
ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧದ ಹೋರಾಟವೇ ಡಿ.ಕೆ ಶಿವಕುಮಾರ್(DK Shivakumar) ಕುಮ್ಮಕ್ಕಿನಿಂದ ನಡೆಯುತ್ತಿರುವ ಹೋರಾಟ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಡಿ.ಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸುವುದೇ ಈ ಹೋರಾಟದ ಏಕಮಾತ್ರ ಅಜೆಂಡಾ ಎಂದಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿ.ವೈ ವಿಜಯೇಂದ್ರ (B Y Vijayendra) ಹಾಗು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ(Ex CM Yadiyurappa) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜೊತೆಗೆ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವುದಾದರೆ ತೆಗೆದುಕೊಳ್ಳಲಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ.

ಮೈಸೂರಿನ ಮುಡಾ ಹಗರಣದ (Muda Scam In Mysore) ವಿರುದ್ಧ ಮೈತ್ರಿ ನಾಯಕರ ಪಾದಯಾತ್ರೆ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basavana Gowda Patil Yathnal) ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಿದ್ರೆ ಮಹತ್ವ ಇರಲ್ಲ ಎಂದಿರುವ ಯತ್ನಾಳ್, ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ವಿಜಯೇಂದ್ರನೇ ಕಾರಣ. ಡಿ.ಕೆ ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರದ್ದು ಅಡ್ಜೆಸ್ಟ್ಮೆಂಟ್ ರಾಜಕೀಯ ಇದೆ. ಎಲ್ಲಾ ಪಕ್ಷದ ಹಗರಣಗಳ ಬಗ್ಗೆ ತನಿಖೆ ನಡೆಯಲಿ. ಕೋವಿಡ್ ಸಮಯದಲ್ಲಿ (Covid Scam) ಆದ ಹಗರಣಗಳ ಬಗ್ಗೆಯೂ ತನಿಖೆ ಆಗಲಿ. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರ ಮೇಲೆ ಕೇಸುಗಳು ಹಾಕುತ್ತಿರುವ ಬಗ್ಗೆಯೂ ತನಿಖೆ ಮಾಡಲಿ. ವಿಜಯೇಂದ್ರ ರೀತಿ ನಾನು ಸಿಡಿ ಇಟ್ಟುಕೊಂಡಿಲ್ಲ ಅಂತ ಕಿಡಿಕಾರಿದ್ದಾರೆ.

ಇನ್ನೂ ಮುಂದುವರಿದು ಯಡಿಯೂರಪ್ಪನ ಭ್ರಷ್ಟ ಕುಟುಂಬ ನಾನು ಒಪ್ಪಲ್ಲ. ಮೊದಲು ವಿಜಯೇಂದ್ರ ಭ್ರಷ್ಟಾಚಾರ ಹೊರಹಾಕಲಿ. ನರೇಂದ್ರ ಮೋದಿ ಅವರು ಸಹಿತ ಈ ವಿಚಾರವಾಗಿ ಗಮನ ಹರಿಸಲಿ ಎಂದು ಸಲಹೆ ನೀಡಿದ್ದಾರೆ. ವಿಜಯೇಂದ್ರ ಫೈಲ್ಗಳಿಗೆ ಡಿ.ಕೆ ಶಿವಕುಮಾರ್ ತಕ್ಷಣ ಸಹಿ ಮಾಡುತ್ತಾರೆ. ಇಬ್ಬರು ಭ್ರಷ್ಟರಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ವಾಲ್ಮೀಕಿ ಹಗರಣ ಮುಖ್ಯ ಮಂತ್ರೀಗಳೇ ಒಪ್ಪಿಕೊಂಡಿದ್ದಾರೆ. ಈ ಹಗರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಇದ್ದಾರೆ, ರಾಹುಲ್ ಗಾಂಧಿ ಕೂಡಾ ಇದ್ದಾರೆ ಎಂದಿದ್ದಾರೆ. ಮೈಸೂರು ಹಗರಣದಲ್ಲಿ ಯಡಿಯೂರಪ್ಪ ತಂಗಿ ಮಕ್ಕಳಿಗೆ ಎಷ್ಟು ಸೈಟ್ಗಳಿವೆ ಎಂದು ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ.

ಇದೇ ಸಿದ್ದರಾಮಯ್ಯ ಶಿಕಾರಿಪುರದಲ್ಲಿ ಹಾಲುಮತ ಸಮಾಜದ ವೀಕ್ ಕ್ಯಾಂಡಿಡೇಟ್ ಹಾಕಿ ವಿಜಯೇಂದ್ರ ಗೆಲ್ಲಸಿಲು ಸಹಾಯ ಮಾಡಿದರು(This same Siddaramaiah helped Vijayendra win the week candidate of Halumata Samaj in Shikaripura.). ವರುಣಾದಲ್ಲಿ ಸೋಮಣ್ಣ(Somanna In Varuna) ಅವರನ್ನು ಯಡಿಯೂರಪ್ಪ ಗ್ಯಾಂಗ್ನವರು ಸೋಲಿಸಿದರು ಎಂದಿದ್ದಾರೆ ಯತ್ನಾಳ್. ವಿಜಯೇಂದ್ರನ ಹಾಗೆ ನಾನು ಸಿಡಿಗಳನ್ನು ಇಟ್ಟುಕೊಂಡಿಲ್ಲ. ವಿಜಯೇಂದ್ರನ ಶಿಷ್ಯರು ಸಿಡಿ ಕಂಪನಿಯವರಿದ್ದಾರೆ. ವಿಜಯೇಂದ್ರನ ಡೈರೆಕ್ಷನ್ ಮೇಲೆ ಹಾಸನದಲ್ಲಿ ಪೆನ್ ಡ್ರೈವ್ ಹಂಚಿದ್ದು. ನಾನು ಈಗ ಗಟ್ಟಿಯಾಗಿದ್ದೇವೆ, ಉಚ್ಚಾಟನೆ ಮಾಡಿದರೂ ಸಿದ್ದರಿದ್ದೇವೆ. ಯಡಿಯೂರಪ್ಪ ಕುಟುಂಬವೇ ಹೈಕಮಾಂಡ್, ನಿಮಗೆ ಬೇಕಾದರೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಲಿ ಎಂದು ಸವಾಲು ಎಸೆದಿದ್ದಾರೆ.

ಕೃಷ್ಣಮಣಿ





