ವಿದೇಶದಿಂದ ಹರಿದುಬರುವ ದಾನವನ್ನು ಎನ್ ಜಿಒ ದುರ್ಬಳಕೆ ಮಾಡಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಮೈಸೂರು, ಚೆನ್ನೈ, ರಾಜಸ್ಥಾನ ಸೇರಿದಂತೆ ದೇಶದ 40 ಕಡೆ ಸಿಬಿಐ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಮಂಗಳವಾರ ದಿಢೀರನೆ ದಾಳಿ ಮಾಡಿರುವ ಸಿಬಿಐ ಅಧಿಕಾರಿಗಳು ಐವರು ಅಧಿಕಾರಿಗಳು ಸೇರಿದಂತೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಿದೇಶೀ ದಾನವನ್ನು ಹಂಚಿಕೆ ಮಾಡಲು ಲಂಚ ಪಡೆಯುವ ಮೂಲಕ ಎಫ್ ಸಿಆರ್ ಎ ಪ್ರಮಾಣಪತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದಕ್ಕಾಗಿ ನಿಯಮ ಉಲ್ಲಂಘಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ದಿಢೀರ್ ದಾಳಿ ನಡೆಸಲಾಗಿದೆ.

ಎನ್ ಜಿಒಗಳಿಗೆ ಹಣ ಹಂಚಿಕೆ ಮಾಡಲು ಸುಮಾರು 2 ಕೋಟಿ ರೂ.ವನ್ನು ಹವಾಲಾ ಮೂಲಕ ಸರಬರಾಜು ಮಾಡುತ್ತಿದ್ದರು ಎಂದು ಪರಿಶೀಲನೆ ವೇಳೆ ತಿಳಿದು ಬಂದಿದೆ.