿಕ  ಅನ್ಯಾಯ ದೌರ್ಜನ್ಯ ತಾರತಮ್ಯಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ನಾ ದಿವಾಕರ  ಜಗತ್ತಿನ ಇತಿಹಾಸದಲ್ಲಿ ಸಂಭವಿಸಿರುವ ಬಹುತೇಕ ವಿಪ್ಲವಗಳಲ್ಲಿ ಪ್ರಧಾನ ಪಾತ್ರ ವಹಿಸಿರುವುದು ಆಯಾ ಸಮಾಜಗಳಲ್ಲಿ ಕ್ರಿಯಾಶೀಲವಾಗಿ,...

Read moreDetails

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025
Next Post
ಪರ್ವ ಕಾಲದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್

ಪರ್ವ ಕಾಲದಲ್ಲಿ ಅಂಬೇಡ್ಕರ್ ಮತ್ತು ಮಾರ್ಕ್ಸ್

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada