ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಬಂಧನವಾಗಿದೆ. ಅಹಮದಾಬಾದ್ನಿಂದ ವಿಮಾನದಲ್ಲಿ ಆಗಮಿಸಿದ ಶಾಸಕನನ್ನು ಸಿಐಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ5 ಆರೋಪಿಯಾಗಿರುವ ಬಿಜೆಪಿ ಶಾಸಕನಿಗೆ ಹೈಕೋರ್ಟ್ನಲ್ಲಿ ಜಾಮೀನು ಸಿಕ್ಕಿರಲಿಲ್ಲ. ಆದರೂ ಅಜ್ಞಾತ ಸ್ಥಳದಿಂದಲೇ ಸುಪ್ರೀಂಕೋರ್ಟ್ಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಭೈರತಿಗೆ ಅಲ್ಲಿಯೂ ತೀವ್ರ ಹಿನ್ನಡೆಯಾಗಿತ್ತು.
ಇದನ್ನೂ ಓದಿ : ಈ 2 ವಂದೇ ಭಾರತ್ ರೈಲುಗಳು ಸ್ಥಗಿತಗೊಳ್ಳಲಿವೆ
ಏನಿದು ಕೊಲೆ ಕೇಸ್..?
5ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬಿಕ್ಲು ಶಿವ ಮರ್ಡರ್ ಕೇಸ್ನಲ್ಲಿ ಪ್ರಮುಖರಾಗಿದ್ದಾರೆ. ಎರಡು ಗುಂಪುಗಳ ಘರ್ಷಣೆ ಹಾಗೂ ಹೊಡೆದಾಟದ ಸಂದರ್ಭದಲ್ಲಿ ಭೈರತಿ ಸ್ಥಳದಲ್ಲಿದ್ದರು, ಈ ವೇಳೆ ಕೊಲೆಯಾಗಿರುವ ಬಿಕ್ಲು ಶಿವನ ತಾಯಿಗೆ ಬೆದರಿಕೆ ಹಾಕಿ ಗನ್ ತೋರಿಸಲಾಗಿದೆ. ಅಲ್ಲಿನ ಆರೋಪಿತ ವ್ಯಕ್ತಿಯ ಜೊತೆಗೆ ಭೈರತಿ ಬಸವರಾಜ್ ಸಂಪರ್ಕ ಇಟ್ಟುಕೊಂಡಿದ್ದರು ಎಂಬ ಆರೋಪ ಇವರ ಮೇಲಿದೆ.
ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದ ಆರೋಪಿಗಳು ಶ್ರೀಲಂಕಾಗೆ ಎಕೇಪ್ ಆಗಿದ್ದರು. ಇನ್ನೂ ಈ ಘಟನೆಯ ಬಳಿಕ ಭೈರತಿಗೆ ಆರಂಭಿಕ ದಿನಗಳಲ್ಲಿ ಬಂಧನದ ಭೀತಿಯು ಜೋರಾಗಿತ್ತು. ಇದನ್ನು ಅರಿತ ಬಿಜೆಪಿ ಶಾಸಕ ತಲೆಮರೆಸಿಕೊಂಡಿದ್ದರು. ಇದಾದ ಬಳಿಕ ನ್ಯಾಯಾಲಯದಲ್ಲೂ ಭೈರತಿಗೆ ಸಾಕಷ್ಟು ಮುಖಭಂಗವಾಗಿತ್ತು. ಜಾಮೀನು ಅರ್ಜಿಗಳ ವಿಚಾರಣೆ ವೇಳೆ ಖುದ್ದು ಹಾಜರಾಗಿರಲಿಲ್ಲ. ಇದರಿಂದ ನ್ಯಾಯಾಲಯ ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿತ್ತು.
ಅಲ್ಲದೆ ಇದೇ ವಿಚಾರಕ್ಕೆ ಗೃಹ ಸಚಿವ ಬಿಜೆಪಿ ಶಾಸಕ ಭೈರತಿ ಬಸವರಾಜ್ಗೆ ತಾವಾಗಿಯೇ ಶರಣಾಗುವಂತೆ ವಾರ್ನಿಂಗ್ ಕೂಡ ನೀಡಿದ್ದರು. ಪರಮೇಶ್ವರ್ ಎಚ್ಚರಿಕೆಯ ಬೆನ್ನಲ್ಲೇ ಖಾಕಿಗೆ ಭೈರತಿ ಶರಣಾಗಿದ್ದಾರೆ. ಪೊಲೀಸರು ಅವರನ್ನು ಸಿಐಡಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ, ನ್ಯಾಯಾಧೀಶರೆದುರು ಹಾಜರು ಪಡಿಸುವುದು ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳು ಇನ್ನಷ್ಟೇ ನಡೆಯಲಿವೆ.






