• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಿಜೆಪಿಯ ದ್ವೇಷ ರಾಜಕಾರಣ : ಅಝಾನ್‌ ನಿಂದ ಹಿಡಿದು ಭಗವದ್ಗೀತೆ ವರೆಗೆ!

ಪ್ರತಿಧ್ವನಿ by ಪ್ರತಿಧ್ವನಿ
March 22, 2022
in ಕರ್ನಾಟಕ, ರಾಜಕೀಯ
0
ಬಿಜೆಪಿಯ ದ್ವೇಷ ರಾಜಕಾರಣ : ಅಝಾನ್‌ ನಿಂದ ಹಿಡಿದು ಭಗವದ್ಗೀತೆ ವರೆಗೆ!
Share on WhatsAppShare on FacebookShare on Telegram

ಬಿಜೆಪಿ ತನ್ನ ಹಿಡನ್‌ ಅಜೆಂಡಾವನ್ನು ಇದೀಗ ಓಪನ್‌ ಆಗಿ ಕಾರ್ಯಗತ ಮಾಡುವ ಕೆಲಸದಲ್ಲಿದೆ. ಬಸವರಾಜ ಬೊಮ್ಮಾಯಿ ಓರ್ವ ಅನೌಪಚಾರಿಕ ಮುಖ್ಯಮಂತ್ರಿ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅದರದ್ದೇ ಆದ ಗೌರವ, ಘನತೆಯಿದೆ. ಅದೆಲ್ಲವನ್ನೂ ಮರೆತಂತಿರುವ ಬಸವರಾಜ ಬೊಮ್ಮಾಯಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಮನುಸ್ಮೃತಿ ಜಾರಿಯಾಗಲಿರುವ ಎಲ್ಲಾ ದಾರಿಯನ್ನು ಸುಗಮಗೊಳಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನೆಲೆಯಿಲ್ಲದ ಬಿಜೆಪಿಗೆ ಕರ್ನಾಟಕ ಒಂದು ವೇದಿಕೆಯಾಗಿ ಧಕ್ಕಿದೆ. ಇಲ್ಲಿ ಪ್ರತಿಪಕ್ಷಗಳು ಕೂಡ ನಿಸ್ಸಹಾಯಕರಾಗಿ ಕೂರುವ ಸ್ಥಿತಿ ನಿರ್ಮಾಣವಾಗಿದೆ. ಇದು ಬಿಜೆಪಿಯ ಹಿಡನ್‌ ಅಜೆಂಡಾಗಳನ್ನು ಒಂದೊಂದೇ ಆಗಿ ಜಾರಿ ಮಾಡಲು ಅನುವುಮಾಡಿಕೊಡುತ್ತಿದೆ.

ADVERTISEMENT

ನ್ಯೂಟ್ರಲ್‌ ಆಗಿರುವ ಮೃದು ಹಿಂದುತ್ವ ವಾದಿಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮೊದಲು ಒಗ್ಗೂಡಿಸುವ ಕೆಲಸ ಮಾಡಿದರು. ಆಗಾಗ್ಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪರ ಒಲವು ತೋರುತ್ತಿದ್ದ ಮೃದು ಹಿಂದುತ್ವವಾದಿಗಳು ಬಿಜೆಪಿಯ ಹಿಂದುತ್ವದ ಅಜೆಂಡಾಗೆ ಕ್ರಮೇಣ ಒಳಗಾಗುತ್ತಾ ಬಂದರು. ಅದಕ್ಕೆ ಬೇಕಾದ ವಿವಾದಗಳನ್ನು ಬಿಜೆಪಿಗರೇ ಸೃಷ್ಟಿಸುತ್ತಾ ಬಂದರು. ಇದೊಂದು ಟ್ರ್ಯಾಪ್‌ ಎಂದು ಗೊತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿತ್ತು ಪರಿಸ್ಥಿತಿ.

ಅಝಾನ್‌ ನಿಷೇಧಕ್ಕೆ ಹಿಂದುತ್ವವಾದಿಗಳ ಪಟ್ಟು!

ಆರಂಭದಲ್ಲೇ ವಾಯುಮಾಲಿನ್ಯ ಹಾಗೂ ಕಿರಿಕಿರಿ ನೆಪವೊಡ್ಡಿ ಮುಸ್ಲಿಮರ ಅಝಾನ್‌ ನಿಷೇಧಿಸುವಂತೆ ಪಟ್ಟು ಹಿಡಿಯಲಾಯ್ತು. ಎಷ್ಟರ ಮಟ್ಟಿಗೆ ಅಝಾನ್‌ ಒಂದು ವಿವಾದವಾಯಿತು ಎಂದರೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳೆಲ್ಲಾ ಅಝಾನ್‌ ವಿರುದ್ಧ ದ್ವೇಷಕಾರುವಂತೆ ಮಾಡಿತು. ಇದನ್ನೂ ಕಟುವಾಗಿ ವಿರೋಧಿಸಿ ಮುಸ್ಲಿಮರಿಗೆ ನ್ಯಾಯಕೊಡಿಸಬೇಕಿದ್ದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೂಡ ಏನೂ ಮಾಡದೆ ಮೌನದ ಮೊರೆ ಹೋಯಿತು.

Also read : ಅಂದು ಕಾಪು ಮಾರಿಗುಡಿಯಲ್ಲಿ ಮುಸ್ಲೀಮರು ಇಲ್ಲದಿರುತ್ತಿದ್ದರೆ? ಅಂದು ಆತ ಜಾತಿಗಳನ್ನು ಒಟ್ಟುಗೂಡಿಸದಿದ್ದರೆ?

ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ!

ಮುಂದುವರೆದ ಭಾಗವಾಗಿ ಕರಾವಳಿ ಕರ್ನಾಟಕದ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವದಲ್ಲಿನ ವ್ಯಾಪಾರ ವಹಿವಾಟಿಗೆ ಮುಸ್ಲಿಮರಿಗೆ ಅವಕಾಶವಿಲ್ಲ ಎಂಬ ಬ್ಯಾನರ್‌ಗಳನ್ನು ನೇತು ಹಾಕಿ ವ್ಯವಸ್ಥಿತವಾಗಿ ದ್ವೇಷ ಹರಡಿತು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ. ಆರಂಭದಲ್ಲಿ ಹಿಂದುತ್ವವಾದಿಗಳ ಈ ನಡೆಗೆ ಹಿಂದೂಗಳ ನಡುವೆಯೇ ವಿರೋಧ ವ್ಯಕ್ತವಾಗಿದ್ದರೂ, ದೇಶದ್ರೋಹಿಗಳನ್ನು ಬೆಂಬಲಿಸುವ ನೀವು ದೇಶದ್ರೋಹಿಗಳು ಎನ್ನುತ್ತಲೇ ಅಸಲಿ ಹಿಂದೂಗಳ ಬಾಯಿ ಮುಚ್ಚಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿ ಹೋರಾಡಿದ ಮುಸ್ಲಿಮರನ್ನು ಪರಕೀಯರೆಂದು ಬಿಂಬಿಸುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಬಿಜೆಪಿ ಬಂದಿತು.

ಶಾಲೆ, ಕಾಲೇಜುಗಳಲ್ಲಿ ಹಿಜಾಬ್‌ ವಿವಾದ!

ಇತ್ತೀಚೆಗೆಷ್ಟೇ ವಿವಾದದ ಕಿಡಿ ಹೊತ್ತಿಸಿದ್ದ ಹಿಜಾಬ್‌ ನೊಂದಿಗೆ ಬಿಜೆಪಿ ಅಂದುಕೊಂಡಂತೆ ಮುಸ್ಲಿಮರ ಮೇಲಿನ ದ್ವೇಷದ ವಿಸ್ತಾರವನ್ನು ಮತ್ತಷ್ಟು ಬಲಗೊಳಿಸಿದರು. ಶಾಲೆ ಕಾಲೇಜುಗಳಲ್ಲಿ ಯಾಕೆ ಬೇಕು ಹಿಜಾಬ್..?‌ ಹಿಜಾಬ್‌ ಮುಖ್ಯವೋ, ಶಿಕ್ಷಣ ಮುಖ್ಯವೋ..? ಎಂಬ ಅಸಂಬಂಧ ಪ್ರಶ್ನೆಗಳನ್ನು ಹರಡುವಲ್ಲಿಯೂ ಯಶಸ್ವಿಯಾದರು. ಅಸಲಿಗೆ ಹಿಜಾಬ್‌ ಒಂದು ವಿವಾದವೇ ಅಲ್ಲ ಎಂಬುವುದು ಇಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಮೃದು ಹಿಂದುತ್ವ ಧೋರಣೆ ಇಟ್ಟುಕೊಂಡಿದ್ದ ಜನರು ಕೂಡ ಕಠೋರವಾಗಿ ಮುಸ್ಲಿಮರ ಮೇಲೆ ಎಗರಿಬಿದ್ದು ತಮ್ಮ ಅಸಲಿ ಮುಖ ತೋರಿದರು.

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ!

ಇತ್ತೀಚಿನ ದಿನಗಳವರೆಗೆ ಇಷ್ಟೆಲ್ಲಾ ದೊಂಬಿ ಎಬ್ಬಿಸಿದ ಬಿಜೆಪಿ ಇದೀಗ ತಮ್ಮ ಮೂಲ ಅಜೆಂಡವನ್ನು ಮಕ್ಕಳ ತಲೆಗೂ ತುಂಬಲು ಮುಂದೆ ಬಂದಿದೆ. ಗುಜರಾತ್‌ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ ಪರಿಣಾಮ ರಾಜ್ಯದಲ್ಲೂ ಅಂಥದ್ದೊಂದು ಚರ್ಚೆ ತೇಲಿ ಬಿಟ್ಟು ಹಿಂದುತ್ವ ಜಾರಿಯೆಡೆಗೆ ಮುಂದಡಿ ಇಟ್ಟಿದೆ. ಹಿಜಾಬ್‌ ಒಂದು ಧಾರ್ಮಿಕ ಸಂಕೇತವಾಗಿಯೂ.. ಭಗವದ್ಗೀತೆ ನೈತಿಕ ಶಿಕ್ಷಣವಾಗಿಯೂ ಕಂಡಿದ್ದು ಮುಸ್ಲಿಮರ ಮೇಲಿನ ಹಗೆತನ ಸಾಧಿಸುವಿಕೆ ಮುಂದುವರೆಸಿದೆ.

ಇದೊಂದು ವಿಚಾರ ನಿಮ್ಮ ಗಮನಕ್ಕೆ ಇರಲಿ ಎಂದು ಹೇಳುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತೋ..? ಇಲ್ಲವೋ..? ಎಂಬ ಸ್ಪಷ್ಟತೆಯೇ ಇರಲಿಲ್ಲ. ಅದಕ್ಕೂ ಮೊದಲೇ ಅಂದರೆ 1925ರಲ್ಲೇ ಆರ್‌ಎಸ್‌ಎಸ್‌ ಸ್ಥಾಪನೆಗೊಂಡು ಹಿಂದೂ ರಾಷ್ಟ್ರ ನಿರ್ಮಾಣವೇ ಅಂತಿಮ ಗುರಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಅಲ್ಲಿಗೆ ಈ ಸಂಘದ ಅಜೆಂಡಾವೇನು ಎಂಬುವುದು ವಿವೇಚನೆ ಉಳ್ಳವರಿಗೆ ಅರ್ಥವಾಗಿರಬಹುದು. ಸದಾ ದೇಶ, ದೇಶಭಕ್ತಿಯ ಪಾಠ ಮಾಡುವ ಇವರಿಗೆ ಸ್ವಾತಂತ್ರ್ಯಕ್ಕೆ ಹೋರಾಡಿದ ಇತಿಹಾಸವಿಲ್ಲ.  ಅಂದು ಇಂದೂ ದೇಶವನ್ನು ಕಾಪಿಟ್ಟುಕೊಳ್ಳುವುದು ಇಲ್ಲಿನ ದಲಿತರು ಹಾಗೂ ಅಲ್ಪಸಂಖ್ಯಾತರು. ಇಂಡಿಯಾ ಗೇಟ್‌ ಎನ್ನುವ ದೇಶದ ಸ್ಮಾರಕವೊಂದರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಹೆಸರು ಕೆತ್ತಿಡಲಾಗಿದೆ. ಅದನು ಯಾವ ದಿಕ್ಕಿನಿಂದ ಎಣಿಸಿದರೂ ಅಲ್ಲಿ ಮುಸ್ಲಿಮರದ್ದೇ ಸಂಖ್ಯಾ ಬಲ ಹೆಚ್ಚು.

Also Read : ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ಚಿಂತನೆ!

ಬಿಜೆಪಿಯ ಇಂಥಾ ನೀಚ ಹಾಗೂ ಅಸಹ್ಯ ರಾಜಕಾರಣಕ್ಕೆ ಬಸವಣ್ಣ ನಡೆದಾಡಿದ ಮಣ್ಣು ಸಾಕ್ಷಿಯಾಗುತ್ತಿದೆಯಲ್ಲವೇ ಎಂಬುವುದೇ ವಿಷಾಧ. ವಿಶ್ವಮಾನವರಾಗಿ ಎಂದ ಕುವೆಂಪು, ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಎಂದ ನಿಸಾರ್‌ ಅಹಮ್ಮದ್‌ ಹುಟ್ಟಿದ ನೆಲದಲ್ಲಿ ಇವರ ಹೇಟ್‌ ಪ್ರೊಪಗಾಂಡ ಜಾರಿಯಾಗುತ್ತಿದೆ ಎಂಬುವುದೇ ನೋವು. ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ ಎಂದ ಲಂಕೇಶ್‌ ರಂಥಾ ವೈಚಾರಿಕತೆಗಳು ಹುಟ್ಟಿದ ಕರುನಾಡು ಇವರ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿ ನಿಂತಿದೆ ಎಂದರೆ ಮುಂದೆ ದೊಡ್ಡದಾದ ಸಂಗ್ರಾಮಕ್ಕೆ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ.

Tags: BJPCongress PartyCovid 19ಅಝಾನ್‌ಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಭಗವದ್ಗೀತೆಸಿದ್ದರಾಮಯ್ಯ
Previous Post

ಬೆಲೆ ಏರಿಕೆ ಶಾಕ್ : LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

Next Post

ಮುಖೇಶ್ ಅಂಬಾನಿ ಬಿಟ್ಟ ಅರಾಮ್ಕೊ ವ್ಯವಹಾರಕ್ಕೆ ಕೈ ಹಾಕುತ್ತಿರುವ ಗೌತಮ್ ಅದಾನಿ! 

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

ಅಪ್ಪಂದಿರು ಅಧಿಕಾರದಿಂದ ಇಳಿದರೆ ಆ ಪುತ್ರರ ಸ್ಥಿತಿ ತುಂಬಾ ಬದಲಾಗಲಿದೆ- ಲೆಹರ್ ಸಿಂಗ್

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025
Next Post
ಮುಖೇಶ್ ಅಂಬಾನಿ ಬಿಟ್ಟ ಅರಾಮ್ಕೊ ವ್ಯವಹಾರಕ್ಕೆ ಕೈ ಹಾಕುತ್ತಿರುವ ಗೌತಮ್ ಅದಾನಿ! 

ಮುಖೇಶ್ ಅಂಬಾನಿ ಬಿಟ್ಟ ಅರಾಮ್ಕೊ ವ್ಯವಹಾರಕ್ಕೆ ಕೈ ಹಾಕುತ್ತಿರುವ ಗೌತಮ್ ಅದಾನಿ! 

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada