ಸತತ ಎರಡು ಸೋಲುಗಳನ್ನ ಕಂಡರೂ ನಿಖಿಲ್ ಕುಮಾರಸ್ವಾಮಿ(Nikhil kumaraswamy) ಉತ್ಸಾಹ ಸ್ವಲ್ಪವೂ ಕುಗ್ಗಿಲ್ಲ. 2019 ರ ಲೋಕಸಭಾ ಚುನಾವಣೆ (2019 mp election) ಮತ್ತು ಇತ್ತೀಚಿನ ವಿಧಾನಸಭಾ ಉನಾಣೆಯಲ್ಲಿ (mia election) ನಿಖಿಲ್ ಕ್ರಮವಾಗಿ ಮಂಡ್ಯ ಮತ್ತು ರಾಮನಗರದಿಂದ (mandya & ramanagara) ಸ್ಪರ್ಧಿಸಿ ಸೋಲು ಕಂಡಿದ್ದರು. ಆದ್ರೆ ಮೂರನೇ ಬಾರಿಗೆ ನಿಖಲ್ ಮಾಡು ಇಲ್ಲವೇ ಮಡಿ (Do or Die) ಎಂಬ ಪರಿಸ್ಥಿತಿಯಲ್ಲಿದ್ದಾರೆ, ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡ್ತಾರೋ ಇಲ್ಲೋ ಎಂಬ ಕುತೂಹಲದ ನಡುವೆ ಇದೀಗ ಕುಮಾರಸ್ವಾಮಿ (HD kumaraswamy) ತಮ್ಮ ಪುತ್ರನ ಹೆಗಲಿಗೆ ದೊಡ್ಡ ಜವಾಬ್ದಾರಿಯನ್ನೇ ನೀಡಿದ್ದಾರೆ.
![](https://pratidhvani.com/wp-content/uploads/2024/03/IMG_5994.jpeg)
ಹೆಚ್ಡಿ ಕುಮಾರಸ್ವಾಮಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಸಂಪೂರ್ಣ ಕಾರ್ಯಪ್ರವೃತ್ತರಾಗಿ ಕ್ಷೇತ್ರ ಪರ್ಯಟನೆ ಮಾಡಿ ಅಭ್ಯರ್ಥಗಳನ್ನ ಗೆಲ್ಲಿಸೋದು ಕಷ್ಟಕರವಾಗಲಿದೆ. ಆದ್ರೆ ಸದ್ಯ ಜೆಡಿಎಸ್ (Jds) ಇರುವ ಪರಿಸ್ಥಿತಿಯಲ್ಲಿ ಈ ಚುನಾವಣೆ ಪಕ್ಷದ ಪಾಲಿಗೆ ಅತಿಮುಖ್ಯ. ಸೋ ಈಗಾಗಲೇ ಮೈತ್ರಿ (alliance) ಒಂಪದದ ಪ್ರಕಾರ ಮಂಡ್ಯ ಹಾಸನ ಮತ್ತು ಕೋಲಾರವನ್ನ (mandya, hassan,kolar) ಬಿಜೆಪಿ ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು, ಆ ಪೈಕಿ ಮಂಡ್ಯ ಮತ್ತು ಹಾಸನ ಗೆಲ್ಲಿಸುವ ಸಂಪೂರ್ಣ ಹೊಣೆಯನ್ನ ಹೆಚ್ಡಿಕೆ (HDK) ನಿಖಿಲ್ ರ ಹೆಗಲಿಗೆ ವಹಿಸಿದ್ದಾರೆ.
![](https://pratidhvani.com/wp-content/uploads/2024/03/IMG_5993.jpeg)
ಹೀಗಾಗಿ ತಂದೆಯ ಅನುಪಸ್ಥಿತಿಯಲ್ಲಿ ಎರಡು ಗೆಲ್ಲಿಸುವ ಕ್ಷೇತ್ರಗಳ ಜವಾಬ್ದಾರಿ ಇದೀಗ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಹೆಗಲ ಮೇಲಿದೆ. ಚುನಾವಣಾ ತಂತ್ರಗಾರಿಕೆ, ಅಭ್ಯರ್ಥಿಗಳು ಪರ ಕ್ಯಾಂಪೇನ್ (campaign) ಈ ಎಲ್ಲ ಜವಾಬ್ದಾರಿಯ ಹೊಣೆಯನ್ನ ಹೆಚ್ಚಿಕೆ ತಮ್ಮ ಪುತ್ರನಿಗೆ ವಹಿಸಿದ್ದಾರೆ. ಇದಕ್ಕಾಗಿ ಹೆಚ್ಡಿ ದೇವೇಗೌಡರ (HD Devegowda) ಮಾರ್ಗದರ್ಶನದಲ್ಲಿ ಲೋಕ ಗೆಲ್ಲಿಸುವ ಟ್ಯಾಸ್ ನ ನಿಖಿಲ್ ವಹಿಸಿಕೊಂಡಿದ್ದಾರೆ. ಸ್ಥಳೀಯ ಕಾರ್ಯಕರ್ತ (party workers) ಮಟ್ಟದಲ್ಲಿ ಹೊಂದಾಣಿಕೆ, ಜೊತೆ ಶಾಸಕರು (local mla) ಮಾಜಿ ಶಾಸಕರು, ಮುಖಂಡರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋದು, ತಂತ್ರ ಪ್ರತಿತಂತ್ರ ಹೆಣೆಯೋದು ಇದೆಲ್ಲವೂ ನಿಖಿಲ್ ಗೆ ಜವಾಬ್ದಾರಿಯ ಜೊತೆಗೆ ಸವಾಲೂ ಕೂಡ ಆಗಿದ್ದು, ಹೇಗೆ ನಿಭಾಯಿಸಲಿದ್ದಾರೆ ಕಾದುನೋಡಬೇಕಿದೆ.