ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡವನ್ನ ಉಳಿಸಿಕೊಳ್ಳಲು ಮೋದಿಯ ಅನಿವಾರ್ಯ ಇದೆ ಅಂತ ಬಿಜೆಪಿಗೆ ಅರಿವಾಗಿರೋ ಹಾಗಿದೆ. ದಕ್ಷಿಣ ಕನ್ನಡ 3 ದಶಕಗಳಿಂದ ಈ ಕ್ಷೇತ್ರ ಕೇಸರಿ ಪಾಳಯದ(BJP) ಭದ್ರ ಕೊಟಿ. ಈ ಬಾರಿಯೂ ಬಿಜೆಪಿ ಭಾರೀ ಅಂತರದಿಂದ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಇಷ್ಟು ವರ್ಷಗಳ ಕಾಲ ಆರಾಮಾಗಿ ಗೆಲ್ಲುತ್ತಿದ್ದ ಬಿಜೆಪಿಗೆ ಈ ಬಾರಿ ಕಾಂಗ್ರೆಸ್ನಿಂದ(ongress) ಪ್ರಬಲ ಪೈಪೋಟಿ ಸಿಗುವ ಮುನ್ಸೂಚನೆ ದೊರೆತಿದೆ. ಇದಕ್ಕೆ ಕಾರಣ ಕಾಂಗ್ರೆಸ್ ಈ ಬಾರಿ ಬಿಲ್ಲವ ಅಸ್ತ ಪ್ರಯೋಗಿಸಿದೆ. ಈ ಹಿನ್ನೆಲೆ ಬಿಜೆಪಿ ಅಲರ್ಟ್ ಆಗಿದ್ದು ಮೋದಿ (modi) ಅಸ್ತರಕ್ಕೆ ಮುಂದಾಗಿದೆ.
ರಾಜ್ಯದೆಲ್ಲೆಡೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ (pm modi) ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಎಪ್ರಿಲ್ 14 ರಂದು (April 14th) ಮೋದಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಕೊನೇ ಗಳಿಗೆಯಲ್ಲಿ ಮೋದಿ ಕರಾವಳಿಗೆ ಎಂಟ್ರಿ ಕೊಡ್ತಿದ್ದಾರೆ. ಮಂಗಳೂರಿನಲ್ಲಿ (mangalore) ಆಯೋಜನೆಗೊಂಡಿದ್ದ ಬೃಹತ್ ಸಮಾವೇಶ ರದ್ದಾಗಿ ರೋಡ್ ಶೋ (Road show) ಕಾರ್ಯಕ್ರಮ ಫೈನಲ್ ಆಗಿದೆ.
ಮೊದಲಿಗೆ ಸಾರ್ವಜನಿಕ ಸಭೆ ಅಂತ ಹೇಳಿದ್ದ ಪ್ರಧಾನಿ ಕಚೇರಿ ಇದೀಗ ರೋಡ್ ಶೋ (Road show) ಎಂದು ತಿಳಿಸಿದೆ. ಪ್ರಧಾನಿ ಮೋದಿ ಎಪ್ರಿಲ್ 14 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದ್ರೆ ಸಡನ್ ಕಾರ್ಯಕ್ರಮ ಬದಲಾಗಿದ್ದು ಮೋದಿ ರೋಡ್ ಶೋ ಮಾತ್ರ ಸಿಮಿತವಾಗಿದೆ. ಸುಮಾರು ಎರಡೂವರೆ ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅಭಿಮಾನಿಗಳನ್ನ ಸೇರಿಸಲು ಬಿಜೆಪಿ ತಯಾರಿ ನಡೆಸಿದೆ.