ದೆಹಲಿ: ಮುಂಬರುವ ವಿಧಾನಸಭಾ ಚುನಾವಣೆ ತಯಾರಿ ಸೇರಿದಂತೆ ಹಲವು ವಿಷಯಗಳ ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ವಿಚಾರ ಚರ್ಚೆ ನಡೆದಿದೆ. ಜನವರಿಯಿಂದ ರಾಜ್ಯದಲ್ಲಿ ನಾಯಕರ ಪ್ರಚಾರ ಆರಂಭವಾಗಲಿದ್ದು, ವರಿಷ್ಟರು ರಾಜ್ಯಕ್ಕೆ ಬರುವ ಬಗ್ಗೆ ಚರ್ಚೆ ನಡೆದಿದೆ.
ಅಲ್ಲದೇ ಮೀಸಲಾತಿ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಯಾರ್ಯಾರಿಗೆ ನ್ಯಾಯಕೊಡಲು ಸಾಧ್ಯ ಕೊಡಿ ಎಂದಿದ್ದಾರೆ. ನಾನು ಸಹ ವಿವರಗಳನ್ನು ಕೊಟ್ಟಿದ್ದೇನೆ ಮತ್ತು ಮೀಸಲಾತಿ ನೀಡುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಆದರೆ ಮೀಸಲಾತಿ ಬಗ್ಗೆ ಸರಕಾರ ನಿಲುವು ಪ್ರಕಟ ಮಾಡಿಲ್ಲ ಎಂದರು.
ಇದಲ್ಲದೇ ಕೆಲವರು ಪಕ್ಷಕ್ಕೆ ಬರುವಂತರು ಇದ್ದಾರೆ ಅದರ ಬಗ್ಗೆಯೂ ಚರ್ಚೆ ನಡೆದಿದೆ. ಸಂಘಟನೆ ಬಗ್ಗೆ ಚರ್ಚೆ ನಡೆದಿದೆ ಫಲಪ್ರದವಾಗಿದ್ದು, ಡಿ.30ಕ್ಕೆ ಅಮಿತ್ ಶಾ ಅವರು ರಾಜ್ಯಕ್ಕೆ ಬರುತ್ತಾರೆ ಎಂದು ತಿಳಿಸಿದರು.