• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

BMTC ಬಸ್ ಗಳ ಅಗ್ನಿ ಆಹುತಿ ಪ್ರಕರಣ | ಬಿಎಂಟಿಸಿ ಕೈ ಸೇರಿದ ಅಗ್ನಿ ಅನಾಹುತದ ತನಿಖಾ ವರದಿ

ಕರ್ಣ by ಕರ್ಣ
February 25, 2022
in ಕರ್ನಾಟಕ
0
BMTC ಬಸ್ ಗಳ ಅಗ್ನಿ ಆಹುತಿ ಪ್ರಕರಣ | ಬಿಎಂಟಿಸಿ ಕೈ ಸೇರಿದ ಅಗ್ನಿ ಅನಾಹುತದ ತನಿಖಾ ವರದಿ
Share on WhatsAppShare on FacebookShare on Telegram

ಕಳೆದೊಂದು ತಿಂಗಳ ಹಿಂದೆ ಹದಿನೈದು ದಿನಗಳ ಅಂತರದಲ್ಲಿ ಚಲಿಸುತ್ತಿದ್ದ ಅಶೋಕ್ ಲೈಲೆಂಡ್ (Ashok Leyland) ಕಂಪನಿಯ ಬಿಎಂಟಿಸಿ ಬಸ್ ಗಳಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ (Short Circuit) ನಿಂದ ಬೆಂಕಿ ಕಾಣಿಸಿಕೊಂಡಿದೆ ಅಂತ ಹೇಳಲಾಗಿತ್ತು. ಆದರೂ ವಾಸ್ತವತೆ ಅರಿಯುವ ನಿಟ್ಟಿನಲ್ಲಿ ನಿಗಮ, ತನ್ನ ತಾಂತ್ರಿಕ ತಜ್ಞರು, ಅಶೋಕ್ ಲೈಲೆಂಡ್ ಕಂಪನಿಯ ಪರಿಣಿತರನ್ನ ಒಳಗೊಂಡ ಸಮಿತಿನ್ನ ರಚನೆ ಮಾಡಿತ್ತು. ಆ ಸಮಿತಿ ಸುದೀರ್ಘ ತನಿಖೆ ನಡೆಸಿ ವರದಿಯನ್ನ ಬಿಎಂಟಿಸಿ ಎಂಡಿಗೆ ನೀಡಿದೆ. ಇದರಲ್ಲಿ ತನ್ನದೇ ತಪ್ಪಿನಿಂದಾಗಿ ಘಟನೆ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ.

ADVERTISEMENT

ತನಿಖಾ ವರದಿಯಲ್ಲಿನ (Invention Report) ಪ್ರಮುಖ ಅಂಶ

– ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರುವುದೇ ಕಾರಣ

– ಸಮರ್ಪಕ ನಿರ್ವಹಣೆ ಇಲ್ಲದ ಬೆಂಕಿ ಕಾಣಿಸಿಕೊಂಡಿದೆ

– ವಿನ್ಯಾಸ ದೋಷವೂ ಕೂಡ ಅಗ್ನಿ ಅನಾಹುತಕ್ಕೆ ಕಾರಣ

– ತಕ್ಷಣವೇ ವಿನ್ಯಾಸ ಬದಲಾವಣೆ ಮಾಡುವಂತೆಯೂ ಉಲ್ಲೇಖ

BMTC ಬಳಿ ಇದೆ ಒಟ್ಟು 189 ಮಿಡಿ ಬಸ್

ಸಾಮಾನ್ಯವಾಗಿ ಬಸ್ (BUS) ಗಳಲ್ಲಿ ಬಸ್ ನ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಬೇರೆ ಬೇರೆ ಕಡೆಗಳಲ್ಲಿ ಇರುತ್ತೆ. ಆದರೆ ಅಶೋಕ್ ಲೈಲೆಂಡ್ ಗೆ ಸೇರಿದ ಮಿಡಿ ಬಸ್ ಕೇವಲ 9 ಮೀಟರ್ ಇರುವುದರಿಂದ ಬಸ್ ಒಳಭಾಗದಲ್ಲಿ ಜಾಗದ ಕೊರತೆ ಇರುವುದರಿಂದ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರುವಂತೆ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಸ್ಟಾರ್ಟರ್ ಬಟನ್ ಒತ್ತಿದಾಗ ಅದರಿಂದ ಆದ ಶಾರ್ಟ್ ಸರ್ಕ್ಯೂಟ್ ನಿಂದ ಡಿಸೇಲ್ ಪೈಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹಾಗೆನೇ ಸಮರ್ಪಕ ನಿರ್ವಹಣೆ ಮಾಡಬೇಕಾಗಿದ್ದ ನಿಗಮದ ಅಧಿಕಾರಿಗಳು ನಿರ್ವಹಣೆ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಇದಕ್ಕಿಂತ ಮುಖ್ಯವಾಗಿ ವಿನ್ಯಾಸ ದೋಷವೂ ಕೂಡ ಘಟನೆಗೆ ಕಾರಣ ಎನ್ನುವುದು ವರದಿಯಲ್ಲಿ ಗೊತ್ತಾಗಿದೆ. ಹೀಗಾಗಿ ಕೂಡಲೇ ಬಸ್ ನ ವಿನ್ಯಾಸ ಬದಲಾವಣೆ ಮಾಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಸದ್ಯ ಬಿಎಂಟಿಸಿಯಲ್ಲಿ 189 ಮಿಡಿ ಗಳು ಸಂಚಾರ ಮಾಡುತ್ತಿವೆ. ಈ ಎಲ್ಲಾ ಬಸ್ ಗಳ ವಿನ್ಯಾಸವನ್ನ ಬದಲಾವಣೆ ಮಾಡಿ ಬಳಿಕ ರಸ್ತೆ ಮೇಲೆ ಇಳಿಸುವ ಕೆಲಸವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಬಸ್ ಗೂ ಕನಿಷ್ಟ 20 ಸಾವಿರ ಖರ್ಚು ಮಾಡಿ ಮರು ವಿನ್ಯಾಸ ಮಾಡಬೇಕಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ನಿಗಮಕ್ಕೆ ಇದು ಮತ್ತೊಂದು ಹೊರೆ ಆಗುವುದರಲ್ಲಿ ಎರಡು ಮಾತಿಲ್ಲ.

Tags: Ashok LeylandBengaloreBMTCbusInvention ReportShort Circuittransportಅಶೋಕ ಲೇಲ್ಯಾಂಡ್‌ತನಿಖಾ ವರದಿಬಿಎಂಟಿಸಿಬೆಂಗಳೂರುಶಾರ್ಟ್‌ ಸರ್ಕ್ಯೂಟ್ಸಾರಿಗೆ
Previous Post

ನಟ ಚೇತನ್ ಅಹಿಂಸಾಗೆ ಜಾಮೀನು ಮಂಜೂರು

Next Post

BBMP ಮೇಲೆ ACB ‘ಬೃಹತ್’ ದಾಳಿ : 27 ಕಡೆ ಏಕಕಾಲದಲ್ಲಿ ತಲಾಶ್

Related Posts

ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ
ಕರ್ನಾಟಕ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

by ಪ್ರತಿಧ್ವನಿ
April 10, 2026
0

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಸಾಲಿನಿಂದ ಮುದ್ರಿತ ಅಂಕಪಟ್ಟಿ ನೀಡುವ ಪದ್ಧತಿಗೆ ಸರ್ಕಾರ ತೆರೆ ಎಳೆಯಲು ನಿರ್ಧರಿಸಿದೆ. ಬದಲಿಗೆ ಡಿಜಿಟಲ್ ಅಂಕಪಟ್ಟಿಯನ್ನೇ ಅಧಿಕೃತವಾಗಿ...

Read moreDetails
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
Next Post
BBMP ಮೇಲೆ ACB ‘ಬೃಹತ್’ ದಾಳಿ : 27 ಕಡೆ ಏಕಕಾಲದಲ್ಲಿ ತಲಾಶ್

BBMP ಮೇಲೆ ACB 'ಬೃಹತ್' ದಾಳಿ : 27 ಕಡೆ ಏಕಕಾಲದಲ್ಲಿ ತಲಾಶ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada