• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

BSF ಮುನ್ನಡೆಸುವ IPS ನಾಯಕತ್ವದಲ್ಲಿ ಎದ್ದು ಕಾಣುತ್ತಿದೆ ʼಮಿಲಿಟರಿ ತಂತ್ರಜ್ಞಾನʼದ ಕೊರತೆ

by
May 17, 2020
in ದೇಶ
0
BSF ಮುನ್ನಡೆಸುವ IPS ನಾಯಕತ್ವದಲ್ಲಿ ಎದ್ದು ಕಾಣುತ್ತಿದೆ ʼಮಿಲಿಟರಿ ತಂತ್ರಜ್ಞಾನʼದ ಕೊರತೆ
Share on WhatsAppShare on FacebookShare on Telegram

ಗಡಿ ಭದ್ರತಾ ಪಡೆ (BSF) ದೇಶದ ಗಡಿಯಲ್ಲಿ ನಡೆಯಬಹುದಾದ ಒಳನುಸುಳುವಿಕೆ, ಸ್ಮಗ್ಲಿಂಗ್‌ ಹಾಗೂ ಇನ್ನಿತರ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಿಸಲೆಂದೇ ಗಡಿಯಲ್ಲಿ ಮೊದಲ ಸಾಲಿನಲ್ಲಿ ಕಾಣಸಿಗುವ ಪಡೆಯಾಗಿದೆ. ಅಧಿಕೃತವಾಗಿಯೂ BSF ಕಾರ್ಯಚಟುವಟಿಕೆಯನ್ನ ಗಡಿ ಭದ್ರತೆ ಹಾಗೂ ಅದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಉಲ್ಲೇಖವಿದೆ. ಅಲ್ಲದೇ BSF ಅನ್ನು ಎರಡು ವಿಭಾಗಗಳಾಗಿ ಒಂದು ʼಶಾಂತಿ ಕಾಲʼದ ಹಾಗೂ ʼಯುದ್ಧ ಸಮಯʼದ BSF ಎಂದು ವಿಭಜಿಸಲಾಗಿದೆ. ʼಶಾಂತಿ ಸಮಯʼ ದ BSF ಪ್ರಮುಖವಾಗಿ ಸ್ಮಗ್ಲಿಂಗ್‌ ಹಾಗೂ ಒಳನುಸುಳುವಿಕೆ ಮತ್ತು ಗಡಿಯಿಂದ ಹೊರಹೋಗುವಿಕೆ ಜೊತೆಗೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾವಿಟ್ಟಿರುತ್ತದೆ.

ADVERTISEMENT

ಇನ್ನು ಯುದ್ಧ ಸಮಯದಲ್ಲಿ BSF ಕಡಿಮೆ ಬೆದರಿಕೆ ಇರುವ ಪ್ರದೇಶದಲ್ಲಿ ಇರುತ್ತದೆ. 1965 ಇಂಡೋ-ಪಾಕ್‌ ಕದನವಾಗುವವರೆಗೂ ಪಾಕಿಸ್ತಾನ ಗಡಿಯಲ್ಲಿ ರಾಜ್ಯ ಸಶಸ್ತ್ರ ಪೊಲೀಸ್‌ ಬೆಟಾಲಿಯನ್‌ ಅನ್ನೋ ನಿಯೋಜನೆಗೊಳಿಸಲಾಗಿತ್ತು. ಯುದ್ಧದ ಬಳಿಕ BSF ಪಡೆಯನ್ನ ಸ್ಥಾಪಿಸಿ ಆ ಸಿಬ್ಬಂದಿಗಳನ್ನ ನಿಯೋಜಿಸಲಾಯಿತು. ಈ ಮೂಲಕ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿಯ ಆಧುನಿಕ ಶಸ್ತ್ರಾಸ್ತ್ರಗಳನ್ನ ಹೊಂದಿರುವ ಪಡೆಯನ್ನ ಗಡಿ ಭದ್ರತೆಗಾಗಿ ನಿಯೋಜಿಸಲಾಯಿತು. ಆ ಸಮಯದಲ್ಲಿ ಬಂಡುಕೋರರ ಅಥವಾ ಉಗ್ರಗಾಮಿಗಳ ಸಮಸ್ಯೆ ಇರಲಿಲ್ಲ. ಆದರೆ ಕಳ್ಳ ಸಾಗಾಣಿಕೆ ಹಾಗೂ ಇನ್ನಿತರ ಕಾನೂನು ವಿರೋಧಿ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿತ್ತು. ಆದರೆ 1965 ಯುದ್ಧಕ್ಕೆ ಅದು ಕಾರಣವಾಗಿರಲಿಲ್ಲ. 1965 ರ ನಂತರ ಶತ್ರು ರಾಷ್ಟ್ರಗಳ ದಾಳಿಗೆ ಎದುರಾಗಿ BSF ತನ್ನ ಕಾರ್ಯಾಚರಣೆ ಆರಂಭಿಸಿತ್ತು.

ಇನ್ನು ಇದುವರೆಗೂ BSF ಅನ್ನು ಐಪಿಎಸ್‌ ಅಧಿಕಾರಿಗಳೇ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಪೊಲೀಸ್‌ ಹಿನ್ನೆಲೆಯ ಐಪಿಎಸ್‌ ಅಧಿಕಾರಿಗಳಿಗೆ ಮಿಲಿಟರಿ ತಾಂತ್ರಿಕತೆ ಬಗ್ಗೆ ಹೆಚ್ಚಿನ ಅರಿವಿರುವುದಿಲ್ಲ. ಆದ್ದರಿಂದ ಯುದ್ಧ ಸಮಯದಲ್ಲಿ ವೃತ್ತಿಪರವಾಗಿ ಮಾರ್ಗದರ್ಶನ ನೀಡಲು ಸಾಧ್ಯವಾಗದು, ಬದಲಾಗಿ ಶಾಂತಿ ಸಮಯದಲ್ಲಿ ಯಾವ ರೀತಿ BSF ಕಾರ್ಯನಿರ್ವಹಿಸುವುದು ಅನ್ನೋದರ ಬಗ್ಗೆಯೆ ಹೆಚ್ಚು ಫೋಕಸ್‌ ಮಾಡಲಾಗುತ್ತಿದೆ. ಆದರೆ ಯಾರೊಬ್ಬರೂ ಯುದ್ಧದ ಕಾಲದ ಬಗ್ಗೆ ಮಾತಾಡುವುದಿಲ್ಲ, ಅಥವಾ ಅದಕ್ಕೆ ಬೇಕಾದ ಸಿದ್ಧತೆ ಬಗ್ಗೆಯೂ ಚರ್ಚಿಸುವುದಿಲ್ಲ ಎಂದು ಐಪಿಎಸ್‌ ಅಧಿಕಾರಿ CRPF ಹಾಗೂ BSF ಎಡಿಜಿಪಿ ಆಗಿದ್ದ Dr.NC ಅಸ್ತಾನ ತಿಳಿಸುತ್ತಾರೆ.

2017 ರ ಎಪ್ರಿಲ್‌ನಲ್ಲಿ ಗೃಹ ವ್ಯವಹಾರಗಳ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯು ರಾಜ್ಯ ಸಭೆಗೆ ಸಲ್ಲಿಸಿದ ವರದಿಯಲ್ಲೂ BSF ಗಡಿಯಲ್ಲಿ ನಿರ್ವಹಿಸಿದ ಯುದ್ಧ ಕಾಲದ ಪಾತ್ರದ ಬಗ್ಗೆ ತಿಳಿಸಿಲ್ಲ. ʼಗಡಿ ಭದ್ರತೆ: ಸಾಮರ್ಥ್ಯ ಅಭಿವೃದ್ಧಿ ಮತ್ತು ಸಂಸ್ಥೆಗಳುʼ ಶೀರ್ಷಿಕೆಯಡಿ ಸಲ್ಲಿಕೆಯಾದ ಈ ವರದಿಯಲ್ಲಿ BSF ಶಾಂತಿ ಸಮಯದಲ್ಲಿ ಮಾಡಬಲ್ಲ ಚಟುವಟಿಕೆಗಳ ಬಗ್ಗೆಯಷ್ಟೇ ಬೆಳಕು ಚೆಲ್ಲಿದೆ ಎಂದು Dr.NC ಅಸ್ತಾನ ತಿಳಿಸಿದ್ದಾರೆ.

ಇನ್ನು ರಕ್ಷಣೆಯ ಮೊದಲ ಸಾಲಿನಲ್ಲಿರುವ ರಕ್ಷಣಾ ಆಕಾರಗಳು ಒಂದು ನಿಮಿಷವೂ ಶೆಲ್‌ ದಾಳಿಯನ್ನ ತಡೆಗಟ್ಟುವಲ್ಲಿ ಸಾಧ್ಯವಾಗದು. ಸಾಮಾನ್ಯವಾಗಿ ಗಡಿಗಳಲ್ಲಿ ತವರ ಹಾಳೆಗಳ ಇಲ್ಲವೇ ಮರಳು ದಿಬ್ಬಗಳನ್ನ ರಚಿಸಿದ ವೀಕ್ಷಣಾ ಗೋಪುರಗಳು ಇರುತ್ತವೆ. ಒಂದು ಶೆಲ್ ದಾಳಿಯನ್ನೂ ತಡೆಗಟ್ಟಲು ಸಾಧ್ಯವಾಗದು. ಶೆಲ್‌ ದಾಳಿಯೆನ್ನುವುದು ಶತ್ರು ರಾಷ್ಟ್ರ ನಡೆಸಬಲ್ಲ ನಿಖರ ದಾಳಿಯಾಗುವ ಸಾಧ್ಯತೆ ಇರುವುದರಿಂದ ಮರಳು ದಿಬ್ಬಗಳಿಂದ ರಚಿಸಿದ ವೀಕ್ಷಣಾ ಗೋಪುರ ಹಾಗೂ ಬಂಕರ್‌ಗಳು ಕ್ಷಣ ಮಾತ್ರಕ್ಕೆ ನಾಶವಾಗುವುದು. ಆದರೆ ಐಪಿಎಸ್‌ ಹಿನ್ನೆಲೆಯಿಂದ ಬಂದ ಅಧಿಕಾರಿಗಳಿಗೆ ಇದ್ಯಾವುದೂ ಸುಲಭವಾಗಿ ಅರ್ಥವಾಗದು.

ಅಲ್ಲದೇ ಕೆಲವರು ಐಪಿಎಸ್‌ ನಾಯಕತ್ವವು ಅಗತ್ಯವಿಲ್ಲವೆಂದೇ ವಾದಿಸುತ್ತಾರೆ. ಕಾರಣ, ಅವರಲ್ಲಿ ಯುದ್ಧ ಕೌಶಲ್ಯತೆ ಬಗ್ಗೆ ಜ್ಞಾನದ ಕೊರತೆ ಹಾಗೂ ಯುದ್ಧಕಾಲದಲ್ಲಿ BSF ನಿರ್ವಹಿಸಬಲ್ಲ ಪಾತ್ರವನ್ನ ಐಪಿಎಸ್‌ ನಾಯಕತ್ವವು ನಿರ್ಲಕ್ಷಿಸುತ್ತದೆ ಎನ್ನುವುದು Dr.NC ಅಸ್ತಾನ ಅವರ ಅಭಿಪ್ರಾಯ.

ಮಿಲಿಟರಿ ತಾಂತ್ರಿಕ ಜ್ಞಾನ ಅನ್ನೋದು ನಿರಂತರ ಅಧ್ಯಯನ ಇಲ್ಲವೇ ಸಾಂಸ್ಥಿಕವಾಗಿ ಕಲಿತರೆ ಮಾತ್ರ ಅದು ತಿಳಿಯುವ ವಿಚಾರವೇ ಹೊರತು, ಅದು UPSC ಉತ್ತೀರ್ಣವಾಗಿ ಬಂದ ಮಾತ್ರಕ್ಕೆ ತಿಳಿಯದು. ನೆಪೋಲಿಯನ್‌ ಹೇಳಿರುವ ಮಾತೊಂದು ನೆನಪಿಗೆ ಬರುತ್ತದೆ ಅದೇನೆಂದರೆ, “ಓದಿರಿ ಮತ್ತು ಪುನಃ ಓದಿರಿ, ಅಲೆಕ್ಸಾಂಡರ್‌, ಹ್ಯಾನಿಬೆಲ್‌, ಸೀಸರ್‌, ಅಡೋಲ್ಫ್, ಟುರೆನ್ನೆ, ಫೆಡೆರಿಕ್‌ ಮುಂತಾದವರ ನಾಯಕತ್ವದ ಇತಿಹಾಸವನ್ನ ಓದಿರಿ ಮತ್ತು ಯುದ್ಧ ಕಲೆಯಲ್ಲಿ ಅವರು ಹೊಂದಿದ್ದ ಸೀಕ್ರೆಟ್‌ಗಳನ್ನ ತಿಳಿಯಿರಿ”. ಮಿಲಿಟರಿ ತಂತ್ರಜ್ಞಾನ ಅನ್ನೋದನ್ನ ರಾಷ್ಟ್ರೀಯ ಪೊಲೀಸ್‌ ಅಕಾಡೆಮಿಗಳು ಹೇಳಿಕೊಡಲು ಸಾಧ್ಯವಿಲ್ಲ. ಆದ್ದರಿಂದ, ವಾಸ್ತವದಲ್ಲಿ BSF ಗೆ ನಿಯೋಜಿಸುವ ಮುನ್ನವೇ ಅವರ ಸಾಮರ್ಥ್ಯ ಪರೀಕ್ಷೆ ನಡೆಸಬೇಕು ಎಂದು Dr. NC ಅಸ್ತಾನ ಅಭಿಪ್ರಾಯಪಟ್ಟಿದ್ದಾರೆ.

ಕೃಪೆ: ದಿ ವೈರ್

Tags: ‌ Boarder security force1965 Indo-pak war1965 ಇಂಡೋ-ಪಾಕ್‌ ವಾರ್IPSಐಪಿಎಸ್ಗಡಿ ಭದ್ರತಾ ಪಡೆ
Previous Post

ರೆಡ್ ಝೋನ್ ವಲಸಿಗರಿಗೆ ಅನುಮತಿ ನೀಡಿ ಎಡವಿತೇ ಸರ್ಕಾರ?

Next Post

ಮೂರು ಹಂತದ ಲಾಕ್‌ಡೌನ್: ಸಾವಿರಾರು ಕಿಲೋಮೀಟರ್‌ ಹಾದಿ ಸವೆಸಿದ ವಲಸೆ ಕಾರ್ಮಿಕರು

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಮೂರು ಹಂತದ ಲಾಕ್‌ಡೌನ್: ಸಾವಿರಾರು ಕಿಲೋಮೀಟರ್‌ ಹಾದಿ ಸವೆಸಿದ ವಲಸೆ ಕಾರ್ಮಿಕರು

ಮೂರು ಹಂತದ ಲಾಕ್‌ಡೌನ್: ಸಾವಿರಾರು ಕಿಲೋಮೀಟರ್‌ ಹಾದಿ ಸವೆಸಿದ ವಲಸೆ ಕಾರ್ಮಿಕರು

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada