ಇಂದು ವಿಶ್ವ ಅಪ್ಪಂದಿರ ದಿನದ (Fathers day) ವಿಶೇಷವಾಗಿ ಬಿಜೆಪಿ ಕಡೆಯಿಂದ ಸ್ಪೆಶಲ್ ಹಾಡು ಬಿಡುಗಡೆ ಮಾಡಲಾಗಿದೆ. ‘ನಿಜ ನಾಯಕ ಅಪ್ಪ’ ಎಂಬ ಸಾಂಗ್ ರಿಲೀಸ್ ಆಗಿದೆ.ಈ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ (R ashok), ಗೊಲ್ಡನ್ ಸ್ಟಾರ್ ಗಣೇಶ್ (actor ganesh) ಹಾಗೂ ಪ್ರಜ್ವಲ್ ದೇವರಾಜ್ (Prajwal devraj) ಸೇರಿದಂತೆ ಜಗ್ಗೇಶ್ ಕೂಡ ಭಾಗಿಯಾಗಿದ್ದರು.
ಜಯನಗರದ ಜೆಎಸ್ ಎಸ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ನಡೆದಿದೆ. ಸಿನಿಮಾ ಸಾಹಿತಿ ನಾಗೇಂದ್ರ ಪ್ರಸಾದ್ ರಚಿಸಿ, ರಾಜೇಶ್ ಕೃಷ್ಣನ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ರನ್ನ (Puneeth raj kumar) ನೆನಪಿಸಿಕೊಂದಿದ್ದಾರೆ.
ಆ ಭಗವಂತ ಅನ್ನೋನು ಚಿಟಕಿ ಹೊಡೆದಾಗ, ಎಲ್ಲಾ ಬಿಟ್ಟು ಹೋಗ್ತಿರಬೇಕು.ಪುನೀತ ನನಗೆ ತುಂಬಾ ನೆನಪಾಗ್ತಾನೆ.60 ಕೋಟಿ ಬ್ಯುಸಿನೆಸ್ ಮಾಡ್ತಿದ್ದೀನಿ ಅಂತ ಹೇಳಿದ್ದ.ಅದಕ್ಕೆ ನಾನು ನಿಮ್ಮ ತಂದೆ ಎಷ್ಟು ಖುಷಿ ಪಡ್ತಿದ್ರಪ್ಪ ಅಂತ ಹೇಳಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಆ ನಂತರ ಪುನೀತ್ ಕಾಲ್ ಮಾಡಿದ್ದ..ಅಣ್ಣಾ ಮಲ್ಲೇಶ್ವರಕ್ಕೆ ಬಂದಿದ್ದೀನಿ ಅಂತಕಾಲ್ ಮಾಡಿದ್ದ. ನಾನು ಯಾಕೆ..ಏನಾಯಿತು ಅಂದಿದ್ದಕ್ಕೆ ಹೋಮ ಮಾಡ್ತಿದ್ದೆ, ನೋವು ಬಂತು ಅಂತ ಹೇಳಿದ್ದ..ಆ ಮಾರನೆ ದಿನ ಪುನಿತ್ ಈ ಲೋಕದಲ್ಲಿ ಇರಲಿಲ್ಲ ಎಂದು ಭಾವುರಾಗಿದ್ದಾರೆ.