ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ರಾಜ್ಯ ಪೊಲೀಸ್ ಮೀಸಲು ಪಡೆಯ ಐಜಿಪಿ ಸಂದೀಪ್ ಪಾಟೀಲ್ ಅವರಿಗೆ ವಿಚಾರಣೆ ಬರುವಂತೆ ನೀಡಲಾಗಿದ್ದ ನೊಟೀಸ್ ಗೆ ಇಂದು ಹಾಜರಾಗಿ ವಿಚಾರಣೆ ಎದುರಿಸಿದರು.
ಕಳೆದ ಫೆಬ್ರುವರಿಯಲ್ಲಿಯೂ ಸಂದೀಪ್ ಪಾಟೀಲ್ ಅವರು ಎಸ್ಐಟಿ ಮುಂದೆ ಹಾಜರಾಗಿದ್ದರು. ಇದೀಗ ಮತ್ತೆ ವಿಚಾರಣೆಗೆ ಬರುವಂತೆ ನಿನ್ನೆ ನೀಡಲಾಗಿದ್ದ ನೊಟೀಸ್ ಸಂಬಂಧ ಎಸ್ಐಟಿ ಮುಖ್ಯಸ್ಥ ಮನೀಶ್ ಕರ್ಬೀಕರ್ ಮುಂದೆ ಹಾಜರಾದರು. ಕೆ.ಜಿ.ನಗರ,ಅಶೋನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳ ಪೈಕಿ ಎರಡು ಕೇಸ್ ಗಳಲ್ಲಿ ಕಳೆದ ಫೆಬ್ರುವರಿಯಲ್ಲಿ ಸಂದೀಪ್ ಪಾಟೀಲ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್ಐಟಿ, ಇಂದು ಮತ್ತೆರಡು ಪ್ರಕರಣಗಳ ಕುರಿತಂತೆ ಹೇಳಿಕೆಯನ್ನ ದಾಖಲಿಸಿಕೊಂಡಿದೆ.
ಬಿಟ್ ಕಾಯಿನ್ ಹಗರಣ ತನಿಖೆ ನಡೆಸುತ್ತಿರುವ ಎಸ್ಐಟಿ ಇದುವರೆಗೂ ಐವರನ್ನ ಬಂಧಿಸಿದೆ. ಪ್ರಕರಣದ ಸೂತ್ರಧಾರಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ, ಮೂವರು ಇನ್ ಸ್ಪೆಕ್ಟರ್ ಹಾಗೂ ಖಾಸಗಿ ಸೈಬರ್ ಲ್ಯಾಬ್ ಮಾಲೀಕ ಸೇರಿದಂತೆ ಐವರನ್ನ ಬಂಧಿಸಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ನಲ್ಲಿ ಈಗಿನ ಡಿವೈಎಸ್ಪಿ ಶ್ರೀಧರ್ ಪೂಜಾರ್ ನನ್ನ ಇನ್ನಷ್ಟೇ ಎಸ್ಐಟಿ ವಿಚಾರಣೆ ಹಾಜರುಪಡಿಸಬೇಕಿದೆ. ಐಪಿಎಸ್ ಅಧಿಕಾರಿ ಪುತ್ರನನ್ನ ವಿಚಾರಣೆ ನಡೆಸಿದ ಎಸ್ಐಟಿ ಅಂತರಾಷ್ಟ್ರೀಯ ಹ್ಯಾಕರ್ ಶ್ರೀಕಿ ಜೊತೆ ನಂಟು ಆರೋಪ ಸಂಬಂಧ ಹಿರಿಯ ಹಿರಿಯಐಪಿಎಸ್ ಅಧಿಕಾರಿ ಪುತ್ರ ರಿಷಬ್ ನನ್ನ ಎಸ್ಐಟಿ ವಿಚಾರಣೆ ನಡೆಸಿದೆ.
ಕೆಲ ವರ್ಷಗಳಿಂದ ಐಪಿಎಸ್ ಪುತ್ರನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ ಶ್ರೀಕಿ ಬಿಟ್ ಕಾಯಿನ್ ಬಳಸಿಕೊಂಡು 49 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದ್ದ. ಅದರೆ ಕಾರಿನ ನೋಂದಣಿ ಸಂಖ್ಯೆ ರಿಷಬ್ ಹೆಸರಿನಲ್ಲಿದೆ. ಇತ್ತೀಚೆಗೆ ತುಮಕೂರಿನ ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಬಂಧಿಸಿ ಆತನನ್ನ ವಿಚಾರಣೆಗೆ ಒಳಪಡಿಸಿದಾಗ ಕಾರಿನ ವಿಷಯ ತಿಳಿದುಬಂದಿತ್ತು. ನೊಟೀಸ್ ನೀಡಿ ನಿನ್ನೆ ಐಪಿಎಸ್ ಅಧಿಕಾರಿ ಪುತ್ರನನ್ನ ವಿಚಾರಣೆ ನಡೆಸಿತ್ತು.