
ತುಮಕೂರು: ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ವಿಚಾರವಾಗಿ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾ ಸ್ವಾಮಿಜಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಅದು ಏನೆ ಇರಲಿ ಕಾಶ್ಮೀರ ನಮ್ಮ ದೇಶದ ಅವಿಭಾಜ್ಯ ಅಂಗವಾಗಿದೆ. ಕಾಶ್ಮೀರದ ಆರ್ಥಿಕ ಮೂಲ ಪ್ರವಾಸಿಗರು. ಪ್ರವಾಸಿಗರು ಕಾಶ್ಮೀರಕ್ಕೆ ಹೋಗದೆ ಇದ್ರೆ ಅಲ್ಲಿನ ಜನರ ಜೀವನ ದುಸ್ಥರವಾಗಲಿದೆ. ನಾನು ಕೇಳಿದಂತೆ ಅಲ್ಲಿನ ಪ್ರತಿಯೊಬ್ಬ ಜನರು ಪ್ರವಾಸಿಗರಿಗೆ ತುಂಬಾ ಗೌರವಿಸುತ್ತಾರೆ. ಮುಸಲ್ಮಾನರೇ ಆದ್ರು ಕೂಡ ಪ್ರವಾಸಿಗರಿಗೆ ತುಂಬಾ ಗೌರವ ಕೊಡ್ತಾರೆ. ಈ ಘಟನೆ ನಡೆದಿರೋದು ಆತಂಕವಾದಿಗಳು, ಟೆರೆರಿಸ್ಟ್ಗಳು ಇಂತಹ ಹೇಯ, ಅಮಾನುಷ ಕೃತ್ಯ ಮೆರೆದಿದ್ದಾರೆ ಎಂದಿದ್ದಾರೆ.

ಇದು ನಿಜವಾಗಲೂ ಖಂಡನೀಯ ಕೃತ್ಯವಾಗಿದೆ. ಇದನ್ನು ದೇಶದ ಪ್ರತಿಯೊಬ್ಬರು ಖಂಡಿಸಲೇಬೇಕಿರುವಂತದ್ದು. ಕೊಲೆ ಹಿಂಸೆ ಯಾವುದೇ ಆಗಲಿ, ಯಾರಿಗೆ ಆಗಲಿ ನಮ್ಮದು ದೇಶದಲ್ಲಿ ಆಗಬಾರದು. ನಮ್ಮ ದೇಶ ಯಾವತ್ತೂ ಕೂಡ ಶಾಂತಿ, ಸಹೋದರ ಭಾವವನ್ನ, ಪ್ರೀತಿಯನ್ನ ಹಂಚುವಂತ ದೇಶ ನಮ್ಮ ಭಾರತ. ಈಗ ಆಗಿರುವ ಘಟನೆಯಿಂದ ನೊಂದ ಜೀವಗಳ ಅವರ ಕಣ್ಣೆದುರಿಗೆ ಮನೆಯರನ್ನ ಕಳೆದುಕೊಂಡು ಎಷ್ಟು ನೋವು ಪಟ್ಟಿದ್ದಾರೆ. ತನ್ನೆದುರಿಗೆ ತನ್ನ ಪತಿಯನ್ನ ಕೊಲೆ ಮಾಡ್ತಿದ್ದಾರೆ ಅಂದಾಗ ಆ ಜೀವಕ್ಕೆ ಹೇಗಿರಬೇಕು ಅಲ್ಲಿ. ಜೀವ ಇದ್ದರೂ ಒಂದೇ ಇಲ್ಲದಿದ್ದರೂ ಒಂದೆ.. ನಮ್ಮನ್ನು ಕೊಂದು ಬಿಡಿ ಅಂತಾ ಕೇಳಿದ್ದಾರೆ. ಸಹಜವಾಗಿ ಬದುಕಿದ್ದೇನು ಪ್ರಯೋಜನಾ ಅಂತಾ ಅನ್ನಿಸಿರಬೇಕು ಅವರಿಗೆ ಎಂದಿದ್ದಾರೆ.

ಆ ನೋವನ್ನು, ದೃಷ್ಯವನ್ನ ವಿಚಾರವನ್ನ ಕೇಳೋದೆ ಕರ್ಣ ಕಠೋರವಾದದ್ದು. ಇದನ್ನು ನಾವೆಲ್ಲರೂ ಖಂಡಿಸಬೇಕಾಗಿದೆ.. ಭಯೋತ್ಪಾದನೆಯನ್ನ ಹೊಗಲಾಡಿಸಬೇಕಂತ ಸರ್ಕಾರವೂ ಸಹ ಈಗಾಗಲೇ ಕ್ರಮಕೈಗೊಳ್ತಿದೆ.. ಇದಕ್ಕೆ ಜನರ ಸಹಕಾರ ಬೇಕಾಗಿದೆ. ಎಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಭಾಷಾತೀತವಾಗಿ ನಾವೆಲ್ಲರೂ ಕೂಡ ಭಾರತೀಯತೆಯ ಅಖಂಡತ್ವವನ್ನ ಕಾಪಾಡಿಕೊಳ್ಳಬೇಕಿದೆ, ಅದು ನಮ್ಮ ಕರ್ತವ್ಯ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ನಾವೆಲ್ಲರೂ ಭಾರತೀಯರು ಎನ್ನುವಂತ ಭಾವನೆ ಬರಬೇಕಿದೆ. ನಾವೆಲ್ಲಾ ಭಾರತೀಯರಾಗಿ ನಮ್ಮ ದೇಶ, ರಾಷ್ಟ್ರಗೀತೆಯನ್ನ ಗೌರವಿಸಬೇಕು. ನಮ್ಮ ರಾಷ್ಟ್ರ ಧ್ವಜವನ್ನ ಎತ್ತಿ ಮೆರೆಯಬೇಕು. ನಮ್ಮ ಸಂವಿಧಾನವನ್ನ ಗೌರವಿಸಬೇಕು ಎಂದಿದ್ದಾರೆ.

ಅಂಖಂಡ ಭಾರತೀಯ ಭಾವನೆ ನಮ್ಮೆಲ್ಲರಲ್ಲೂ ಬರಬೇಕಾಗಿದೆ. ಭಾರತದ 145 ಕೋಟಿ ಜನರೂ ಕೂಡ ಈ ಘಟನೆಯನ್ನ ಖಂಡಿಸಬೇಕು. ಧರ್ಮದ ಹೆಸರಿನನಲ್ಲಿ ಉಗ್ರರ ಹೇಯ ಕೃತ್ಯ ನಡೆದಿದೆ. ಭಯೋತ್ಪಾದಕರು ಪಾಕಿಸ್ತಾನದಿಂದ ನುಸುಳಿದರೆ ಅನ್ನುವಂತದ್ದೇ ಮುಖ್ಯವಾಗಿದೆ. ಅವರ ಕೃತ್ಯ ಹೇಯ, ಹೇಡಿತನದಿಂದ ಕೂಡಿದೆ.. ಭಾರತೀಯ ಸೈನಿಕರು ಗಡಿಯನ್ನ ಹಗಲು ರಾತ್ರಿ ಕಾಯ್ತಿದ್ದಾರೆ. ದೇಶವನ್ನ ಕಾಪಾಡುವಾಗ ಎಷ್ಟೊ ಜನ ಸೈನಿಕರು ಹತ್ಯೆಯಾಗ್ತಿದ್ದಾರೆ. ನಿವೆಲ್ಲಾ ನೋಡಿದ್ರಿ ದೇಶವನ್ನ ಕಾಪಾಡುವ ಸೈನಿಕರಿದ್ದ ಬಸ್ಸನ್ನೆ ಸುಟ್ಟು ಹಾಕಿದ್ರು ಭಯೋತ್ಪಾದಕರು. ಅವರ ಜೀವನವೆಲ್ಲಾ ಏನಾಗಬೇಕು.. ಅಂತ ಪರಿಸ್ಥಿತಿ ಇದೆ.. ಇದಕ್ಕೆ ಕೇಂದ್ರ ಸರ್ಕಾರ ಏನು ಕ್ರಮ ಕೈಗೊಳ್ತದೆ. ಎಲ್ಲರೂ ಒಟ್ಟಾಗಿ ಈ ಬಗ್ಗೆ ಚಿಂತನೆ ಮಾಡ್ತಿದ್ದಾರೆ. ಕೇಂದ್ರ ಸರ್ಕಾರ ದೃಡ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.