ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ, ಅಧಿಕಾರಿಗಳು ಎರಡು ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸುವ ಜನರ ಮೇಲೆ ಹೆಚ್ಚಿನ ಕಣ್ಗಾವಲಿರಿಸಿದ್ದಾರೆ.
ಎರಡು ರಾಜ್ಯಗಳ ಪ್ರಯಾಣಿಕರು ರಾಜ್ಯಕ್ಕೆ ಬರುವ ಮುನ್ನ RT-PCR ನೆಗೆಟಿವ್ ಪ್ರಮಾಣಪತ್ರಗಳನ್ನು ತರಬೇಕು ಅಥವಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, “ಎರಡು ರಾಜ್ಯಗಳ ಪ್ರಯಾಣಿಕರು ಲಸಿಕೆ ಹಾಕಿದರೂ 72 ಗಂಟೆಗಳಿಗಿಂತ ಕಡಿಮೆ ತೆಗೆದುಕೊಂಡ ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಒದಗಿಸಬೇಕು ಎಂದಿದ್ದಾರೆ.”
ಬಿಬಿಎಂಪಿ ವಿಶೇಷ ಆಯುಕ್ತರು (ಆರೋಗ್ಯ) ಸುತ್ತೋಲೆ ಹೊರಡಿಸಿದ್ದು, ರೈಲ್ವೆ ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಕರೋನ ಪರೀಕ್ಷೆಗಳನ್ನು ನಡೆಸಲು ಮತ್ತು ಆರ್ಟಿ-ಪಿಸಿಆರ್ ನೆಗೆಟಿವ್ ವರದಿಗಳನ್ನು ಪರಿಶೀಲಿಸಲು ನಾಲ್ಕು ತಂಡಗಳನ್ನು ಸ್ಥಾಪಿಸಲಾಗಿದೆ.
ನೆಗೆಟಿವ್ ವರದಿ ಇಲ್ಲದವರನ್ನು ಸ್ಥಳದಲ್ಲೇ ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ಮೆಜೆಸ್ಟಿಕ್ ಪ್ರದೇಶದ ನಿಲ್ದಾಣಗಳಲ್ಲದೆ, ಮೈಸೂರು ರಸ್ತೆ, ಯಶವಂತಪುರ, ಕೆಂಗೇರಿ ಮತ್ತು ಶಾಂತಿನಗರದಲ್ಲಿರುವ ಉಪ ಟರ್ಮಿನಲ್ಗಳು ಹಾಗೂ ಯಶವಂತಪುರ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಕೆಆರ್ ಪುರಂನಲ್ಲಿರುವ ರೈಲ್ವೇ ನಿಲ್ದಾಣಗಳು ಪರೀಕ್ಷಾ ಪ್ರಮಾಣಪತ್ರಗಳನ್ನು ಪರಿಶೀಲಿಸುವ ಅಥವಾ ಪ್ರಯಾಣಿಕರಿಗೆ ಪರೀಕ್ಷೆಗಳನ್ನು ನಡೆಸುವ ತಂಡಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕೆಲವು ಪರೀಕ್ಷಾ ಫಲಿತಾಂಶಗಳನ್ನು ನೇರವಾಗಿ ರೋಗಿಗಳಿಗೆ ನೀಡುವುದನ್ನು ಗಮನಿಸಿದ ನಂತರ. ಬಿಬಿಎಂಪಿ ಪ್ರಯೋಗಾಲಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಪರೀಕ್ಷಾ ಫಲಿತಾಂಶಗಳ ಬಗ್ಗೆ ಐಸಿಎಂಆರ್ ಪೋರ್ಟಲ್ನಲ್ಲಿ ಮುಂಚಿತವಾಗಿ ಅಪ್ಡೇಟ್ ಮಾಡುವಂತೆ ಆದೇಶಿಸಿದೆ ಎಂದು ಹೇಳಿದ್ದಾರೆ.
ಐಸಿಎಂಆರ್ ಪೋರ್ಟಲ್ನಲ್ಲಿ ಆರ್ಟಿ-ಪಿಸಿಆರ್ ಮತ್ತು ಆರ್ಎಟಿ ಪರೀಕ್ಷೆಗಳನ್ನು ನವೀಕರಿಸಲು ಮತ್ತು ವರದಿಯನ್ನು ರೋಗಿಗೆ ಹಸ್ತಾಂತರಿಸುವ ಮೊದಲು ಅವುಗಳನ್ನು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿಗೆ ಇ-ಮೇಲ್ ಮಾಡವ ಸೌಲಭ್ಯಗಳನ್ನು ಕಡ್ಡಾಯಗೊಳಿಸಲಾಗಿದೆ.
ಎಲ್ಲಾ ಕೋವಿಡ್ ರೋಗಿಗಳಿಗೆ ದೈಹಿಕ ಪರೀಕ್ಷೆ ಕಡ್ಡಾಯವಾಗಿದೆ:
ಬಿಬಿಎಂಪಿ ಎಲ್ಲಾ ಕೋವಿಡ್-ಪಾಸಿಟಿವ್ ರೋಗಿಗಳಿಗೆ ದೈಹಿಕ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ.
ಭಾನುವಾರ ಹೊರಡಿಸಿದ ಸುತ್ತೋಲೆಯಲ್ಲಿ, ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಎಲ್ಲಾ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ಕಡ್ಡಾಯ ದೈಹಿಕ ಪರೀಕ್ಷೆಯನ್ನು ಕೈಗೊಳ್ಳಲು ನಿರ್ಧರಿಸಿದೆ ಎಂದು ಹೇಳಿದೆ.
ಬಿಬಿಎಂಪಿ ಆರೋಗ್ಯ ತಜ್ಞರ ಸಮಿತಿಯ ಸಲಹೆಯಂತೆ, ಪಾಸಿಟಿವ್ ಪ್ರಕರಣಗಳ ದೈಹಿಕ ಪರೀಕ್ಷೆಯು ವಿವರವಾದ ವೈದ್ಯಕೀಯ ಮೌಲ್ಯಮಾಪನವನ್ನು ಹೊಂದಿರುತ್ತದೆ. ತಜ್ಞರ ಸಮಿತಿಯು ಆರಂಭಿಕ ದೈಹಿಕ ಪ್ರಯೋಗವು ಬಿಗಡಾಯಿಸುವ ಆರೋಗ್ಯ ಮತ್ತು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಭಾವಿಸಿದೆ.
ಕೆಲವು ಕೋವಿಡ್ -19 ರೋಗಿಗಳಿಗೆ ತನ್ನ ದೈಹಿಕ ಚಿಕಿತ್ಸಾ ಕೇಂದ್ರಗಳಲ್ಲಿ Physical Triage Centres (ಪಿಟಿಸಿ) ಮತ್ತು Mobile Triaging Units (ಎಂಟಿಯು) ಸೇವೆ ನೀಡಲು ನಿರಾಕರಿಸಲಾಗಿದೆ ಎಂದು ಬಿಬಿಎಂಪಿ ಗಮನಿಸಿದ ನಂತರ ಈ ಆದೇಶ ಬಂದಿದೆ.
ಯಾವುದೇ ರೋಗಿಯು ಪಿಟಿಸಿ ಮತ್ತು ಎಂಟಿಯುಗಳಲ್ಲಿ ದೈಹಿಕ ಪರೀಕ್ಷೆಯನ್ನು ನಿರಾಕರಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ ಮತ್ತು ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಆದೇಶ, 2020, ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.