ಬೆಂಗಳೂರು : ಈ ಬಾರಿಯ ಟಿಕೆಟ್ ಹಂಚಿಕೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದ ಬಿಜೆಪಿ ವರಿಷ್ಠರು ಅನೇಕರಿಗೆ ಅವರ ಸ್ವಕ್ಷೇತ್ರ ತಪ್ಪುವಂತೆ ಮಾಡಿದ್ದರು. ಅದೇ ರೀತಿ ಗೋವಿಂದರಾಜನಗರ ಕ್ಷೇತ್ರದ ಶಾಸಕ ವಿ. ಸೋಮಣ್ಣಗೆ ಈ ಬಾರಿ ವರುಣ ಹಾಗೂ ಚಾಮರಾಜನಗರದಿಂದ ಟಿಕೆಟ್ ನೀಡಲಾಗಿತ್ತು. ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಉಮೇಶ್ ಶೆಟ್ಟಿ ಪಾಲಾಗಿರೋದು ಹಳೆಯ ವಿಚಾರ. ಆದರೆ ವಿ. ಸೋಮಣ್ಣಗೆ ಈ ಬಾರಿ ಗೋವಿಂದರಾಜನಗರ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಗೋವಿಂದ ರಾಜನಗರದಲ್ಲಿ ಒಬ್ಬೊಬ್ಬರಾಗಿಯೇ ಬಿಜೆಪಿ ತೊರೆಯುತ್ತಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ.
ಉಮೇಶ್ ಶೆಟ್ಟಿಯ ಮಲತಾಯಿ ಧೋರಣೆ ಹಾಗೂ ಕಾಂಗ್ರೆಸ್ ಏಜೆಂಟ್ ನಂತಿರುವ ಆತನ ವರ್ತನೆಯಿಂದ ಬೇಸತ್ತ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ತೊರೆಯುತ್ತಿದ್ದಾರೆ. ಈ ಸಂಬಂಧ ವರಿಷ್ಠರು ಗಮನ ಹರಿಸಬೇಕು.@Tejasvi_Surya @nalinkateel @annamalai_k @VSOMANNA_BJP
— Mukta (@Mukta38708873) April 26, 2023
ವಿ.ಸೋಮಣ್ಣ ಜೊತೆಯಲ್ಲಿ ಕಳೆದ 45 ವರ್ಷಗಳಿಂದಲೂ ಅಧಿಕ ಸಮಯದಿಂದ ಒಡನಾಟ ಹೊಂದಿದ್ದ ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಈಗ ಬಿಜೆಪಿ ತೊರೆಯುತ್ತಿದ್ದಾರಂತೆ. ಹಾಲಿ ಅಭ್ಯರ್ಥಿ ಉದಯ ಶೆಟ್ಟಿ ವಿರುದ್ಧ ಅಸಮಾಧಾನ ಹೊಂದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಉಮೇಶ್ ಶೆಟ್ಟಿಯ ಮಲತಾಯಿ ಧೋರಣೆ ಹಾಗೂ ಕಾಂಗ್ರೆಸ್ ಏಜೆಂಟ್ ನಂತಿರುವ ಆತನ ವರ್ತನೆಯಿಂದ ಬೇಸತ್ತ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೆಂಬಲಿಗರು ಬಿಜೆಪಿ ತೊರೆಯುತ್ತಿದ್ದಾರೆ. ಈ ಸಂಬಂಧ ವರಿಷ್ಠರು ಗಮನ ಹರಿಸಬೇಕು.@Tejasvi_Surya @nalinkateel @annamalai_k @VSOMANNA_BJP
— Mukta (@Mukta38708873) April 26, 2023
ಉಮೇಶ್ ಶೆಟ್ಟಿ ಬಿಜೆಪಿ ಕಾರ್ಯಕರ್ತರು ಹಾಗೂ ಸೋಮಣ್ಣ ಬೆಂಬಲಿಗರನ್ನು ಕಡೆಗಣಿಸುತ್ತಿದ್ದಾರೆ. ಬೇರೆ ಊರುಗಳಿಂದ ಜನರನ್ನು ಕರೆಸಿ ಪ್ರಚಾರ ಮಾಡಿಸುತ್ತಿದ್ದಾರೆ. ನಮಗೆ ಪಕ್ಷದ ಪರ ಪ್ರಚಾರ ಮಾಡಲು ಯಾವುದೇ ಸಲಕರಣೆ ವಿತರಿಸಿಲ್ಲ. ಉಮೇಶ್ ಶೆಟ್ಟಿ ನಡೆ ನೋಡಿದರೆ ಅವರು ಕಾಂಗ್ರೆಸ್ ಪರ ಒಳ ಒಪ್ಪಂದ ಮಾಡಿಕೊಂಡಂತೆ ಕಾಣುತ್ತಿದೆ ಎಂಬ ಆರೋಪದ ಮಾತುಗಳು ಕೇಳಿ ಬರ್ತಿದೆ.
ಕಾಂಗ್ರೆಸ್ನತ್ತ ಮುಖ ಮಾಡ್ತಿದ್ದಾರೆ ಬಿಜೆಪಿ ಕಾರ್ಯಕರ್ತರು :
ಉಮೇಶ್ ಶೆಟ್ಟಿ ಮಲತಾಯಿ ಧೋರಣೆ ಮಾಡ್ತಾರೆ , ಕಾಂಗ್ರೆಸ್ ಏಜೆಂಟನಂತೆ ವರ್ತಿಸುತ್ತಾರೆ ಅನ್ನೋದು ಗೋವಿಂದರಾಜನಗರ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಹೀಗಾಗಿ ಸ್ವಪಕ್ಷದ ಅಭ್ಯರ್ಥಿಯ ಬಗ್ಗೆಯೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಜೆಪಿ ವರಿಷ್ಠರು ಕೂಡಲೇ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಈ ಬಾರಿಯ ಚುನಾವಣೆಯಲ್ಲಿ ಗೋವಿಂದರಾಜನಗರ ಕ್ಷೇತ್ರ ಬಿಜೆಪಿ ಕೈ ತಪ್ಪಬಹುದು ಎನ್ನುವುದು ರಾಜಕೀಯ ತಜ್ಞರ ಲೆಕ್ಕಾಚಾರವಾಗಿದೆ .